ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ದಿ.ಶಂಕರ ಢಾಕಪ್ಪ ಲಮಾಣಿಯವರ ಪುಣ್ಯಸ್ಮರಣಾರ್ಥವಾಗಿ ಪ್ರತಿವರ್ಷ ಕೊಡಮಾಡಲಾಗುವ “ಶಂಕರ ಶ್ರೀ” ದತ್ತಿ ನಿಧಿ ಪುರಸ್ಕಾರಕ್ಕೆ ಈ ವರ್ಷ ನಾಡಿನ ಶ್ರೇಷ್ಠ ಸಾಹಿತಿಗಳಾದ ಡಾ.ಬಾಬು ಕೃಷ್ಣಮೂರ್ತಿ ಯವರನ್ನು ಆಯ್ಕೆ ಮಾಡಲಾಗಿದೆ. “ಗೋರಬಾಯಿ ಟೋಳಿ(ರಿ) ಮಹಿಳಾ ಸಮೂಹ ಸಂಸ್ಥೆ” ವಿಜಯಪುರ ಮತ್ತು ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಬಸವನ ಬಾಗೇವಾಡಿ ಇವರ ಸಂಯುಕ್ತ ಆಶ್ರಯದಲ್ಲಿ ಪ್ರಶಸ್ತಿ ಪ್ರಧಾನ ಕಾರ್ಯಕ್ರಮವು ಡಿಸೆಂಬರ ೧೪ ರಂದು ಬಾಗೇವಾಡಿಯ ಶಂಕರಶ್ರೀ ವನದಲ್ಲಿ ಜರುಗಲಿದೆ. ಈ ಪ್ರಶಸ್ತಿಯೂ ಹತ್ತು ಸಾವಿರ ಗೌರವ ಧನ ಮತ್ತು ಸ್ಮರಣಿಕೆಯನ್ನು ಒಳಗೊಂಡಿರುತ್ತದೆ.
ಡಾ.ಬಾಬು ಕೃಷ್ಣಮೂರ್ತಿಯವರು ಕನ್ನಡ ಸಾಹಿತ್ಯದಲ್ಲಿ ಸುದಿರ್ಘ ಸೇವೆ ಸಲ್ಲಿಸಿದರು. ಸಾಹಿತ್ಯ, ಸಂಸ್ಕೃತಿಯಲ್ಲಿಯೂ ಅಪಾರ ಆಸಕ್ತಿಯುಳ್ಳವರು, ಜೊತೆಗೆ ಕ್ರಿಯಾಶೀಲ ಪ್ರತಿಭೆಗಳನ್ನು ಸೃಜನಶೀಲ ಮನಸ್ಸುಗಳನ್ನು ಪೋಷಿಸುತ್ತಾ ಬಂದವರು. ಕನ್ನಡ ಸಾಹಿತ್ಯ ದ ಮಹಾನ್ ಕನಸುಗಾರರಾಗಿ ಕನಸುಗಳನ್ನು ನನಸಾಗಿಸುವಲ್ಲಿ, ಅವರು ತೋರುವ ಕರ್ತವ್ಯ ನಿಷ್ಠೆ, ದೂರ ದೃಷ್ಟಿ ಸಾಹಿತ್ಯ ಸೇವಾ ಕರ್ತವ್ಯ ನಿಷ್ಠೆ , ಅನನ್ಯವಾದದು. ಚಂದ್ರಶೇಖರ್ ಆಜಾದ್, ಭಗತ್ ಸಿಂಗ್, ವೀರ ಸಾವರ್ಕರ್ ಝಾನ್ಸಿ ರಾಣಿ, ತಾತ್ಯಾಟೋಪಿ, ಕುವರಸಿಂಹ ಹೀಗೆ ಹಲವಾರು ಸ್ವಾತಂತ್ರ್ಯ ಯೋಧರ ಕಥನಗಳಿಗೆ ತಮ್ಮ ಬರಹದ ಮೂಲಕ ಜೀವ ತುಂಬಿದ ಕೀರ್ತಿ ಇವರದ್ದು. ಇವರು ರಚಿಸಿದ ಕೃತಿ “ಅಜಯ” ಅತ್ಯಂತ ಜನಪ್ರಿಯತೆ ಪಡೆದಿದೆ. 1885 ರಿಂದ 1915 ರವರೆಗೆ ನಡೆದ ಸ್ವತಂತ್ರ ಸಂಗ್ರಾಮದ ಸಮಗ್ರ ಚಿತ್ರಣ ನೀಡುವ “ರುದಿರಾಭಿಷೇಕ” ಇವರ ಮಹತ್ವದ ಕೃತಿಗಳು. 1974ರಲ್ಲಿ ಅಜಯ ಮತ್ತು 1984ರಲ್ಲಿ ಅದಮ್ಯ ಕೃತಿಗಳಿಗೆ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಹಾಗೂ ತುಮಕೂರು ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್, 2018 ರಲ್ಲಿ ಉತ್ತರಪ್ರದೇಶದ ಮುಖ್ಯಮಂತ್ರಿಗಳ ಸನ್ಮಾನ ಪ್ರಶಸ್ತಿ ,ಪ್ರೋ,ಕೆ, ಎಸ್ ನಾರಾಯಣಾಚಾರ್ಯ ಸಮ್ಮಾನ ೨೦೨೪, ವೀರ ಸಾವರ್ಕರ್ ರಾಷ್ಟ್ರೀಯ ಪುರಸ್ಕಾರ 2024, ಕನ್ನಡ ಪಿಂಚಣಿ ದಾರರ ಪ್ರಶಸ್ತಿ 2024. ಅಭಾಸಾಪದ ಪಂಪ ಪ್ರಶಸ್ತಿಯು ಇವರ ಸಾಧನೆಗೆ ಸಂದಿವೆ. ಮುಂತಾದ ರಾಜ್ಯ ರಾಷ್ಟ್ರ ಮಟ್ಟದ ಪ್ರಶಸ್ತಿಗಳಿಗೆ ಭೂಷಿತರಾದ ಮಹನೀಯರಲ್ಲಿ ಯಾವತ್ತೂ ಅಹಂ ಸುಳಿಯಲಿಲ್ಲ.

