ಉದಯರಶ್ಮಿ ದಿನಪತ್ರಿಕೆ
ಕೊಲ್ಹಾರ: ಇದೇ ದಿನಾಂಕ ೧೩ ಶುಕ್ರವಾರದಿಂದ ೨೩ ಸೋಮವಾರ ೧೦ ದಿನಗಳ ಕಾಲ ಪಟ್ಟಣದಲ್ಲಿ ಕನ್ನಡ ಗಂಡು ಮಕ್ಕಳ ಪ್ರಾಥಮಿಕ ಶಾಲಾ ಆವರಣದಲ್ಲಿ ಪಟ್ಟಣ ಪಂಚಾಯತ ಮತ್ತು ಶ್ರೀ ಸಂಗಮೇಶ್ವರ ವಿದ್ಯಾವರ್ದಕ ಸಂಘದ ಆಶ್ರಯದಲ್ಲಿ ಹಿಮಾಲಯನ್ ಧ್ಯಾನಯೋಗ ಕಾರ್ಯಕ್ರಮಗಳು ಜರುಗುವದು ಎಂದು ಸಂಘಟಣೆಯ ರೂವಾರಿ ಟಿ.ಟಿ.ಹಗೇದಾಳ, ಕೆ.ಎಸ್.ದೇಸಾಯಿ ಹೇಳಿದರು.
ಪಟ್ಟಣ ಪಂಚಾಯತ ಕಾರ್ಯಾಲಯದಲ್ಲಿ ಜಂಟಿ ಪತ್ರಿಕಾಗೋಷ್ಟಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಅಂದು ಬೆಳಿಗ್ಗೆ ೫.೩೦ ರಿಂದ ೬.೩೦ ರವರೆಗೆ ಯೋಗ ತರಬೇತಿ, ೬ ವರ್ಷದ ಮಕ್ಕಳಿಂದ ೮೦ ವರ್ಷದ ವಯೋವೃದ್ದರವರೆಗೆ ಸರ್ವ ಜನಾಂಗದ ಪುರುಷ, ಮಹಿಳೆಯರು ಯೋಗ ತರಬೇತಿಯನ್ನು ಪಡೆದುಕೊಂಡು ಆರೋಗ್ಯವೃದ್ದಿಯನ್ನು ಹಿಮಾಲಯದಲ್ಲಿ ೬ ವರ್ಷಗಳ ಕಾಲ ಯೋಗ ಸಾಧನೆ ಮಾಡಿರುವ ನಿರಂಜನ ಮಹಾಸ್ವಾಮಿಗಳಿಂದ ಯೋಗಾಬ್ಯಾಸ ಜರುಗುವದು ಎಂದರು.
ಸಾಯಂಕಾಲ ೬.೩೦ ರಿಂದ ೭.೩೦ ರವರೆಗೆ ಪಟ್ಟಣದ ಹಾಗೂ ಸುತ್ತಮುತ್ತಲಿನ ಗ್ರಾಮಗಳಿಂದ ಆಗಮಿಸಿರುವ ಭಕ್ತಾಧಿಗಳಿಗೆ ಸಾಮೂಹಿಕ ಭಜನೆ ಮಾಡುವ ಸಂಪ್ರದಾಯ ಹಾಗೂ ಶ್ರೀಗಳಿಂದ ಆದ್ಯಾತ್ಮಿಕ ಪ್ರವಚನ ಬೋಧನೆ ನಡೆಯುವದು ಈ ಕಾರ್ಯಕ್ರಮದಲ್ಲಿ ಭಾಗವಹಿಸುವ ಸರ್ವರೂ ೫ ನಿಮಿಷ ಮುಂಚಿತವಾಗಿ ಆಗಮಿಸಬೇಕು. ಉಸಿರಾಟದ ಕ್ರಮ, ಜೋಡುಗಳು ಮತ್ತು ಗ್ರಂಥಿಗಳು, ಪ್ರಾಣಾಯಾಮ ಧ್ಯಾನದ ವಿಧಿಗಳು, ವಿವಿಧ ಆಸನಗಳ ಯೋಗ ಕಲಿಕೆ, ಸೂರ್ಯನಮಸ್ಕಾರ, ಇನ್ನೀತರ ಚಟುವಟಿಕೆಗಳು ಜರಗುವವು. ಆಗಮಿಸುವ ಸರ್ವರಿಗೂ ಯೋಗ ಕಲಿಕೆ ಸಮಯದಲ್ಲಿ ಯೋಗಾ ಮ್ಯಾಟ್ ಆಯೋಜಕರು ಒದಗಿಸುವರು. ಸುಮ್ಮನೆ ಬಂದು ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ವಿನಂತಿಸಿದರು.
ಈ ಪತ್ರಿಕಾಗೋಷ್ಟಿಯಲ್ಲಿ ಮುಖಂಡರಾದ ಶ್ರೀಶೈಲ ಪತಂಗಿ, ರಫೀಕ ಪಕಾಲಿ, ಬಿ.ಯು.ಗಿಡ್ಡಪ್ಪಗೋಳ, ಪಟ್ಟಣ ಪಂಚಾಯತ ಸದಸ್ಯರಾದ ಚನಮಲ್ಲಪ್ಪ ಗಿಡ್ಡಪ್ಪಗೋಳ, ಶ್ರೀಶೈಲ ಮುಳವಾಡ, ನಿಂಗಪ್ಪ ಗಣಿ, ಬಾಬು ಭಜಂತ್ರಿ, ಶ್ರೀಶೈಲ ಅಥಣಿ, ದಶರಥ ಈಟಿ, ಅನೇಕರು ಉಪಸ್ಥಿತರಿದ್ದರು. ಇದೇ ವೇಳೆ ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರ ನಿಧನಕ್ಕೆ ಸಂತಾಪ ಸೂಚಕ ಸಭೆಯನ್ನು ಕೂಡ ಮಾಡಲಾಯಿತು. ಒಂದು ನಿಮಿಷದ ಮೌನಾಚರಣೆ ಜರುಗಿತು.

