ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಇತ್ತೀಚಿನ ದಿನದಲ್ಲಿ ದುಡಿಮೆ, ಒಳೆತನ ಮರೆಯಾಗುತ್ತಿದೆ. ಸದಾ ಅಮಾಯಕರು ಕೆಟ್ಟ ದುಶ್ಚಟ, ವಂಚನೆ ಮುಂತಾವುಗಳಿಗೆ ಬಲಿಯಾಗುತ್ತಿದ್ದಾರೆ. ಇಂತಹ ವ್ಯವಸ್ಥೆಯಿಂದ ಸಾರ್ವಜನಿಕರು ಎಚ್ಚೆತ್ತುಕೊಳ್ಳಬೇಕೆಂದು ಗಾನಯೋಗಿ ಸಂಘದ ಅಧ್ಯಕ್ಷ ಪ್ರಕಾಶ ಆರ್.ಕೆ. ಹೇಳಿದರು.
ಅವರು ನಗರದ ಪ್ರಮುಖ ಬೀದಿಗಳಲ್ಲಿ ಸೈಬರ್ ಅಪರಾಧಗಳ ಬಗ್ಗೆ ಜಾಗೃತಿ ಅಭಿಯಾನ ಹಮ್ಮಿಕೊಂಡು ಕೆಲವು ಪೋಸ್ಟರ್ಗಳ ಮೂಲಕ ಸಾರ್ವಜನಿಕರಲ್ಲಿ ಅರಿವು ಮೂಡಿಸುವುದಕ್ಕಾಗಿ ಸಾಮಾಜಿಕ ಜಾಲತಾಣದಲ್ಲಿ ಅಪರಿಚಿತರು ನಿಮ್ಮೊಂದಿಗೆ ಅಶ್ಲೀಲವಾಗಿ ವಿಡಿಯೋ ಕಾಲ್ ಮಾಡಿ ಅದನ್ನು ಸ್ಕ್ರೀನ್ ರೀಕಾರ್ಡಿಂಗ್ ಮಾಡಿ ಹಣಕ್ಕೆ ಆಮಿಷ ಒಡ್ಡುತ್ತಿರುವುದು ಹಲವಾರು ಸಾಮಾಜಿಕ ಜಾಲತಾಣದಲ್ಲಿ ನಾವೆಲ್ಲರೂ ನೋಡುತ್ತಿದ್ದೇವೆ. ಆದರೆ ಯಾರು ಅದರ ಬಗ್ಗೆ ಎಚ್ಚೆತ್ತುಕೊಳ್ಳುತ್ತಿಲ್ಲ. ಇಂತಹದ ಬಲಿಗೆ ಬಿದ್ದು ತಮ್ಮ ಬದುಕನ್ನು ನರಕ ಮಾಡಿಕೊಳ್ಳುತ್ತಿರುವುದು ಖೇದಕರ ಸಂಗತಿಯಾಗಿದೆ. ಕುಟುಂಬದ ನಿರ್ವಹಣೆಗಾಗಿ ಹಗಲು ರಾತ್ರಿ ಲೆಕ್ಕಿಸದೇ ದುಡಿಮೇಯೇ ದುಡ್ಡಿನ ತಾಯಿ ಎಂದು ನ್ಯಾಯಯುತವಾಗಿ ದುಡಿದ ನಿಮ್ಮ ದುಡ್ಡನ್ನು ವಂಚಕರಿಗೆ ಫೋನ್ ಮೂಲಕ ಬ್ಯಾಂಕ್ ಅಕೌಂಟ್ ಡೆಬಿಟ್ ಕಾರ್ಡ್. ಕ್ರೆಡಿಟ್ ಕಾರ್ಡ್ ಹಾಗೂ ಓಟಿಪಿ ಮೆಸೇಜ್ ಯಾರೋಂದಿಗೂ ಹಂಚಿಕೊಳ್ಳಬೇಡಿ. ನಿಮಗೆ ಭಾರಿ ಮೊತ್ತದ ಬಹುಮಾನ ಬಂದಿದೆ ಹಾಗೂ ನಿಮ್ಮ ಮೊಬೈಲ್ ನಂಬರಿಗೆ ಲಕ್ಕಿಡ್ರಾ ಕೋಪನ್ ನೂರಾರು ಉಡಾಫೆ ಆಸೆ ಆಮಿಷೆಗಳನ್ನು ಒಡ್ಡಿ ನಂಬಿಸಿ ದ್ರೋಹ ಬಗೆಯುವವರಿಂದ ಎಚ್ಚೆತ್ತುಕೊಳ್ಳಬೇಕು. ಹಾಗೂ ಮುಖ್ಯವಾಗಿ ಸಾರ್ವಜನಿಕರು ವಂಚನೆಗೊಳಗಾದರೆ ಅಥವಾ ದುಡ್ಡನ್ನು ಕಳೆದುಕೊಂಡರೆ ಇನ್ನೀತರ ಸೈಬರ್ ಅಪರಾಧಗಳ ಬಗ್ಗೆ ಹೆಲ್ಪ್ ಲೈನ್ ನಂ. ೧೯೩೦ ಈ ನಂಬರೆ ಕರೆ ಮಾಡಿ ಆನ್ಲೈನ್ ಮೂಲಕ ಪ್ರಕರಣ ದಾಖಲಿಸಬೇಕು ಎಂದು ಮುಂತಾದ ಪ್ರಮುಖ ವಿಷಯಗಳ ಕುರಿತು ಜಾಗೃತಿ ಮೂಡಿಸಿದರು.
ಈ ಸಂದರ್ಭದಲ್ಲಿ ಮಹೇಶ ಕುಂಬಾರ, ಬಾಹುಬಲಿ ಶಿವಣ್ಣವರ, ರಾಜಕುಮಾರ ಹೊಸಟ್ಟಿ, ವಿರೇಶ ಸೊನ್ನಲಗಿ, ಸಚೀನ ವಾಲಿಕಾರ, ವಿಠ್ಠಲ ಗುರುವಿನ, ರವಿ ರತ್ನಾಕರ, ಸಂತೋಷ ಚವ್ಹಾಣ, ವಿಕಾಸ ಕಂಬಾಗಿ, ರೇವಣಸಿದ್ದಯ್ಯ ಹಿರೇಮಠ ಇನ್ನಿತರರು ಇದ್ದರು.

