ನ್ಯಾಯಾಲಯದ ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಇತ್ಯರ್ಥಪಡಿಸಿಕೊಳ್ಳಲು ಅವಕಾಶ
ಉದಯರಶ್ಮಿ ದಿನಪತ್ರಿಕೆ
ಮುದ್ದೇಬಿಹಾಳ: ಡಿ.೧೪ ರಂದು ಪಟ್ಟಣದ ನ್ಯಾಯಾಲಯದಲ್ಲಿ ರಾಷ್ಟ್ರೀಯ ಲೋಕ್ ಅದಾಲತ್ಅನ್ನು ಹಮ್ಮಿಕೊಳ್ಳಲಾಗಿದೆ. ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಇತ್ಯರ್ಥಪಡಿಸಿಕೊಳ್ಳಲು ಇಚ್ಛಿಸಿರುವ ಪಕ್ಷಗಾರರು ತಮ್ಮ ವಕೀಲರಿಗೆ ಭೇಟಿ ಮಾಡಿ ನಿಮ್ಮ ಪ್ರಕರಣಗಳನ್ನು ರಾಜೀ ಸಂಧಾನದ ಮೂಲಕ ಇತ್ಯರ್ಥಪಡಿಸಿಕೊಳ್ಳಬಹುದು ಎಂದು ಇಲ್ಲಿನ ಹಿರಿಯ ಹಿರಿಯ ಶ್ರೇಣಿ ಸಿವಿಲ್ ನ್ಯಾಯಾಧೀಶರಾದ ರವೀಂದ್ರಕುಮಾರ ಕಟ್ಟಿಮನಿ ಹೇಳಿದರು.
ಪಟ್ಟಣದ ನ್ಯಾಯಾಲಯದಲ್ಲಿ ರಾಷ್ಟ್ರೀಯ ಲೋಕ್ ಅಧಾಲತ್ ಕುರಿತು ಹಮ್ಮಿಕೊಳ್ಳಲಾಗಿದ್ದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.
ಪ್ರಕರಣಗಳು ಬಹು ಬೇಗನೇ ಇತ್ಯರ್ಥವಾಗದ ಹಿನ್ನೆಲೆ ರಾಷ್ಟ್ರೀಯ ಲೋಕ್ ಅದಾಲತ್ನಲ್ಲಿ ರಾಜಿ ಸಂಧಾನದ ಮೂಲಕ ಇತ್ಯರ್ಥಪಡಿಸಿಕೊಂಡು ತುರ್ತು ನ್ಯಾಯ ಪಡೆದುಕೊಳ್ಳಲು ಪಕ್ಷಗಾರರಿಗೆ ಕಾನೂನು ಸೇವಾ ಸಮಿತಿಯ ವತಿಯಿಂದ ಅವಕಾಶ ಕಲ್ಪಿಸಿ ಕೊಡಲಾಗಿದೆ. ಇದರ ಸದುಪಯೋಗವನ್ನು ಪಡೆದುಕೊಂಡಲ್ಲಿ ಶೀಘ್ರವಾಗಿ ನಿಮ್ಮ ಪ್ರಕರಣಗಳನ್ನು ಇತ್ಯರ್ಥಪಡಿಸಿಕೊಳ್ಳಬಹುದು. ಪ್ರಕರಣಗಳನ್ನು ಲೋಕ್ ಅದಾಲತ್ ನಲ್ಲಿ ಇತ್ಯರ್ಥಪಡಿಸಿ ಅದಾಲತ್ ಅನ್ನು ಯಶಶ್ವಿಗೊಳಿಸಲು ನ್ಯಾಯವಾದಿಗಳು ಸಹಕಾರ ನೀಡುವಂತೆ ತಾಲೂಕು ಕಾನೂನು ಸೇವಾ ಸಮಿತಿಯ ವತಿಯಿಂದ ಮನವಿ ಮಾಡುವದಾಗಿ ತಿಳಿಸಿದರು.
ಕಿರಿಯ ಶ್ರೇಣಿ ಸಿವಿಲ್ ನ್ಯಾಯಾಧೀಶರಾದ ಸಂಪತ್ತಕುಮಾರ ಬಳೂಲಗಿಡದ ಅವರು ಮಾತನಾಡಿ ಲೋಕ್ ಅದಾಲತ್ ನಲ್ಲಿ ಪ್ರಕರಣಗಳನ್ನು ಇತ್ಯರ್ಥಪಡಿಸುವಲ್ಲಿ ನಮ್ಮ ನ್ಯಾಯಾಲಯ ಕಳೆದ ಬಾರಿ ಮೊದಲನೆಯ ಸ್ಥಾನ ಪಡೆದಿದ್ದು ಈ ಬಾರಿಯೂ ಮೊದಲನೆಯ ಸ್ಥಾನ ಪಡೆಯುವಲ್ಲಿ ಪ್ರಯತ್ನಿಸೋಣ ಎಂದರು.
ನ್ಯಾಯವಾದಿಗಳ ಸಂಘದ ಅಧ್ಯಕ್ಷ ಎಸ್.ಎಸ್.ಮಾಲಗತ್ತಿ ಮಾತನಾಡಿ, ಪ್ರಕರಣಗಳನ್ನು ರಾಜಿ ಮೂಲಕ ಇತ್ಯರ್ಥಪಡಿಸಲು ಎಲ್ಲ ನ್ಯಾಯವಾದಿಗಳು ಸಹಕರಿಸುವದಾಗಿ ಸಂಘದ ಪರವಾಗಿ ತಿಳಿಸಿದರು.
ಈ ವೇಳೆ ಸಂಘದ ಉಪಾಧ್ಯಕ್ಷ ಎಚ್.ಜಿ.ನಾಗೋಡ, ಅಪರ ಸರ್ಕಾರಿ ವಕೀಲ ಎಚ್.ಎಲ್.ಸರೂರ, ಹಿರಿಯ ನ್ಯಾಯವಾದಿಗಳಾದ ಎಂ.ಎಚ್.ಹಾಲಣ್ಣವರ, ಎಸ್.ಎಂ.ಗುಡದಿನ್ನಿ, ವಿ.ಜಿ.ಮದರಕಲ್ಲ, ಎಸ್.ಆರ್.ಸಜ್ಜನ, ಎಂ.ಆರ್.ಪಾಟೀಲ, ನ್ಯಾಯವಾದಿಗಳಾದ ಎಸ್.ಆರ್.ಜೋಗಿ, ಎಲ್.ಎಸ್.ಮೇಟಿ, ಚೇತನ ಶಿವಶಿಂಪಿ, ಎಸ್.ಎಚ್.ಚಳ್ಳಗಿ, ಎಸ್.ಎಂ.ಕಿಣಗಿ, ಬಸಣ್ಣ ಮುಂದಿನಮನಿ, ಸಿ.ಎಂ.ಅಸ್ಕಿ, ಎಚ್.ವಾಯ್.ಪಾಟೀಲ, ರವಿ ನಾಲತವಾಡ, ರವೀಂದ್ರ ತುಪ್ಪದ, ಎನ್.ಐ.ಕೇಸಾಪೂರ, ಎನ್.ಬಿ.ಮುದ್ನಾಳ, ಬಿ.ಎ.ನಾಡಗೌಡರ, ಸಿದ್ದಯ್ಯ ಹಿರೇಮಠ, ಎಚ್.ಟಿ.ಪೂಜಾರಿ, ಎಸ್.ಬಿ.ಬಾಚಿಹಾಳ, ಎಚ್.ಡಿ.ಅನಂತಪೂರ, ಶ್ರೀದೇವಿ ರಾಜೂರ, ರೇಣುಕಾ ಪಾಟೀಲ, ಬಿ.ವಾಯ್.ಮೇಟಿ ತಾಲೂಕು ಕಾನೂನು ಸೇವಾ ಸಮಿತಿಯ ಆಡಳಿತ ಸಹಾಯಕ ಅರವಿಂದ ಕುಂಬಾರ, ದಲಾಯತ್ ಮಹಾಂತೇಶ ಹಚರೆಡ್ಡಿ ಸೇರಿದಂತೆ ಮತ್ತೀತರರು ಇದ್ದರು. ಸಂಘದ ಪ್ರಧಾನ ಕಾರ್ಯದರ್ಶಿ ಪಿ.ಬಿ.ಗೌಡರ ಕಾರ್ಯಕ್ರಮ ನಿರ್ವಹಿಸಿದರು.

