ಬಿ.ಎಲ್.ಡಿ.ಇ.ಸಂಸ್ಥೆಯ ಎಸ್.ಬಿ ಕಲಾ ಮತ್ತು ಕೆ.ಸಿ.ಪಿ ವಿಜ್ಞಾನ ಮಹಾವಿದ್ಯಾಲಯದಿಂದ ನಡೆದ ಕ್ಷೇತ್ರ ವರದಿಗಾರಿಕೆ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ವಿದ್ಯಾರ್ಥಿಗಳಿಗೆ ಕ್ಷೇತ್ರ ವರದಿಗಾರಿಕೆ ವೃತ್ತಿ ಕೌಶಲ್ಯ ಹೆಚ್ಚಿಸುವುದರ ಜೊತೆಗೆ ಸೃಜನಾತ್ಮಕ ಬರವಣಿಗೆಗೆ ಸಹಕಾರಿಯಾಗುತ್ತದೆ ಎಂದು ಎಸ್.ಬಿ.ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದ ಪ್ರೊ.ಮಲಿಕ್ ಜಮಾದಾರ ಹೇಳಿದರು.
ನಗರದ ಎಸ್.ಬಿ.ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ವತಿಯಿಂದ ವಿದ್ಯಾರ್ಥಿಗಳಿಗೆ ಹಮ್ಮಿಕೊಳ್ಳಲಾಗಿದ್ದ ಆದಿಲ್ ಶಾಹಿ ಐತಿಹಾಸಿಕ ಕುಮಟಗಿ ಕೆರೆ ಕ್ಷೇತ್ರ ವರದಿಗಾರಿಕೆ ವಿಶೇಷ ಭೇಟಿ ನೀಡಿ ಮಾತನಾಡಿದ ಅವರು, ವೃತ್ತಿ ಜೀವನಕ್ಕೆ ಕೌಶಲ್ಯ ಅತೀ ಮುಖ್ಯ ಎಂದರು.
ಪತ್ರಿಕೋದ್ಯಮ ನಿರಂತರ ಕ್ರಿಯಾಶೀಲತೆ ಬೇಡುತ್ತದೆ. ಓದುಗರಿಗೆ ನಿತ್ಯ ಹೊಸದನ್ನು ಕೊಡುವ ಜವಾಬ್ದಾರಿ ನಿಭಾಯಿಸುವುದು ಅತ್ಯಂತ ಕಷ್ಟದ ಕೆಲಸ. ಅದರಲ್ಲೂ ನಾವು ಕಂಪ್ಯೂಟರ್ ಹಾಗೂ ಸ್ಪರ್ಧಾತ್ಮಕ ಯುಗದಲ್ಲಿ ಕಾರ್ಯನಿರ್ವಹಿಸಬೇಕಾಗಿರುವುದರಿಂದ ವೃತ್ತಿ ಬದುಕು ಕಠಿಣ ಅನುಭವಗಳನ್ನು ನೀಡುತ್ತದೆ ಹಾಗಾಗಿ ನಾವು ವಿದ್ಯಾರ್ಥಿ ಜೀವನದಲ್ಲೇ ಎಲ್ಲವನ್ನು ಅರ್ಥ ಮಾಡಿಕೊಳ್ಳುವ ಪ್ರಯತ್ನ ಮಾಡಬೇಕು ಎಂದು ಹೇಳಿದರು.
ವಿದ್ಯಾರ್ಥಿಗಳಿಗೆ ಪಾಠ ಎಷ್ಟು ಮುಖ್ಯವೋ ಪ್ರಯೋಗತ್ಮಕ ಕಲಿಕೆಯು ಅಷ್ಟೇ ಮಹತ್ವ ಹೊಂದಿದೆ. ಇಂತಹ ಕ್ಷೇತ್ರ ವರದಿಗಾರಿಕೆಗೆ ನಾವು ಹಾಜರಾಗಿ ನಮ್ಮ ವೃತ್ತಿ ಕೌಶಲ್ಯ ಹೆಚ್ಚಿಸಿಕೊಳ್ಳಬೇಕು ಎಂದು ಹೇಳಿದರು.
ಪ್ರೊ.ಎಸ್.ಬಿ.ಮನೂರ ಮಾತನಾಡಿ, ಕ್ಷೇತ್ರ ವರದಿಗಾರಿಕೆ ಪತ್ರಕರ್ತರಲ್ಲಿ ವಿಶೇಷ ಕೌಶಲ್ಯ ಬೇಡುತ್ತದೆ. ಐತಿಹಾಸಿಕ ಆದಿಲ್ ಶಾಹಿ ಬೇಸಿಗೆ ಅರಮನೆ ಹಲವು ತಾಂತ್ರಿಕ ವಿಶೇಷತೆಗಳನ್ನು ಹೊಂದಿದೆ. ಸುಮಾರು ೩೦೦ ವರ್ಷಗಳ ಹಿಂದೆಯೇ (ಆಧುನಿಕ ಸ್ವೀಮ್ಮಿಂಗ್ ಪೂಲ್) ಆಧುನಿಕ ಈಜುಗೋಳವನ್ನು ನಿರ್ಮಿಸಿಕೊಂಡಿದ್ದರು. ಅಲ್ಲದೇ ಅಲ್ಲಿನ ನೀರಿನ ಸ್ವಚ್ಛತೆ ಈಜುಕೊಳದಲ್ಲಿ ಸ್ನಾನ ಗೃಹ, ಬಟ್ಟೆ ಬದಲಾಯಿಸುವ ಕೋಣೆ, ಟಬ್ ಮಾದರಿಯ ಅತ್ಯಾದುನಿಕ ಸೌಲಭ್ಯಗಳನ್ನು ಹೊಂದಿದೆ ಇದನ್ನು ವರದಿ ಮಾಡುವ ಮೂಲಕ ಹೊರ ಜಗತ್ತಿಗೆ ಪರಿಚಯಿಸಬೇಕು ಎಂದು ಹೇಳಿದರು.
ಕೃಷಿ, ನೈಸರ್ಗಿಕ ವೈವಿಧ್ಯ, ನಿತ್ಯ ಸ್ಥಳೀಯವಾಗಿ ನಡೆಯುವ ಘಟನಾವಳಿಗಳನ್ನು ವಿದ್ಯಾರ್ಥಿ ಈಗಿನಿಂದಲೇ ವರದಿ ಮಾಡುವುದನ್ನು ಕಲಿಯಬೇಕು ಎಂದು ಹೇಳಿದರು.

