ಉದಯರಶ್ಮಿ ದಿನಪತ್ರಿಕೆ
ದೇವರಹಿಪ್ಪರಗಿ: ವಿಜಯಪುರದ ಜ್ಞಾನ ಯೋಗಾಶ್ರಮದ ಶತಮಾನದ ಸಂತ ಸಿದ್ದೇಶ್ವರ ಶ್ರೀಗಳ ನುಡಿಗಳು ಸಾರ್ವಕಾಲಿಕ ಸತ್ಯವಾಗಿರುವ ನುಡಿಗಳಾಗಿದ್ದು ನಾವೆಲ್ಲರೂ ಸಿದ್ದೇಶ್ವರ ಶ್ರೀಗಳ ಅನುಭವಾಮೃತವನ್ನು ಮುಂದಿನ ಪೀಳಿಗೆಗೂ ಕೂಡ ತಲುಪಿಸೋಣ ಎಂದು ನಾಗಠಾಣದ ಪ್ರಜ್ಞಾನಂದ ಶ್ರೀಗಳು ಹೇಳಿದರು.
ತಾಲ್ಲೂಕಿನ ಮುಳಸಾವಳಗಿ ಗ್ರಾಮದ ಕಂಬಿ ಮಲ್ಲಯ್ಯನ ದೇವಸ್ಥಾನದಲ್ಲಿ ಇತ್ತೀಚಿಗೆ ಜರುಗಿದ ಗುರುನಮನ ಹಾಗೂ ಸತ್ಸಂಗ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.ಸತ್ಯವಂತರ ಸಂಗವಿರಲು ತೀರ್ಥವೇತಕೆ ನಿತ್ಯ ಜ್ಞಾನಿಯಾದ ಮೇಲೆ ಚಿಂತೆಯೇತಕೆ ಎಂಬ ಸಂತ ಕನಕದಾಸರ ವಾಣಿಯಂತೆ ಸಿದ್ಧೇಶ್ವರಶ್ರೀಗಳ ನಡೆ ನುಡಿಯನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳೋಣ ಎಂದರು.
ಮುಳಸಾವಳಗಿ ಗ್ರಾಮದ ಸಿದ್ದಾರೂಢ ಆಶ್ರಮದ ದಯಾನಂದ ಸ್ವಾಮೀಜಿ, ವಿಜಯಪುರದ ಜ್ಞಾನ ಯೋಗಾಶ್ರಮದ ಗಿರಿಜಾನಂದ , ಬ್ರಹ್ಮಾನಂದ, ,ಬಸವಪ್ರಸಾದ ಸ್ವಾಮೀಜಿಗಳು, ಸ್ಥಳೀಯ ನಿಂಗರಾಯ ಮಹಾರಾಜರು ಆಶೀರ್ವಚನ ನೀಡಿದರು
ಕಾರ್ಯಕ್ರಮದ ಅಂಗವಾಗಿ ಗ್ರಾಮದ ಶ್ರೀಹನುಮಾನ ದೇವಸ್ಥಾನದಿಂದ ಮಲ್ಲಯ್ಯನ ದೇವಸ್ಥಾನದವರೆಗೆ ಸಿದ್ದೇಶ್ವರ ಶ್ರೀಗಳ ಭಾವಚಿತ್ರದ ಭವ್ಯ ಮೆರವಣಿಗೆ ಮಾಡಲಾಯಿತು.
ಪೂಜ್ಯರು, ಗುರುಹಿರಿಯರು, ಸುಮಂಗಲೆಯರು, ಮಕ್ಕಳು, ಸಿದ್ದೇಶ್ವರ ಶ್ರೀಗಳ ವೇಷಧರಿಸಿದ ಶಾಲಾ ಮಕ್ಕಳು ಈ ಮೆರವಣಿಗೆಯಲ್ಲಿ ಭಕ್ತಿಭಾವದಿಂದ ಪಾಲ್ಗೊಂಡಿದ್ದರು. ಸಿದ್ದೇಶ್ವರ ಶ್ರೀಗಳ ಸಂತನೆಂದರೆ ಗೀತೆಯನ್ನು ಹಾಕುವುದರ ಮೂಲಕ ಸಿದ್ದೇಶ್ವರ ಶ್ರೀಗಳ ವೇಷಧಾರಿ ಮಗುವಿನಿಂದ ಸಸಿಗೆ ನೀರೆರೆಯುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು.
ಗ್ರಾಮದ ಬಸವರಾಜ ಕಲ್ಲೂರ, ಕಲ್ಲಪ್ಪ ಮೂಲಿಮನಿ, ಹಣಮಂತ್ರಾಯ ಹಿರೂರ, ಬಸವರಾಜ ಬಮ್ಮನಳ್ಳಿ, ಜಿ.ಪಿ.ಬಿರಾದಾರ, ಸಂಗನಗೌಡ ಬಿರಾದಾರ, ಮಡಿವಾಳಪ್ಪ ಕುಂಬಾರ, ಚನ್ನು ಹದರಿ, ಮಲ್ಕು ಸುರಗಿಹಳ್ಳಿ, ಹಣಮಂತ್ರಾಯ ಬಿರಾದಾರ, ಸಿದ್ದಪ್ಪ ನಾಗರಳ್ಳಿ, ಸುರೇಶ ಉಕುಮನಾಳ, ಸಿದ್ದು ಬಿರಾದಾರ, ಶಂಕರಗೌಡ ಬಿರಾದಾರ, ದಾವುಲ್ಸಾಬ್ ಗಂಗೂರ, ರಮೇಶ ರಾಠೋಡ ಸಹಿತ ಮಹಿಳೆಯರು, ಮಕ್ಕಳು ಇದ್ದರು.

