Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

ಮಾರ್ಚ್ ೧೮ ರಿಂದ ಏಪ್ರೀಲ್ ೨ ವರೆಗೆ ಎಸ್ಸೆಸ್ಸೆಲ್ಸಿ ಪರೀಕ್ಷೆ

ಮಹಿಳೆ ಒಂದು ವಿಶ್ವವಿದ್ಯಾನಿಲಯಕ್ಕೆ ಸಮ :ಡಾ.ಮೀನಾ ಚಂದಾವರಕರ

ಹೆಣ್ಣುಮಕ್ಕಳು ದೈಹಿಕವಾಗಿ ಸಬಲರಾಗಿರುವುದು ಮುಖ್ಯ :ಸೋಮನಾಳ

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»(ರಾಜ್ಯ ) ಜಿಲ್ಲೆ»ಭಾರತೀಯ ಸೈನಿಕರ ಸೇವೆ ಶ್ಲಾಘನೀಯ :ಬನಸೋಡೆ
(ರಾಜ್ಯ ) ಜಿಲ್ಲೆ

ಭಾರತೀಯ ಸೈನಿಕರ ಸೇವೆ ಶ್ಲಾಘನೀಯ :ಬನಸೋಡೆ

By Updated:No Comments2 Mins Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

ನಿವೃತ್ತಿಗೊಂಡ ರಮಾನಂದ ಸ್ವಗ್ರಾಮಕ್ಕೆ ಆಗಮನ | ಅದ್ದೂರಿ ಸ್ವಾಗತ ಮತ್ತು ಗೌರವ

ಉದಯರಶ್ಮಿ ದಿನಪತ್ರಿಕೆ

ಚಡಚಣ: ಮಳೆ, ಬಿಸಿಲು, ಚಳಿಯನ್ನು ಲೆಕ್ಕಿಸದೇ ಕುಟುಂಬದ ಬಗ್ಗೆ ಚಿಂತಿಸದೇ ದೇಶ ರಕ್ಷಣೆಗಾಗಿ ತ್ಯಾಗಿಯಾಗಿ ಸೇವೆಯನ್ನು ಸಲ್ಲಿಸುತ್ತಿರುವ ಭಾರತೀಯ ಸೈನಿಕರ ಸೇವೆ ನಿಜಕ್ಕೂ ಶ್ಲಾಘನೀಯವಾದುದು ಎಂದು ನಿವೃತ್ತ ಶಿಕ್ಷಕ ಎಚ್.ಎಸ್.ಬನಸೋಡೆ ಹೇಳಿದರು.
ಮಂಗಳವಾರದಂದು ಶಿರಾಡೋಣ ಗ್ರಾಮದ ಬೀರೇಶ್ವರ ದೇವಾಸ್ಥಾನದ ಆವರಣದಲ್ಲಿ ಗ್ರಾಮದ ಅಭಿಮಾನ ಬಳಗ ಹಾಗೂ ಗೆಳೆಯರ ಬಳಗದವರು ಸೇರಿದಂತೆ ಗ್ರಾಮಸ್ಥರ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ೨೪ ವರ್ಷ ಸೇನೆಯಲ್ಲಿ ಸೇವೆ ಸಲ್ಲಿಸಿ ಸ್ವಗ್ರಾಮಕ್ಕೆ ಆಗಮಿಸಿದ ನಿವೃತ್ತ ಯೋಧ ರಮಾನಂದ ಭೀಮಾಶಂಕರ ಕುಲಕರ್ಣಿ ಅವರ ಸ್ವಾಗತ ಮತ್ತು ಸನ್ಮಾನ ಸಮಾರಂಭದ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಅವರು. ಸೈನ್ಯಕ್ಕೆ ಸೇರಬೇಕಾದರೇ ಪುಣ್ಯ ಮಾಡಿರಬೇಕು. ಅಂತಹ ಪಣ್ಯ ರಮಾನಂದ ಕುಲಕರ್ಣಿರವರು ಪಡೆದುಕೊಂಡು ಬಂದಿದ್ದರೂ ಎನ್ನುವುದರಿಂದಲೇ ಅವರ ೨೪ ವರ್ಷ ಸೇನೆಯಲ್ಲಿನ ಸುದೀರ್ಘ ಭಾರತಾಂಭೆ ಸೇವೆಗೆ ಇಂದು ಗೌರವ ಸಿಕ್ಕಂತಾಗಿದೆ. ರಮಾನಂದ ಅವರಂತೆ ಈ ಗ್ರಾಮದಲ್ಲಿ ಇನ್ನು ಮುಂದೆ ನೂರಾರು ಸಂಖ್ಯೆ ಯುವಕರು ಸೈನ್ಯವನ್ನು ಸೇರುವಂತಾಗಲಿ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಾಜಿ ಸೈನಿಕ ಮಹಾದೇವ ಪೂಜಾರಿ ಮಾತನಾಡುತ್ತ, ದೇಶದ ಏಳ್ಗೆ ಮತ್ತು ರಕ್ಷಣೆ ದೇಶದ ಅನ್ನದಾತ ಮತ್ತು ಗಡಿ ಕಾಯುವ ಯೋಧರಿಂದ ಮಾತ್ರ ಸಾಧ್ಯ ಅಂತ ಮಾಜಿ ಪ್ರಧಾನಿಮಂತ್ರಿ ಲಾಲ್ ಬಹುದ್ದೂರ ಶಾಸ್ತ್ರೀ ತಿಳಿದುಕೊಂಡು ಜೈ ಜವಾನ ಮತ್ತು ಜೈ ಕಿಸಾನ ಘೋಷ ವಾಕ್ಯವನ್ನು ಹೇಳಿದ್ದಾರೆ ಎಂದರು.
ಚಡಚಣ ತಾಲೂಕು ಮಾಜಿ ಸೈನಿಕ ಸಂಘದ ಅಧ್ಯಕ್ಷ ಕಾಂತುಗೌಡ ಪಾಟೀಲ ಮಾತನಾಡುತ್ತ. ಸೈನಿಕನಿಗೆ ದೇಶ ರಕ್ಷಣೆಯೊಂದೇ ಗುರಿ. ಸೈನಿಕನ ಜೀವನ ಕಷ್ಟಗಳ ಪರ್ವತವಿದ್ದಂತೆ, ಕಷ್ಟಗಳನ್ನೇ ಸುಖವನ್ನಾಗಿ ಭಾವಿಸಿ ಒಗ್ಗಿಕೊಳ್ಳುವವನೇ ಸೈನಿಕ ಎಂದರು.
ನಿವೃತ್ತಿಗೊಂಡು ಸ್ವಗ್ರಾಮಕ್ಕೆ ಮರಳಿದ ಯೋಧ ರಮಾನಂದ ಕುಲಕರ್ಣಿ ಮಾತನಾಡಿ, ದೇಶ ರಕ್ಷಣೆ ಜವಾಬ್ದಾರಿ ಬಹಳ ಕಷ್ಟವಿದ್ದರೂ ಅದನ್ನು ಸಂತಸದಿಂದ ತಾಯಿ ಭಾರತಾಂಬೆ ರಕ್ಷಣೆ ಮಾಡುತ್ತಿದ್ದೇನಲ್ಲ ಎನ್ನುವ ಹೆಮ್ಮೆಯಿಂದ ೨೪ ವರ್ಷ ಸಾರ್ಥಕ ಸೇವೆಯನ್ನು ಸಲ್ಲಿಸಿದ್ದೇನೆ. ಇನ್ನೊಂದು ಜನ್ಮ ಅಂತಾ ಇದ್ದರೇ ನಾನು ಮತ್ತೇ ಸೈನಿಕನಾಗಿ ಭಾರತ ಮಾತೆಯ ಸೇವೆ ಮಾಡಲು ಸಿದ್ಧ ಎಂದರು.
ಈ ವೇಳೆ ಗ್ರಾಮದ ನಿವೃತ್ತ ಯೋಧರಿಗೂ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ನಿವೃತ್ತಿಯಾಗಿ ಸ್ವಗ್ರಾಮಕ್ಕೆ ಮರಳಿದ ಸೈನಿಕ ರಮಾನಂದ ಕುಲಕರ್ಣಿ ದಂಪತಿಯವರಿಗೆ ಗಣ್ಯರು, ಸ್ನೇಹಿತರು, ಹಿತೈಸಿಗಳು, ಕುಟುಂಬ ವರ್ಗ ಮತ್ತು ಸಂಬಂಧಿಕರು ಸನ್ಮಾನಿಸಿ ಗೌರವಿಸಿದರು. ಕಾರ್ಯಕ್ರಮದ ಸ್ವಾಗತವನ್ನು ಎಂ.ಎಲ್.ಪಾಂಡ್ರೆ, ವಂದನಾರ್ಪಣೆಯನ್ನು ವಿಜಯಕುಮಾರ ಸಾತಪುತೆ ಹಾಗೂ ನಿರೂಪಣೆಯನ್ನು ಆರ್.ಎಂ.ಚೋಪಡೆ ನೆರವೇರಿಸಿದರು.

ತೆರೆದ ವಾಹನದಲ್ಲಿ ಮೆರವಣಿಗೆ

ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಬೀರೇಶ್ವರ ಪ್ರೌಢ ಶಾಲೆ ವಿದ್ಯಾರ್ಥಿಗಳು ವಿವಿಧ ನೃತ್ಯಗಳ ಮೂಲಕ ಗ್ರಾಮಸ್ಥರೊಂದಿಗೆ ಹನುಮಾನ ದೇವಾಸ್ಥಾನದಿಂದ ಗ್ರಾಮದ ಪ್ರಮುಖ ಬೀದಿಗಳಲ್ಲಿ ಭಾರತಾಂಬೆಗೆ ಪುಷ್ಪಾರ್ಚನೆಗೈದ ನಿವೃತ್ತ ಯೋಧರನ್ನು ತೆರೆದ ವಾಹನದಲ್ಲಿ ಮೆರವಣಿಗೆ ಮೂಲಕ ಬೀರಲಿಂಗೇಶ್ವರ ದೇವಾಸ್ಥಾನದ ಆವರಣದಲ್ಲಿರುವ ಭವ್ಯ ವೇದಿಕೆಗೆ ಕರೆತರಲಾಯಿತು.

BIJAPUR NEWS public public news udaya rashmi Udayarashmi today newspaper udayarashminews.com
Share. Facebook Twitter Pinterest Email Telegram WhatsApp
  • Website

Related Posts

ಮಾರ್ಚ್ ೧೮ ರಿಂದ ಏಪ್ರೀಲ್ ೨ ವರೆಗೆ ಎಸ್ಸೆಸ್ಸೆಲ್ಸಿ ಪರೀಕ್ಷೆ

ಮಹಿಳೆ ಒಂದು ವಿಶ್ವವಿದ್ಯಾನಿಲಯಕ್ಕೆ ಸಮ :ಡಾ.ಮೀನಾ ಚಂದಾವರಕರ

ಹೆಣ್ಣುಮಕ್ಕಳು ದೈಹಿಕವಾಗಿ ಸಬಲರಾಗಿರುವುದು ಮುಖ್ಯ :ಸೋಮನಾಳ

ನೀರು ಒದಗಿಸುವ ಕಾರ್ಯ ಮಾನವೀಯತೆಯ ಪವಿತ್ರ ಸೇವೆ

Add A Comment

Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Uncategorized
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • ಮಾರ್ಚ್ ೧೮ ರಿಂದ ಏಪ್ರೀಲ್ ೨ ವರೆಗೆ ಎಸ್ಸೆಸ್ಸೆಲ್ಸಿ ಪರೀಕ್ಷೆ
    In (ರಾಜ್ಯ ) ಜಿಲ್ಲೆ
  • ಮಹಿಳೆ ಒಂದು ವಿಶ್ವವಿದ್ಯಾನಿಲಯಕ್ಕೆ ಸಮ :ಡಾ.ಮೀನಾ ಚಂದಾವರಕರ
    In (ರಾಜ್ಯ ) ಜಿಲ್ಲೆ
  • ಹೆಣ್ಣುಮಕ್ಕಳು ದೈಹಿಕವಾಗಿ ಸಬಲರಾಗಿರುವುದು ಮುಖ್ಯ :ಸೋಮನಾಳ
    In (ರಾಜ್ಯ ) ಜಿಲ್ಲೆ
  • ನೀರು ಒದಗಿಸುವ ಕಾರ್ಯ ಮಾನವೀಯತೆಯ ಪವಿತ್ರ ಸೇವೆ
    In (ರಾಜ್ಯ ) ಜಿಲ್ಲೆ
  • ಕಾಲುವೆ ಕಾಮಗಾರಿ ಮಾಡದ ಕುರಿತು ರೈತರಿಂದ ಮನವಿ
    In (ರಾಜ್ಯ ) ಜಿಲ್ಲೆ
  • ಮಡಿವಾಳ ಸಮುದಾಯ ಪ.ಜಾತಿಗೆ ಸೇರಿಸುವಂತೆ ಅಹೋರಾತ್ರಿ ಧರಣಿ
    In (ರಾಜ್ಯ ) ಜಿಲ್ಲೆ
  • ನೂತನ ಎಸ್.ಡಿ.ಎಂ.ಸಿ ರಚನೆ
    In (ರಾಜ್ಯ ) ಜಿಲ್ಲೆ
  • ಎಲ್ಲ ರಂಗದಲ್ಲೂ ಉನ್ನತ ಸಾಧನೆಯ ನಗೆ ಬೀರಿದ ಮಹಿಳೆ
    In (ರಾಜ್ಯ ) ಜಿಲ್ಲೆ
  • ಆಕ್ಷಪರ್ಡ ಚೌಧರಿ ಕೋಚಿಂಗ್ ಕ್ಲಾಸಿಸ್ ಗಮನಾರ್ಹ ಸಾಧನೆ
    In (ರಾಜ್ಯ ) ಜಿಲ್ಲೆ
  • ರಾಜಕೀಯ-ಆರ್ಥಿಕ ಕ್ಷೇತ್ರದಲ್ಲಿ ಮಹಿಳೆಯರು ಮುನ್ನಡೆಯಬೇಕು :ಬೆಳ್ಳಿ
    In (ರಾಜ್ಯ ) ಜಿಲ್ಲೆ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2026 udayarashminews.com. Designed by udayarashmi news .

Type above and press Enter to search. Press Esc to cancel.