ಉದಯರಶ್ಮಿ ದಿನಪತ್ರಿಕೆ
ವರದಾನಿ ಲಕ್ಕಮ್ಮದೇವಿ ಪ್ರದಾನ ವೇದಿಕೆ
ಇವಣಗಿ(ಬಸವನಬಾಗೇವಾಡಿ): ಕನ್ನಡ ಸಾಹಿತ್ಯಕ್ಕೆ ೨೫೦೦ ವಷ೯ಗಳ ಗಟ್ಟಿಯಾದ ಇತಿಹಾಸವಿದೆ. ವಚನ ಸಾಹಿತ್ಯದ ಮೂಲ ಕನ್ನಡ ಸಾಹಿತ್ಯ ಎಂದು ಜೆ.ಡಿ.ಎಸ್ ರಾಜ್ಯ ಉಪಾಧ್ಯಕ್ಷ ಮನಗೂಳಿಯ ಅಪ್ಪುಗೌಡ ಪಾಟೀಲ ಅಭಿಪ್ರಾಯಪಟ್ಟರು.
ಸುಕ್ಷೇತ್ರ ಇವಣಗಿಯ ವರದಾನಿ ಲಕ್ಕಮ್ಮದೇವಿ ದೇವಸ್ಥಾನದ ಆವರಣದಲ್ಲಿ ಜರುಗಿದ ಬಸವನ ಬಾಗೇವಾಡಿ ೧೦ನೇ ತಾಲೂಕಾ ಕನ್ನಡ ಸಾಹಿತ್ಯ ಸಮ್ಮೇಳನದ ಮೊದಲ ಶರಣ ಗೋಷ್ಠಿಯನ್ನು ಉದ್ಘಾಟಿಸಿ ಮಾತನಾಡಿದ ಅವರು, ನಾವೆಲ್ಲರೂ ಸೇರಿ ಕನ್ನಡ ನಾಡು-ನುಡಿಯನ್ನು ಉಳಿಸುವ ಕಾಯಕವನ್ನು ಪ್ರಾಮಾಣಿಕವಾಗಿ ಮಾಡೋಣ ಎಂದರು.
ಸಾನಿದ್ಯ ವಹಿಸಿದ್ದ ಹೂವಿನ ಹಿಪ್ಪರಗಿ ಪತ್ರಿವನ ಮಠದ ಪೂಜ್ಯ ದ್ರಾಕ್ಷಾಯಣಿ ಮಾತಾಜಿ ಆಶೀರ್ವಚನ ನೀಡುತ್ತಾ ಬಸವಣ್ಣನವರು ನಡೆದಾಡಿದ ಪುಣ್ಯ ಪಾವನ ನೆಲವಿದು. ಈ ನೆಲದಲ್ಲಿ ಬದುಕಿದ ನಾವೇ ಧನ್ಯರು. ನುಡಿದಂತೆ ನಡೆದು ಹೋದ ಶರಣರು ನಮಗೆಲ್ಲ ಆದಶ೯ಪ್ರಾಯ ಎಂದರು.
ಅಧ್ಯಕ್ಷತೆ ವಹಿಸಿದ್ದ ಶರಣ ಸಾಹಿತ್ಯ ಪರಿಷತ್ತಿ ತಾಲೂಕಾಧ್ಯಕ್ಷ ವಿ.ಬಿ.ಮತೂ೯ರ ಮಾತನಾಡಿ, ಶರಣರ ಆದಶ೯ವಿಚಾರಗಳು ನಮ್ಮೆಲ್ಲರ ಬದುಕಿಗೆ ಸ್ಪೂರ್ತಿಯಾಗಿದ್ದು. ಶರಣರ ವಿಚಾರಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ಕರೆ ನೀಡಿದರು.
ಬಸವಾದಿ ಶರಣರ ಚಿಂತನೆಗಳು ಎಂಬ ವಿಷಯದ ಕುರಿತು ಉಪನ್ಯಾಸ ನೀಡಿದ ಜಿಲ್ಲಾ ಕಸಾಪ ಸಂಘಟನಾ ಕಾರ್ಯದರ್ಶಿ ಮಹಮ್ಮದ್ ಗೌಸ ಹವಾಲ್ದಾರ ಮಾತನಾಡಿ, ಎಲ್ಲರಿಗೂ ಅಥ೯ವಾಗುವ ರೀತಿಯಲ್ಲಿ ಅತ್ಯಂತ ಸರಳವಾಗಿ, ಸುಲಭವಾಗಿ ವಚನಗಳನ್ನು ರಚಿಸಿ ಸಮಾಜದ ಮೌಢ್ಯಗಳನ್ನು ಕಿತ್ತೊಗೆದು ವೈಚಾರಿಕ ಪ್ರಜ್ಞೆ ಮೂಡಿಸಿದ ಸಾಹಿತ್ಯವೆಂದರೆ ಅದು ವಚನ ಸಾಹಿತ್ಯ ಎಂದರು.
ವಚನ ಸಾಹಿತ್ಯದಲ್ಲಿ ಶರಣೆಯರ ಕೊಡುಗೆ ಎಂಬ ವಿಷಯದ ಕುರಿತು ಉಪನ್ಯಾಸ ನೀಡಿದ ಸಾಹಿತಿ ಶೋಭಾ ಮೇಡೆಗಾರ ಮಾತನಾಡುತ್ತಾ, ವಚನ ಸಾಹಿತ್ಯದ ಮೂಲಕ ಶರಣೆಯರು ಸಮಾಜದಲ್ಲಿ ಸ್ತ್ರೀ-ಪುರುಷ ಎಂಬ ಬೇಧ ಭಾವವನ್ನು ಅಳಿಸಿಹಾಕಿ ಅನುಭವ ಮಂಟಪದಲ್ಲಿಯ ಚರ್ಚಾಗೋಷ್ಠಿಯಲ್ಲಿ ಭಾಗವಹಿಸುವ ಮೂಲಕ ಮಹಿಳೆಯರಲ್ಲಿ ಜಾಗೃತಿ ಮೂಡಿಸುವಲ್ಲಿ ಶರಣೆಯರು ಮಹತ್ವದ ಪಾತ್ರ ವಹಿಸಿದ್ದಾರೆ ಎಂದರು.
ಮುಖ್ಯ ಅತಿಥಿಗಳಾಗಿ ಶಿವನಗೌಡ ಎಸ್. ಬಿರಾದಾರ, ಬಲ್ಲಪ್ಪ ನಂದಗಾವಿ, ವಿಶ್ವನಾಥ ಪಾಟೀಲ, ರಮೇಶ ಸೂಳೀಭಾವಿ, ಆರ್.ಜಿ.ಅಳ್ಳಗಿ, ಸಂಗಮೇಶ ಪೂಜಾರಿ, ಉಮೇಶ ಕೌಲಗಿ, ಶೇಖರ ಗೊಳಸಂಗಿ, ಅರವಿಂದ ಸಾಲವಾಡಗಿ, ಸುಭಾಸ ಚಕ್ರಮನಿ, ಹಾಗೂ ಗಿರಿಜಾ ಪಾಟೀಲ ಮಾತನಾಡಿದರು.
ಪಿ.ಎಸ್ ಬಾಗೇವಾಡಿ ಹಾಗೂ ಲಕ್ಷ್ಮೀ ಕಳ್ಳಿಗುಡ್ಡ ಕಾಯ೯ಕ್ರಮ ನಿರೂಪಿಸಿದರು. ಬಸವರಾಜ ಚಿಂಚೊಳ್ಳಿ ಸ್ವಾಗತಿಸಿದರು. ಎಸ್.ಆರ್.ಮಠ ಹಾಗೂ ಡಿ.ಕೆ.ಪಾಟೀಲ ನಿವ೯ಹಿಸಿದರು. ಗಿರಿಜಾ ಸಜ್ಜನ ವಂದಿಸಿದರು.

