ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ಹಲವು ವರ್ಷಗಳಿಂದ ಅಂಚೆ ಇಲಾಖೆ ಕೇವಲ ಸಂವಹನ ಹಾಗೂ ಪತ್ರ ವ್ಯವಹಾರಗಳ ನಿರ್ವಹಣೆಗೆ ಮಾತ್ರ ಸೀಮಿತವಾಗಿತ್ತು. ಆದರೆ ಇಂದು ಅಂಚೆ ಇಲಾಖೆ ಬ್ಯಾಂಕ್ಗಳಂತೆ ಭ್ರಷ್ಟಾಚಾರ ರಹಿತ, ಸಾರ್ವಜನಿಕ ಆರ್ಥಿಕತೆ ವ್ಯವಹಾರಗಳ, ಜನಸ್ನೇಹಿ ಕೇಂದ್ರಗಳಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಸಿಂದಗಿ ಅಂಚೆ ವಿಭಾಗದ ಮೇಲ್ವಿಚಾರಕ ಮನೋಹರ ಪೋಳ ಹೇಳಿದರು.
ಸಿಂದಗಿ ತಾಲೂಕಿನ ಗೋಲಗೇರಿ ಗ್ರಾಮದಲ್ಲಿ ಅಂಚೆ ಇಲಾಖೆ ವತಿಯಿಂದ ಹಮ್ಮಿಕೊಂಡ ಅಂಚೆ ಇಲಾಖೆ ಅಭಿಯಾನ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.
ಅಂಚೆ ಇಲಾಖೆಯ ವಿವಿಧ ಯೋಜನೆಗಳ ಲಾಭ ಪಡದುಕೊಳ್ಳಬೇಕು. ಇಲಾಖೆಯಲ್ಲಿ ಮಕ್ಕಳಿಂದ ವೃದ್ಧರವರೆಗೆ ಅನೇಕ ಉಪಯುಕ್ತ ಯೋಜನೆಗಳಿವೆ. ಇಲಾಖೆ ಒಂದೇ ಸೂರಿನಡಿ ಗ್ರಾಹಕರಿಗೆ ಹಲವು ಸೇವೆಗಳನ್ನು ಒದಗಿಸುತ್ತವೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಗೋಲಗೇರಿ ಗೋಲ್ಲಾಳೇಶ್ವರ ದೇವಸ್ಥಾನದ ಧರ್ಮದರ್ಶಿ ಸಿದ್ದರಾಮಸಾಹು ದೇವರಮನಿ ಸಾನಿಧ್ಯ ವಹಿಸಿದ್ದರು. ಗೋಲಗೇರಿ ಗ್ರಾಮದ ಮುಖಂಡ ಬಸವರಾಜ ಮಾರಲಭಾವಿ, ಓಂಪ್ರಕಾಶ ಬಿರಾದಾರ, ಬಸನಗೌಡ ಮೇಲಿನಮನಿ, ಗೌಡಣ್ಣ ಬಜಂತ್ರಿ, ಮಡಿವಾಳ ನಾಯ್ಕೋಡಿ, ಕಲ್ಯಾಣಿ ಯಂಕಂಚಿ, ಪತ್ರಕರ್ತ ಮಲ್ಲು ಕೆಂಭಾವಿ, ಗೋಲ್ಲಾಳಪ್ಪ ಕರ್ನಾಳ, ಚನ್ನಬಸು ಪಟ್ಟಣಶೆಟ್ಟಿ, ಹುಸೇನ ಚೌದ್ರಿ, ಚಿದಾನಂದ ಬಿದರಕುಂದಿ, ಬಸವರಾಜ ಕೋಟೆಗೋಳ, ಗೋಲ್ಲಾಳಪ್ಪ ನಾಯ್ಕೋಡಿ, ಮುದುಕಣ್ಣ ಬಿಲಕೇರಿ ಸೇರಿದಂತೆ ಸಿಂದಗಿ ಅಂಚೆ ಸಿಬ್ಬಂದಿ ಸದ್ದಾಂ ಹುಸೇನ್ ಆಲಗೂರ, ಎಮ್ಜೆ ಅಮರೇಶ ಕಲಶೆಟ್ಟಿ, ಹಾಗೂ ಗೊಲಗೇರಿ ಅಂಚೆಯ ಬ್ರಾಂಚ್ ಪೋಸ್ಟ್ ಮಾಸ್ಟರ ಚಂದ್ರಶೇಖರ ಪತ್ತಾರ, ಮಡಿವಾಳಪ್ಪ ಅಗಸರ, ಬಸನಗೌಡ ಬಿರಾದಾರ, ಈರಗಂಟೆಪ್ಪ ದೆಸಾಯಿ, ಅರುಣಕಮಾರ ಮಾನೆಪೂರ ಸೇರಿದಂತೆ ಅನೇಕರಿದ್ದರು.

