ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ತಾಲೂಕಿನ ಯಂಕಂಚಿ ಗ್ರಾಮದ ಕುಂಟೋಜಿ ಹಿರೇಮಠದಲ್ಲಿ ಲಿಂ. ರುದ್ರಮುನಿ ಶಿವಾಚಾರ್ಯರ ೪೭ನೇ ಪುಣ್ಯಾರಾಧನೆ ನಿಮಿತ್ತ ನಂ.೨೮ ರಿಂದ ಡಿ.೯ ರವರೆಗೆ ಪ್ರತಿದಿನ ರಾತ್ರಿ ೮ ಗಂಟೆಗೆ ಉಜ್ಜಯಿನಿ ಶ್ರೀಮದ್ ಸಿದ್ದಲಿಂಗ ಜಗದ್ಗುರುಗಳ ಪುರಾಣ ಪ್ರವಚನ ಕಾರ್ಯಕ್ರಮ ಜರುಗಲಿದೆ.
ಪುರಾಣ ಪ್ರಾರಂಭೋತ್ಸವದ ದಿವ್ಯ ಸಾನಿಧ್ಯವನ್ನು ಮುಧೋಳ ಗಂಜಿಗಟ್ಟಿ ಶ್ರೀಮಠದ ಡಾ. ವೈಜನಾಥ ಶಿವಲಿಂಗ ಶಿವಾಚಾರ್ಯರು, ಮಳ್ಳಿಯ ರುದ್ರಮುನಿ ಶಿವಾಚಾರ್ಯರು ವಹಿಸಿಕೊಳ್ಳುವರು. ಕಾರ್ಯಕ್ರಮದ ನೇತೃತ್ವವನ್ನು ರೋಡಗಿ ವಿರಕ್ತಮಠದ ಅಭಿನವ ಶಿವಲಿಂಗೇಶ್ವರ ಸ್ವಾಮಿಗಳು, ಕಡಕೋಳ ಹಿರೇಮಠದ ರಾಜಗುರು ಮಹಾಲಿಂಗ ಸ್ವಾಮಿಗಳು, ಕೋರವಾರ ಚೌಕಿಮಠದ ಸದ್ಗುರು ಶಂಕರಾ ನಂದ ಮಹಾಸ್ವಾಮಿಗಳು ವಹಿಸಿಕೊಳ್ಳಲಿದ್ದಾರೆ. ಚಳಕಾಪುರ ಸಿದ್ಧಾರೂಢ ಮಠದ ಸದ್ಗುರು ಶಂಕರಾನಂದ ಮಹಾಸ್ವಾಮಿಗಳು, ನಾಲತವಾಡ ಹಿರೇಮಠದ ಶ್ರೀಗಳು, ಖಾನಾಪುರ ಶ್ರೀಮಠದ ಶ್ರೀಗಳು, ಹೊನ್ನಳ್ಳಿ ಶ್ರೀಮಠದ ಶ್ರೀಗಳು, ಅಲ್ಲಾಪುರ್ ಶ್ರೀ ಮಠದ ಶ್ರೀಗಳು ಸಮ್ಮುಖ ವಹಿಸಲಿದ್ದಾರೆ. ಕಾರ್ಯಕ್ರಮವನ್ನು ಉದ್ದಿಮೆದಾರ ವೆಂಕಟೇಶ ಗುತ್ತೇದಾರ, ಚಿಕ್ಕರೂಗಿ ಈರಣ್ಣ ಶಾಸ್ತ್ರಿಗಳು ನೆರವೇರಿಸಲಿದ್ದಾರೆ. ಪುರಾಣ ಪ್ರವಚನವನ್ನು ಅಮರೇಶ್ವರ ಶಾಸ್ತ್ರಿಗಳು ಉಣಬಡಿಸುವರು. ಸಂಗೀತ ಸೇವೆಯನ್ನು ಪಡದಳ್ಳಿ ಕಲ್ಲಯ್ಯ ಸ್ವಾಮಿಗಳು, ತಬಲಾ ಸೇವೆಯನ್ನು ಪ್ರಾಣೇಶ ಯಡ್ರಾಮಿ ನಡೆಸಿಕೊಡುವರು ಎಂದು ಯಂಕಂಚಿ ಶ್ರೀಮಠದ ಪೀಠಾಧಿಪತಿ ಅಭಿನವ ರುದ್ರಮುನಿ ಶಿವಾಚಾರ್ಯರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

