ಉದಯರಶ್ಮಿ ದಿನಪತ್ರಿಕೆ
ದೇವಣಗಾಂವ: ವಿದ್ಯಾರ್ಥಿಗಳಲ್ಲಿ ಸಾಮಾಜಿಕ ನ್ಯಾಯ, ದೇಶದ ಏಕತೆ, ದೇಶ ಗೌರವ, ದೇಶಭಕ್ತಿ, ಭ್ರಾತೃತ್ವ ಭಾವನೆಯನ್ನು ಮೂಡಿಸಬೇಕು ಎಂದು ದೇವಣಗಾಂವ ವಲಯ ಸಿ ಆರ್ ಪಿ ಎಸ್.ಆರ್.ಮುಲ್ಲಾ ಹೇಳಿದರು.
ಅವರು ಆಲಮೇಲ ತಾಲೂಕಿನ ದೇವಣಗಾಂವ ಗ್ರಾಮದ ಅರಿವು ಕೇಂದ್ರ ಗ್ರಾಮ ಪಂಚಾಯತ ಗ್ರಂಥಾಲಯದಲ್ಲಿ ಸಂವಿಧಾನ ಅಂಗೀಕಾರದ 75 ನೇ ವರ್ಷಾಚರಣೆ ಅಂಗವಾಗಿ ನಡೆದ ಸಂವಿಧಾನ ಸಂಭ್ರಮ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡುತ್ತಿದ್ದರು.
ಸಂವಿಧಾನ ನಮ್ಮ ದೇಶದ ಪವಿತ್ರವಾದ ಗ್ರಂಥ, ಭಾರತದ ಸಂವಿಧಾನವು ಜಗತ್ತಿನ ಅತಿ ದೊಡ್ಡ ಸಂವಿಧಾನವಾಗಿದೆ ಇದು ಲಿಖಿತ ರೂಪದಲ್ಲಿದೆ ಸಂವಿಧಾನದ ಆಶಯದಂತೆ ಸಾಮಾಜಿಕ ನ್ಯಾಯ, ಸ್ವಾತಂತ್ರ್ಯ , ಸಮಾನತೆ, ಭಾತೃತ್ವ ಭಾವನೆಯನ್ನು ಮೂಡಿಸಿಕೊಂಡು ದೇಶದ ಐಕ್ಯತೆಗಾಗಿ ಶ್ರಮಿಸೋಣ ಎಂದರು.
ಬಿ ಆರ್ ಪಿ ಸಾಹೇಬ್ ಗೌಡ ಬಿರಾದಾರ ಮಾತನಾಡಿದರು.
ಹಿರಿಯರಾದ ರಾವುತಪ್ಪ ಭೂಸನೂರ ಅಧ್ಯಕ್ಷತೆ ವಹಿಸಿದ್ದರು
ದೇವರನಾವದಗಿ ಸಿ ಆರ್ ಪಿ ಎನ್. ವಿ.ನಿಂಬರ್ಗಿ, ಶಿಕ್ಷಕರಾದ ಬಿ.ಬಿ.ಸಿಂಪಿ, ಎಂ.ಬಸವರಾಜ, ಎ.ಎಂ. ಮರಾಠೆ, ಎಂ.ಡಿ.ಭೂಸನೂರ, ವಿನಾಯಕ ಅಥರ್ಗಾ, ಗ್ರಂಥಪಾಲಕ ಗುರು ಆರ್ ಹಿರೇಮಠ, ದತ್ತಾತ್ರೇಯ ಸೊನ್ನ, ಪತ್ರಕರ್ತರು ದಶರಥ ಸೊನ್ನ, ಮಲ್ಲಿಕಾರ್ಜುನ ಹಿರೇಮಠ,ಸುಭಾಷ ಅಂಬೂರೆ ಶಾಲಾ ವಿದ್ಯಾರ್ಥಿಗಳು ಭಾಗವಹಿಸಿದ್ದರು.

