Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

ಅನ್ನಭಾಗ್ಯ ಯೋಜನೆಯಡಿ ಜುಲೈ ತಿಂಗಳ ಪಡಿತರ ಹಂಚಿಕೆ

​ಜು.೧೭ ರಂದು ರಿಯಾಯಿತಿ ದರದಲ್ಲಿ ಮೀನುಮರಿಗಳ ಮಾರಾಟ

ಎಸ್ಐಆರ್ ಸಾಧನೆ: ಬಬಲೇಶ್ವರ ಮತಗಟ್ಟೆಅಧಿಕಾರಿಗಳಿಗೆ ಸನ್ಮಾನ

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»(ರಾಜ್ಯ ) ಜಿಲ್ಲೆ»ತೊಗರಿ ಬೆಳೆ ಹಾನಿ: ಸಂಪೂರ್ಣ ವಿಮೆ ಪರಿಹಾರಕ್ಕೆ ಆಗ್ರಹಿಸಿ ಮನವಿ
(ರಾಜ್ಯ ) ಜಿಲ್ಲೆ

ತೊಗರಿ ಬೆಳೆ ಹಾನಿ: ಸಂಪೂರ್ಣ ವಿಮೆ ಪರಿಹಾರಕ್ಕೆ ಆಗ್ರಹಿಸಿ ಮನವಿ

By No Comments1 Min Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

ಉದಯರಶ್ಮಿ ದಿನಪತ್ರಿಕೆ

ದೇವರಹಿಪ್ಪರಗಿ: ಕೊಂಡಗೂಳಿ ರೈತ ಸಮುದಾಯಕ್ಕೆ ಆಧಾರವಾಗಬೇಕಿದ್ದ ತೊಗರಿ ಬೆಳೆ ಹವಾಮಾನ ವೈಪರಿತ್ಯದಿಂದ ಸಂಪೂರ್ಣ ಹಾಳಾಗಿದೆ. ತಕ್ಷಣವೇ ರೈತರಿಗೆ ಬೆಳೆ ಹಾನಿಗೆ ಸಂಪೂರ್ಣ ವಿಮೆ ನೀಡಬೇಕೆಂದು ಆಗ್ರಹಿಸಿ ತಹಶೀಲ್ದಾರ್ ಪ್ರಕಾಶ ಸಿಂದಗಿ ಅವರಿಗೆ ಮನವಿ ಸಲ್ಲಿಸಿದರು.
ಪಟ್ಟಣದ ತಹಶೀಲ್ದಾರ ಕಚೇರಿ ಆವರಣಕ್ಕೆ ಮಂಗಳವಾರ ಆಗಮಿಸಿದ ರೈತರು ಸಂಪೂರ್ಣ ವಿಮೆ ನೀಡಬೇಕೆಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ರೈತ ವೀರಘಂಟಯ್ಯ ಗದ್ದಗಿಮಠ ಮಾತನಾಡಿ, ಪೂರ್ವ ಮುಂಗಾರು ಬೆಳೆಯಾಗಿ ತೊಗರಿ ಬಿತ್ತನೆ ಮಾಡಲಾಗಿದ್ದು, ಬೆಳೆಯು ಹೂವಿನ ಹಂತದಲ್ಲಿ ಇರುವಾಗ ಹವಾಮಾನ ವೈಪರಿತ್ಯದಿಂದ ಪ್ರತಿ ದಿನ ಮಂಜು ಆವರಿಸಿದ್ದು, ಬೆಳೆಯ ಹೂ ಮತ್ತು ಚಿಗುರಿಕಾಯಿ ಸಂಪೂರ್ಣವಾಗಿ ಉದುರಿ ಹೋಗಿರುವುದರಿಂದ ಬೆಳೆ ಒಣಗಿ ಹೋಗಿರುತ್ತದೆ. ಕೃಷಿಕರು ಸಾವಿರಾರು ಹಣ ಸಾಲ ಮಾಡಿ ಬೀಜ, ಗೊಬ್ಬರ, ಕ್ರಿಮಿನಾಶಕ ಸಿಂಪಡಿಸಿ ವ್ಯವಸ್ಥೆ ಮಾಡಿದ್ದ ತೊಗರಿ ಬೆಳೆ ಈ ರೀತಿಯಾಗಿ ಸಂಪೂರ್ಣ ಹಾಳಾಗಿದೆ. ಇದನ್ನೆ ನಂಬಿದ ರೈತರ ಬದುಕು ದುಸ್ತರವಾಗಿದೆ. ಜೀವನಾಧಾರವಾಗಬೇಕಿದ್ದ ತೊಗರಿಬೆಳೆ ಹೊಡೆತ ನೀಡಿದೆ.
ಕೊಂಡಗೂಳಿ ಗ್ರಾಮದಲ್ಲಿ ಸುಮಾರು ೯೦೦ ರೈತರು ಫಸಲ ಭೀಮಾ ಯೋಜನೆಯಡಿ ವಿಮೆಯ ಹಣವನ್ನು ಪಾವತಿಸಿರುತ್ತಾರೆ. ಈ ಮೂಲಕ ಅದಕ್ಕಾಗಿ ತಕ್ಷಣವೇ ಸರ್ಕಾರ ಕೃಷಿ ಇಲಾಖೆ ಮೂಲಕ ಹಾಳಾದ ಬೆಳೆಯ ಸಮೀಕ್ಷೆ ನಡೆಸಿ ತಕ್ಷಣವೇ ರೈತರಿಗೆ ವಿಮೆಯನ್ನು ಘೋಷಿಸಬೇಕು. ಗ್ರಾಮದ ಹಲವು ರೈತರು ಬೆಳೆ ಪರಿಸ್ಥಿತಿಯನ್ನು ಕಂಡು ಭಯಗೊಂಡಿದ್ದು, ಅವರು ಯಾವುದೇ ಅನಾಹುತ ಮಾಡಿಕೊಳ್ಳುವ ಮುಂಚೆ ತಾಲ್ಲೂಕು ಆಡಳಿತ ರೈತರಿಗೆ ಅನುಕೂಲವಾಗುವ ಹಾಗೇ ಕೂಡಲೇ ಕ್ರಮವಹಿಸಬೇಕು ಎಂದು ಆಗ್ರಹಿಸಿ, ದಿ:೨೯ ರಂದು ಕೊಂಡಗೂಳಿ ಗ್ರಾಮದ ರೈತರು ರಸ್ತೆ ತಡೆ ಹಾಗೂ ಉಗ್ರ ಹೋರಾಟ ಕೈಗೊಂಡು ಎಚ್ಚರಿಸಲಿದ್ದಾರೆ. ಒಂದು ವೇಳೆ ಯಾವುದೇ ರೈತ ಅನಾಹುತಕ್ಕೆ ಇಡಾದರೇ ಅದಕ್ಕೆ ತಾಲ್ಲೂಕು ಆಡಳಿತವೇ ನೇರ ಹೊಣೆ ಎಂದು ಎಚ್ಚರಿಸಿ ಮನವಿ ಸಲ್ಲಿಸಿದರು.
ಸಿದ್ದಣ್ಣ ಸಿಂದಗೇರಿ, ಅಪ್ಪಾಸಾಹೇಬ ಬಸರಕೋಡ, ಈರಣ್ಣ ತಾವರಖೇಡ, ಕಾಶೀಲಿಂಗ ಸಿಂದಗೇರಿ, ಜಗದೀಶಗೌಡ ಪಾಟೀಲ, ಪ್ರಭು ಡಿಗ್ಗಾಂವಿ, ಗುರುನಾಥರೆಡ್ಡಿ ಸಿಂದಗೇರಿ, ಚಿನ್ನಾರೆಡ್ಡಿ ಮಲ್ಲಾಬಾದಿ, ಸಿದ್ದನಗೌಡ ಪಾಟೀಲ, ಸಂಪತರೆಡ್ಡಿ ಕೆಂಭಾವಿ, ಶಿವುಕುಮಾರ ಮಲ್ಲಾಬಾದಿ, ತಿಪ್ಪಣ್ಣ ಹೆಬ್ಬಾಳ, ಬಸವರಾಜ ಕರದಾಳಿ, ಚಿದಾನಂದ ಗೊಳಸಾರ ಇದ್ದರು.

BIJAPUR NEWS public public news udaya rashmi Udayarashmi today newspaper udayarashminews.com
Share. Facebook Twitter Pinterest Email Telegram WhatsApp
  • Website

Related Posts

ಅನ್ನಭಾಗ್ಯ ಯೋಜನೆಯಡಿ ಜುಲೈ ತಿಂಗಳ ಪಡಿತರ ಹಂಚಿಕೆ

​ಜು.೧೭ ರಂದು ರಿಯಾಯಿತಿ ದರದಲ್ಲಿ ಮೀನುಮರಿಗಳ ಮಾರಾಟ

ಎಸ್ಐಆರ್ ಸಾಧನೆ: ಬಬಲೇಶ್ವರ ಮತಗಟ್ಟೆಅಧಿಕಾರಿಗಳಿಗೆ ಸನ್ಮಾನ

ತರಬೇತಿಗೆ ಕಾನೂನು ಪದವೀಧರರಿಂದ ಅರ್ಜಿ

Add A Comment
Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Helldivers
  • Typora
  • Uncategorized
  • Wemod
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • ಅನ್ನಭಾಗ್ಯ ಯೋಜನೆಯಡಿ ಜುಲೈ ತಿಂಗಳ ಪಡಿತರ ಹಂಚಿಕೆ
    In (ರಾಜ್ಯ ) ಜಿಲ್ಲೆ
  • ​ಜು.೧೭ ರಂದು ರಿಯಾಯಿತಿ ದರದಲ್ಲಿ ಮೀನುಮರಿಗಳ ಮಾರಾಟ
    In (ರಾಜ್ಯ ) ಜಿಲ್ಲೆ
  • ಎಸ್ಐಆರ್ ಸಾಧನೆ: ಬಬಲೇಶ್ವರ ಮತಗಟ್ಟೆಅಧಿಕಾರಿಗಳಿಗೆ ಸನ್ಮಾನ
    In (ರಾಜ್ಯ ) ಜಿಲ್ಲೆ
  • ತರಬೇತಿಗೆ ಕಾನೂನು ಪದವೀಧರರಿಂದ ಅರ್ಜಿ
    In (ರಾಜ್ಯ ) ಜಿಲ್ಲೆ
  • ಎಸ್ಐಆರ್ ಗೆ ಅಡ್ಡಿಪಡಿಸಿದರೆ ಕಾನೂನು ಕ್ರಮ :ಮೆಕ್ಕಳಕಿ ಎಚ್ಚರಿಕೆ
    In (ರಾಜ್ಯ ) ಜಿಲ್ಲೆ
  • ೫೬,೨೯,೧೭೧ ರೂ. ದಂಡ ವಿಧಿಸಿದ ಕೋರ್ಟ್
    In (ರಾಜ್ಯ ) ಜಿಲ್ಲೆ
  • ಎಂಎಲ್ಸಿ ಚುನಾವಣೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷರಿಂದ ಡಿಕೆಶಿ ಗೆ ಸಹಾಯ
    In (ರಾಜ್ಯ ) ಜಿಲ್ಲೆ
  • ಸಚಿವ ಎಂ.ಬಿ.ಪಾಟೀಲ ಹೆಸರು ತಮ್ಮ ಮನೆಗಿಟ್ಟು ಅಭಿಮಾನ ಮೆರೆದ ಕುಟುಂಬ
    In (ರಾಜ್ಯ ) ಜಿಲ್ಲೆ
  • ದೇಶ-ಸಮಾಜ ಕುರಿತ ಚಿಂತನೆಗಳು ಕಡಿಮೆಯಾಗುತ್ತಿರುವುದು ಕಳವಳಕಾರಿ
    In (ರಾಜ್ಯ ) ಜಿಲ್ಲೆ
  • ಗಡಿ ಗುರುತಿಸದೇ ಅಕ್ರಮ ಲೈನ್‌ಔಟ್ :ರೈತರ ಆರೋಪ
    In (ರಾಜ್ಯ ) ಜಿಲ್ಲೆ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2026 udayarashminews.com. Designed by udayarashmi news .

Type above and press Enter to search. Press Esc to cancel.