ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ೨೦೨೬-೨೭ನೇ ಸಾಲಿಗಾಗಿ ನ್ಯಾಯಾಂಗ ಆಡಳಿತದಲ್ಲಿ ಕಾನೂನು ಪದವೀಧರರನ್ನು ತರಬೇತಿಗೆ ಆಯ್ಕೆ ಮಾಡಲು ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅರ್ಜಿ ಆಹ್ವಾನಿಸಿದೆ.
ಹಿಂದುಳಿದ ವರ್ಗಗಳಾದ ಪ್ರವರ್ಗ-೧, ೨(ಎ), ೩(ಎ) ಹಾಗೂ ೩(ಬಿ) ಪ್ರವರ್ಗಗಳಿಗೆ ಸೇರಿದ ಕಾನೂನು ಪದವೀಧರರಿಂದ ದ್ವಿ- ಪ್ರತಿಗಳಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ. ಜು. ೧೩ರಿಂದ ಆಗಸ್ಟ್ ೧೩ರೊಳಗಾಗಿ ಅರ್ಹ ಪದವೀಧರರು ಅರ್ಜಿ ಸಲ್ಲಿಸಬಹುದಾಗಿದೆ. ನಿಗದಿತ ಅರ್ಜಿ ನಮೂನೆಗಳನ್ನು ಜಿಲ್ಲಾ ಅಧಿಕಾರಿಗಳು, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಲ್ಲಿ ಪಡೆಯಬುದಾಗಿದೆ.ಈ ತರಬೇತಿಗೆ ಹಿಂದುಳಿದ ವರ್ಗಗಳಿಗೆ ಸೇರಿದ ೧೦ ಕಾನೂನು ಪದವೀಧರರನ್ನು ಆಯ್ಕೆ ಮಾಡಲಾಗುವುದು. ಪ್ರವರ್ಗ-೧, ರ ಅಭ್ಯರ್ಥಿಗಳಿಗೆ ೩.೫೦ ಲಕ್ಷ, ೩(ಬಿ) ವರ್ಗಗಳಿಗೆ ೨.೫೦ ಲಕ್ಷಗಳ ವಾರ್ಷಿಕ ಆದಾಯ ಮಿತಿಯಿದೆ. ತರಬೇತಿ ಅವಧಿಯು ೪ ವರ್ಷಗಳಿದ್ದು, ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ೪೦೦೦ ರೂ. ತರಬೇತಿ ಭತ್ಯೆ ನೀಡಲಾಗುವುದು.
ಅರ್ಜಿ ಸಲ್ಲಿಸುವ ಪ್ರವರ್ಗ-೧, ೪೦ವರ್ಷ, ೨(ಎ), ೩(ಎ) ಹಾಗೂ ೩(ಬಿ) ಅಭ್ಯರ್ಥಿಗಳಗೆ ೩೮ ವರ್ಷಗಳು ಮೀರಿರಬಾರದು. ಸ್ವೀಕರಿಸಿದ ಅರ್ಜಿಗಳನ್ನು ಪರಿಶೀಲಿಸಿ ಅಪೂರ್ಣ, ತಡವಾಗಿ ಬಂದ ಎಲ್ಲ ಅರ್ಜಿಗಳು ಮತ್ತು ಷರತ್ತುಗಳನ್ನು ಪೂರೈಸದ ಅರ್ಜಿಗಳನ್ನು ಯಾವುದೇ ಪತ್ರ ವ್ಯವಹಾರಕ್ಕೆ ಆಸ್ಪದ ನೀಡದೇ ತಿರಸ್ಕರಿಸಲಾಗುವುದು. ಪೂರ್ಣವಾಗಿರುವ ಮತ್ತು ಷರತ್ತುಗಳನ್ನು ಪೂರೈಸಿದ ಅರ್ಜಿಗಳನ್ನು ಸಲ್ಲಿಸಿದ ಅರ್ಜಿದಾರರನ್ನು ಮಾತ್ರ ಸಂದರ್ಶನಕ್ಕೆ ಕರೆಯಲಾಗುವುದು. ಆಯ್ಕೆ ಸಮಿತಿಯು ಅಭ್ಯರ್ಥಿಗಳ ಆಯ್ಕೆ ಮಾಡಲಾಗುವುದು. ಪ್ರವರ್ಗ-೧ರಲ್ಲಿ ಇರುವ ಅರ್ಹ ಅಭ್ಯರ್ಥಿಗಳು ದೊರಕದೇ ಇದ್ದಲ್ಲಿ ೨(ಎ), ೩(ಎ) ಹಾಗೂ ೩(ಬಿ) ಇವುಗಳಲ್ಲಿ ಬರುವ ಅಭ್ಯರ್ಥಿಗಳಲ್ಲಿ ಶೇಕಡಾವಾರು ಮೀಸಲಾತಿಯಂತೆ ಆಯ್ಕೆ ಮಾಡಲಾಗುವುದು. ಜಿಲ್ಲಾ ಕೇಂದ್ರ ಸ್ಥಾನದಲ್ಲಿ ಆಯ್ಕೆ ಮಾಡಲಾದ ಅಭ್ಯರ್ಥಿಗಳನ್ನು ಜಿಲ್ಲಾ ಪಬ್ಲಿಕ್ ಪ್ರಾಸಿಕ್ಯೂಟರರಿಂದ, ಜಿಲ್ಲಾ ಸರ್ಕಾರಿ ವಕೀಲರಿಂದ ಅಥವಾ ೧೫ ವರ್ಷಗಳಿಗೆ ಕಡಿಮೆ ಇಲ್ಲದ ಸೇವೆಯನ್ನು ವಕೀಲ ವೃತ್ತಿಯಲ್ಲಿ ಪೂರೈಸಿದ ವಕೀಲರ ಅಧೀನದಲ್ಲಿ ತರಬೇತಿ ಪಡೆಯಬೇಕು. ಅದೇ ರೀತಿ ತಾಲೂಕಾ ಮಟ್ಟದ ಬಾರ್ ಅಸೋಸಿಯೇಷನ್ದಲ್ಲಿ ವಕೀಲ ವೃತ್ತಿ ಮಾಡುವ ಅಭ್ಯರ್ಥಿಗಳು ಆಯ್ಕೆಯಾದಲ್ಲಿ ಜೆ.ಎಂ.ಎಫ್. ನ್ಯಾಯಾಲಯದಲ್ಲಿರುವ ಸಹಾಯಕ ಸರ್ಕಾರಿ ವಕೀಲರುಗಳಲ್ಲಿ ತರಬೇತಿ ಪಡೆಯಬೇಕಾಗುತ್ತದೆ. ತರಬೇತಿ ಅವಧಿಯಲ್ಲಿ ಮಧ್ಯದಲ್ಲಿ ಅಭ್ಯರ್ಥಿಗಳು ತರಬೇತಿಯನ್ನು ಬಿಡಕೊಡದು. ಅಭ್ಯರ್ಥಿಗಳು ಕಾನೂನು ಪದವಿ ಪರೀಕ್ಷೆಯಲ್ಲಿ (ಪ್ರಾಕ್ಟಿಸಿಗೆ ನಿಗದಿಪಡಿಸಿದ ಕ್ವಾಲಿಪೀಕೇಶನ್) ಉತ್ತೀರ್ಣರಾಗಿ ಅರ್ಜಿ ಸಲ್ಲಿಸಲು ನಿಗದಿಪಡಿಸಿದ ಅಂತಿಮ ದಿನಾಂಕದಂದು ೨ ವರ್ಷದೊಳಗಿರಬೇಕು. ಅಭ್ಯರ್ಥಿಗಳು ಆಯ್ಕೆ ಸಮಿತಿಯು ಸೂಚಿಸಿದ ಎಲ್ಲ ದಾಖಲಾತಿಗಳನ್ನು ದೃಢೀಕರಿಸಿ ಅರ್ಜಿಯ ಜೊತೆಗೆ ಲಗತ್ತಿಸಿರಬೇಕು. ಹೆಚ್ಚಿನ ಮಾಹಿತಿಗಾಗಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯನ್ನು ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.
