ಉದಯರಶ್ಮಿ ದಿನಪತ್ರಿಕೆ
ಬಿಜಾಪುರ: ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಬ್ರಿಟಿಷರ ಎದೆ ನಡುಗಿಸಿದ, ಸಮ ಸಮಾಜಕ್ಕೆ ಶ್ರಮಿಸಿದ ಮೈಸೂರು ಹುಲಿ ಟಿಪ್ಪು ಸುಲ್ತಾನ್ ಅವರ ಜಯಂತಿಯನ್ನು ಮುಂಬರುವ ದಿನಗಳಲ್ಲಿ ರಾಜ್ಯ ಸರ್ಕಾರದ ವತಿಯಿಂದ ಆಚರಿಸಬೇಕು ಎಂದು ಕಾಂಗ್ರೇಸ್ ಪಕ್ಷದ ಜಿಲ್ಲಾ ಮುಖಂಡ ಅಬ್ದುಲ್ಹಮೀದ್ ಮುಶ್ರೀಫ್ ಮುಖ್ಯಮಂತ್ರಿ ಸಿದ್ಧರಾಮಯ್ಯ ಹಾಗೂ ಸಚಿವ ಎಂ.ಬಿ.ಪಾಟೀಲ ಅವರಿಗೆ ಒತ್ತಾಯಿಸಿದರು.
ನಗರದ ಟಿಪ್ಪು ಸುಲ್ತಾನ್ ವೃತ್ತದಲ್ಲಿ ಭಾನುವಾರದಂದು ಟಿಎಸ್ಎಸ್ ಸಂಘಟನೆಯ ವತಿಯಿಂದ ನಡೆದ ಮೈಸೂರು ಹುಲಿ ಟಿಪ್ಪು ಸುಲ್ತಾನ್ ಅವರ ಜಯಂತಿ ಕಾರ್ಯಕ್ರಮದಲ್ಲಿ ಟಿಪ್ಪು ಸುಲ್ತಾನ್ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಅವರು ಮಾತನಾಡಿ, ದೇಶದಲ್ಲಿ ಈ ಹಿಂದೆ ಟಿಪ್ಪು ಸುಲ್ತಾನ್ ಅವರನ್ನು ಕಂಡರೆ ಬ್ರಿಟೀಷರು ಅಂಜುತ್ತಿದ್ದರು. ಆದರೆ ಇಂದು ಟಿಪ್ಪು ಸುಲ್ತಾನ್ಗೆ ಬಿಜೆಪಿ ಪಕ್ಷದವರು ಹೆದರುತ್ತಿದ್ದಾರೆ. ಯಾರೇ ಏನೆ ಅಂದರೂ ಟಿಪ್ಪು ಸುಲ್ತಾನ್ ಜಯಂತಿ ನಿಲ್ಲುವದಿಲ್ಲ ಎಂದು ನುಡಿದರು.
ಅಹಿಂದ್ ಮುಖಂಡ ಎಸ್.ಎಂ. ಪಾಟೀಲ ಗಣಿಹಾರ ಮಾತನಾಡಿ, ಸಮಾಜದಲ್ಲಿ ಸಮಾನತೆಗೆ ಹೋರಾಡಿದ ಮೈಸೂರು ಹುಲಿ ಟಿಪ್ಪು ಸುಲ್ತಾನ್ ಅವರ ವಿರುದ್ದ ಅಪಪ್ರಚಾರ ಮಾಡುತ್ತಿರುವವರ ವಿರುದ್ಧ ಕಿಡಿಕಾರಿದರು.
ಕರವೇ ರಾಜ್ಯ ಮುಖಂಡ ಎಂ.ಸಿ. ಮುಲ್ಲಾ, ಟಿಎಸ್ಎಸ್ ಸಂಘಟನೆಯ ಅಧ್ಯಕ್ಷ ಇರಫಾನ್ ಶೇಖ ಮಾತನಾಡಿ, ಮೈಸೂರು ಹುಲಿ ಟಿಪ್ಪು ಸುಲ್ತಾನ್ ಅವರ ತ್ಯಾಗ, ಬಲಿದಾನ ಮರೆಯಲಾಗದು. ಇಂತಹ ಮಹಾನ್ ನಾಯಕರ ಕುರಿತು ಹಗುರವಾಗಿ ಮಾತನಾಡಿದ ನಗರ ಶಾಸಕ ಬಸನಗೌಡ ಯತ್ನಾಳ ವಿರುದ್ದ ಕಿಡಿಕಾರಿದರು.
ಹಾಸಿಂಪೀರ ದರ್ಗಾದ ವಂಶಸ್ಥ ಜೈನುಲಾಬ್ದಿನ್ ಪೀರಾ, ಸಜ್ಜಾದೆ ಪೀರಾ ಮುಶ್ರೀಪ್, ಬಿಡಿಎ ಅಧ್ಯಕ್ಷ ಕನ್ನಾನ್ ಮುಶ್ರೀಫ್, ಮಹಾನಗರ ಪಾಲಿಕೆಯ ಸದಸ್ಯರಾದ ಕೈಸರ್ ಇನಾಮದಾರ, ಅನ್ವರ ಮನಗೂಳಿ, ಅಲ್ಲಾಭಕ್ಷ ಬಡೇಗಾರ, ಪಾಲಿಕೆಯ ಮಾಜಿ ಸದಸ್ಯ ಅಬ್ದುಲ್ರಜಾಕ್ ಹೋರ್ತಿ, ಅತಾವುಲ್ಲಾ ದ್ರಾಕ್ಷಿ, ಮಹಾದೇವ ರಾವಜಿ, ಅಪ್ಪು ಪೂಜಾರಿ, ಅಲ್ತಾಫ್ ಇಟಗಿ, ಬಂದೇನವಾಜ್ ಬೀಳಗಿ, ಮಲ್ಲು ತೋರವಿ, ವಕೀಲರಾದ ಸಮದ್ ಸುತಾರ, ಗೌಸ್ ಹವಾಲ್ದಾರ್, ಹಸನ್ ಪಟೇಲ್, ಮುಖಂಡರಾದ ಜೈನುದ್ದೀನ್ ಗುಂಡಬಾವಡಿ, ಅಲ್ತಾಫ್ ಲಕ್ಕುಂಡಿ, ಇಮಾಮ್ ಮುಲ್ಲಾ, ಹಾಫಿಜ್ ಸಿದ್ಧಿಕಿ, ವಸಂತ ಹೊನಮೊಡೆ, ಈರಪ್ಪ ಕುಂಬಾರ, ಸಂಘಟನೆಯ ಇಂಡಿ ತಾಲೂಕು ಮುಖಂಡ ಅಲ್ಲಾಭಕ್ಷ ಘೋರೆ, ಹಾಜಿ ನದಾಫ್, ಅನ್ನಾನ್ ಶೇಖ, ಅನ್ವರ ಜಮಖಂಡಿ, ಅಗಸಬಾಳ, ಮುನ್ನಾ ಮುಲ್ಲಾ ಸೇರಿದಂತೆ ಟಿಎಸ್ಎಸ್ ಸಂಘಟನೆಯ ಜಿಲ್ಲಾ ಹಾಗೂ ತಾಲೂಕು ಘಟಕದ ಪದಾಧಿಕಾರಿಗಳು, ಟಿಪ್ಪು ಅಭಿಮಾನಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

