ಉದಯರಶ್ಮಿ ದಿನಪತ್ರಿಕೆ
ಚಿಮ್ಮಡ: ಇಂದಿನ ಒತ್ತಡದ ಬದುಕಿನಲ್ಲಿ ನಗುವು ಮಾಯವಾಗಿದ್ದು, ಆರೋಗ್ಯದ ಮೂಲವಾಗಿರುವ ನಗುವು ತರಿಸುವ ಮನರಂಜನಾ ಕಾರ್ಯಕ್ರಮಗಳು ಇಂದಿನ ಅವಶ್ಯಕವಾಗಿವೆ ಎಂದು ಚಿಮ್ಮಡ ವಿರಕ್ತಮಠದ ಶ್ರೀ ಪ್ರಭು ಮಹಾಸ್ವಾಮಿಗಳು ಹೇಳಿದರು.
ಗ್ರಾಮದ ರಘುನಾಥ ಪ್ರೀಯ ಸಾಧು ಮಹಾರಾಜರ ಜಾತ್ರೆಯ ನಿಮಿತ್ತ ಹಮ್ಮಿಕೊಳ್ಳಲಾಗಿದ್ದ ಅರುಣೋದಯ ಗ್ರಾಮೀಣಾಭಿವೃಧ್ಧಿ ಸಂಸ್ಥೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಂಯುಕ್ತ ಆಶೃಯದಲ್ಲಿ ಹಮ್ಮಿಕೊಳ್ಳಲಾಗಿದ್ದ “ಅರುಣೋತ್ಸವ-೨೦೨೪’ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ನಗು ಮನಸ್ಸಿನ ಒತ್ತಡವನ್ನು ಕಡಿಮೆ ಮಾಡಿ ಆರೋಗ್ಯವನ್ನು ಸಮಸ್ಥಿತಿಯಲ್ಲಿಡಲು ಸಹಕಾರಿಯಾಗಿದೆ, ನಗುವಿನಿಂದ ಆಯುಷ್ಯವೃಧ್ದಿಯಾಗುತ್ತದೆ ಎಂದರು.
ಕಾರ್ಯಕ್ರಮದ ಸಾನಿಧ್ಯವನ್ನು ಓಂಕಾರ ಮಹಾರಾಜರು ವಹಿಸಿದ್ದರು. ಸಂಸ್ಥೆಯ ಅಧ್ಯಕ್ಷ ಕಲ್ಲುಗೌಡ ಪಾಟೀಲ ಅಧ್ಯಕ್ಷತೆ ವಹಿಸಿದ್ದರು.
ಮುಖ್ಯ ಅಥಿತಿಗಳಾಗಿ ರಬಕವಿ-ಬನಹಟ್ಟಿ ನಗರ ಪ್ರಾಧಿಕಾರದ ಮಾಜಿ ಅಧ್ಯಕ್ಷ ದುಂಡಪ್ಪಾ ಕರಿಗಾರ, ಸಂಗಮೇಶ ಬಾಬಾಗೌಡ ಪಾಟೀಲ, ನ್ಯಾಯವಾದಿ ಮಹೇಶ ಸಿಂಗಿ, ನಂದಕುಮಾರ, ಪಿಕೆಪಿಎಸ್ ಅಧ್ಯಕ್ಷ ಹಣಮಂತ ನೇಸೂರ, ಗ್ರಾ.ಪಂ. ಮಾಜಿ ಅಧ್ಯಕ್ಷ ಶಂಕರ ಬಟಕುರ್ಕಿ, ಅಶೋಕ ಮೋಟಗಿ, ಪ್ರಭು ಮುಧೋಳ, ಮಹಾಲಿಂಗ ಮಾಯಣ್ಣವರ, ರಾಜು ಬಗನಾಳ, ಗ್ರಾಮ ಆಡಳಿತ ಅಧಿಕಾರಿ ಮಂಜುನಾಥ ನೀಲನ್ನವರ, ಸದಾಶೀವ ಕುಂಬಾರ, ಅರಭಾಜ ಜಮಖಂಡಿ, ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ಕಾಮಿಡಿ ಕಿಲಾಡಿಗಳು ಶೋ ವಿಜೇತ ಹರೀಶ ಹಿರಿಯೂರು, ಜಗ್ಗಪ್ಪ ಬೆಂಗಳೂರುರವರ ಕಾಮಿಡಿ ಪಂಚ್ಗೆ ಪ್ರೇಕ್ಷಕರು ಫಿದಾ ಆದರು,
ಇದೇ ಸಂಧರ್ಬದಲ್ಲಿ ರಾಷ್ಟ್ರೀಯ ಕೃಷಿ ಪ್ರಶಸ್ತಿ ವಿಜೇತ ನಿಂಗಣ್ಣ ಪೂಜಾರಿ, ಮಹಾಲಿಂಗಪುರದ ವೈದ್ಯ ಡಾ. ಎ.ಆರ್. ಬೆಳಗಲಿ, ಆದರ್ಶ ಶಿಕ್ಷಕಿ ಪ್ರಶಸ್ತಿ ವಿಜೇತ ಸರಕಾರಿ ಪ್ರೌಢ ಶಾಲೆಯ ಮುಖ್ಯ ಶಿಕ್ಷಕಿ ಶ್ರೀಮತಿ ಎಂ.ಎಸ್. ಜಿಟ್ಟಿ, ವಿಶೇಷ ಸಾಧನೆಗೈದ ವಿದ್ಯಾರ್ಥಿನಿಯರನ್ನು ಸತ್ಕರಿಸಿ ಗೌರವಿಸಲಾಯಿತು.
ಸಂಸ್ಥೆಯ ಉಪಾಧ್ಯಕ್ಷ ಪೈಗಂಬರ ಯಾದವಾಡ, ಪ್ರವೀಣ ಮೈತ್ರಿ, ಲಕ್ಷö್ಮಣ ತಿಮ್ಮಾಪೂರ, ಗುರುಪಾದ ನೇಸೂರ, ಸದಾಶಿವ ಉರಭಿನವರ, ಮಹಾಂತೇಶ ಯಂಕಂಚಿ, ಮಹಾದೇವ ಕೋಳಿ, ಮಹಾಂತೇಶ ಧಡೂತಿ, ಅಲ್ಲಾವುದ್ದೀನ ನದಾಫ, ರಾಘವೇಂದ್ರ ಬಡಿಗೇರ ಉಪಸ್ಥಿತರಿದ್ದರು. ಶಿಕ್ಷಕರಾದ ಪ್ರಕಾಶ ಪುಜಾರಿ ಸ್ವಾಗತಿಸಿ ನಿರೂಪಿಸಿದರು, ಉಪನ್ಯಾಸಕ ಪ್ರಕಾಶ ಬಡಿಗೇರ ವಂದಿಸಿದರು.

