ಉದಯರಶ್ಮಿ ದಿನಪತ್ರಿಕೆ
ಬಸವನಬಾಗೇವಾಡಿ: ಪಟ್ಟಣದ ಜನಪದ ಗಾಯಕ ಬಸವರಾಜ ಹಾರಿವಾಳ ಅವರ ನಿವಾಸದಲ್ಲಿ ಶುಕ್ರವಾರ ಬಸವೇಶ್ವರ ತಾಲೂಕು ವಿಕಲಚೇತನರ ಸಂಘದಿಂದ ಜಾನಪದ ಸಾಹಿತ್ಯ ಕ್ಷೇತ್ರದಲ್ಲಿ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಸ್ವೀಕರಿಸಿದ ಜನಪದ ಗಾಯಕ ಬಸವರಾಜ ಸಂಗಪ್ಪ ಹಾರಿವಾಳ ಅವರನ್ನು ಸನ್ಮಾನಿಸಿ ಅಭಿನಂದಿಸಲಾಯಿತು. ಈ ಸಂದರ್ಭದಲ್ಲಿ
ತಾಲೂಕು ವಿಕಲಚೇತನರ ಸಂಘದ ಆದ್ಯಕ್ಷ ಚನ್ನಯ್ಯ ಸಾರಂಗಮಠ, ಸದಸ್ಯರಾದ ಅಪ್ಪು ಸುಂಕದ, ಶಿವರಾಜಕುಮಾರ ಪಾತ್ರೋಟಿ , ಮಹ್ಮದ ಮುಲ್ಲಾ, ರಾಜು ಹಾರಿವಾಳ ರುಕೀಯಾ ಲೋಗಾಂವಿ ಇದ್ದರು.

