ಎಸ್ಸೆಸ್ಸೆಲ್ಸಿ ಮಕ್ಕಳಿಗೆ ಪಠ್ಯಯಾಧಾರಿತ ರಸಪ್ರಶ್ನೆ ಕಾರ್ಯಕ್ರಮ | ಹರುಷದಿಂದ ಮಕ್ಕಳು ಭಾಗಿ | ಹಳದಿ, ಕೆಂಪು ತಂಡಕ್ಕೆ ಪ್ರಶಸ್ತಿ
ಉದಯರಶ್ಮಿ ದಿನಪತ್ರಿಕೆ
ಚಿಕ್ಕಪಡಸಲಗಿ: ಪ್ರಸಕ್ತ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷಾ ಫಲಿತಾಂಶ ವೃದ್ಧಿಗೊಸ್ಕರ ಗದುಗಿನ ತೋಂಟದಾರ್ಯ ವಿದ್ಯಾಪೀಠ ಸಂಸ್ಥೆಯ ಇಲ್ಲಿನ ಶಿವಶರಣ ಹರಳಯ್ಯ ಸ್ಮಾರಕ ಪ್ರೌಢಶಾಲಾ ಎಸ್ಸೆಸ್ಸೆಲ್ಸಿ ಮಕ್ಕಳಿಗಾಗಿ ಶುಕ್ರವಾರ ಪಠ್ಯಾಧಾರಿತ ವಿಷಯಗಳ ಕುರಿತು ರಸಪ್ರಶ್ನೆ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಮಧ್ಯಾಹ್ನದ ಅವಧಿಯಲ್ಲಿ ಹಮ್ಮಿಕೊಂಡಿದ್ದ ಕನ್ನಡ, ಇಂಗ್ಲೀಷ್, ಹಿಂದಿ, ವಿಜ್ಞಾನ, ಗಣಿತ,ಸಮಾಜ ವಿಜ್ಞಾನ ಈ ಎಲ್ಲ ಆರು ವಿಷಯವನ್ನು ಒಳಗೊಂಡ ರಸಪ್ರಶ್ನೆ ಕಾರ್ಯಕ್ರಮದಲ್ಲಿ ಮಕ್ಕಳು ಅತ್ಯಂತ ಉತ್ಸುಕರಾಗಿ ಪಾಲ್ಗೊಂಡಿದ್ದರು. ಕೇಳಲಾದ ಪ್ರಶ್ನೆಗಳಿಗೆ ಥಟ್ಟನೆ ಉತ್ತರ ನೀಡುತ್ತಾ ಪರಸ್ಪರ ಖುಷಿ,ಸಂಭ್ರಮ ಹಂಚಿಕೊಂಡರು. ಲವಲವಿಕೆಯ ಅಲೆಯಲ್ಲಿ ಮಿನುಗಿದರು.
ಬಾಲಕರ ವಿಭಾಗದ ರಸಪ್ರಶ್ನೆ ಕಾರ್ಯಕ್ರಮದಲ್ಲಿ ಸಂಗಮೇಶ ಹಿಪ್ಪರಗಿ ನೇತೃತ್ವದ ಹಳದಿ ತಂಡ 50 ಅಂಕ ಪಡೆದು ಪ್ರಥಮ ಸ್ಥಾನ ಪಡೆಯಿತು. ಆಕಾಶ ಬಡಿಗೇರ ನೇತೃತ್ವದ ಹಸಿರು ತಂಡ 45 ಅಂಕದೊಂದಿಗೆ ದ್ವೀತಿಯ ಸ್ಥಾನ ಪಡೆದರೆ ರಾಹುಲ ರಾಯಪ್ಪಗೋಳ ನಾಯಕತ್ವದ ಕೆಂಪು ತಂಡ 25 ಅಂಕ ಪಡೆದು ತೃತೀಯ ಸ್ಥಾನ ಗಳಿಸಿತು.
ಅದರಂತೆ ಬಾಲಕಿಯರ ವಿಭಾಗದಲ್ಲಿ ಐಶ್ವರ್ಯ ಬಜಂತ್ರಿ ನೇತೃತ್ವದ ಕೆಂಪು ತಂಡ ಅತ್ಯಾಧಿಕ ಪ್ರಶ್ನೆಗಳಿಗೆ ಸಮರ್ಪಕ ಉತ್ತರವನ್ನು ನೀಡಿ ಗೆಲುವು ಸಾಧಿಸಿತು. ಈ ತಂಡ 85 ಅಂಕ ಪಡೆಯುವ ಮೂಲಕ ಪ್ರಥಮ ಸ್ಥಾನದ ಪ್ರಾಬಲ್ಯ ಮೆರೆಯಿತು. ಗಾಯತ್ರಿ ಮರೆಗುದ್ದಿ ನೇತೃತ್ವದ ಹಸಿರು ತಂಡ 70 ಅಂಕ ಸಂಪಾದಿಸಿ ದ್ವೀತಿಯ ಸ್ಥಾನ ಗಳಿಸಿತು. ಬೌರಮ್ಮ ಕಲ್ಯಾಣಿ ನೇತೃತ್ವದಲ್ಲಿ ನೀಲಿ ತಂಡ 65 ಅಂಕ ಗಳಿಸಿದ ತೃತೀಯ ಸ್ಥಾನಕ್ಕೆ ತೃಪ್ತಿಪಟ್ಟಿತ್ತು. ವಿಜಯಿ ತಂಡಗಳಿಗೆ ಪ್ರಶಸ್ತಿ ಪತ್ರಗಳನ್ನು ನೀಡಿ ಪ್ರೋತ್ಸಾಹಿಸಲಾಯಿತು.
ಪ್ರಭಾರ ಮುಖ್ಯೋಪಾಧ್ಯಾಯ ಬಸವರಾಜ ಜಾಲೋಜಿ ಮಾರ್ಗದರ್ಶನದಲ್ಲಿ ರಸಪ್ರಶ್ನೆ ಕಾರ್ಯಕ್ರಮ ಅಚ್ಚುಕಟ್ಟಾಗಿ ಆಯೋಜಿಸಲಾಗಿತ್ತು.
ಈ ವೇಳೆ ಅವರು ಮಾತನಾಡಿ, ರಸಪ್ರಶ್ನೆ ಕಾರ್ಯಕ್ರಮ ಮಕ್ಕಳ ಬುದ್ಧಿ ಮತ್ತೆ ಚುರುಕಿಗೆ ಸಹಕಾರಿಯಾಗಿದೆ. ಜ್ಞಾನ ಸಂಗ್ರಹಕ್ಕೆ ಪೂರಕವಾಗಿದೆ. ಮಿಂಚಿನ ವೇಗದಲ್ಲಿ ಪ್ರಶ್ನೆಗಳಿಗೆ ಉತ್ತರಿಸುವ ಕೌಶಲ್ಯ, ದಿಟ್ಟ ಸಾಮಥ್ರ್ಯ ವೃದ್ಧಿಸುತ್ತದೆ. ಸ್ಪಧಾ೯ತ್ಮಕ ಯುಗದಲ್ಲಿಂದು ರಸಪ್ರಶ್ನೆದಂಥ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಮಕ್ಕಳು ಭಾಗವಹಿಸಬೇಕು. ಇದರಿಂದ ತ್ವರಿತವಾಗಿ ಭಾವಾಭಿವ್ಯಕ್ತಗೊಳಿಸುವ ಮನೋಸ್ಥೈರ್ಯದ ಬಲವನ್ನು ನಿಮ್ಮ ಮಸ್ತಕದಲ್ಲಿ ಹೊಂದುವುದರ ಮೂಲಕ ಶೈಕ್ಷಣಿಕ ಜೀವನ ಚೈತ್ರದ ಪಥದಲ್ಲಿ ರಾರಾಜಿಸಬೇಕು. ಉತ್ತಮ ನಾಗರಿಕ ಚರಿತೆಯ ವ್ಯಕ್ತಿತ್ವವನ್ನು ಸಂಪಾದಿಸಿಕೊಳ್ಳಲು ಮುಂದಾಗಬೇಕು ಎಂದು ಸಲಹೆ ನೀಡಿದರು.
ಶಿಕ್ಷಕ ಲೋಹಿತ ಮಿಜಿ೯, ಈರಪ್ಪ ದೇಸಾಯಿ, ಶ್ರೀಶೈಲ ಹುಣಶಿಕಟ್ಟಿ, ಶಿಕ್ಷಕಿ ಸಹನಾ ಕಲ್ಯಾಣಿ (ಹತ್ತಳ್ಳಿ) ರಸಪ್ರಶ್ನೆ ಕಾರ್ಯಕ್ರಮ ನಿರೂಪಿಸಿದರು. ಹಿರಿಯ ಮಾರ್ಗದಶಿ೯ ಬಸವರಾಜ ಅನಂತಪೂರ, ಗುರುಮಾತೆ ಕವಿತಾ ಅಂಬಿ.ಪ್ರಮೀಳಾ ತೇಲಸಂಗ ಇತರರಿದ್ದರು.

