Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

ಮಕ್ಕಳ ಬದುಕಿನಲ್ಲಿ ಪಾಲಕರ ಆಕರ್ಷಣೆ

ಮಹಿಳೆಯರಿಂದ ನಂಜಿಕೆ ತಿನಿಸು ತಯಾರಿಕೆ ಈಗ ಬಲು ಜೋರು

ಜಾನುವಾರುಗಳ ಉಚಿತ ತಪಾಸಣೆ ಹಾಗೂ ಚಿಕಿತ್ಸೆ ಶಿಬಿರ

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»(ರಾಜ್ಯ ) ಜಿಲ್ಲೆ»ಮಾಸದ ನೆನಪುಗಳಿಗೆ ಮಿಲನದ ರಂಗು :ಇಂದುಶೇಖರ ಮಣೂರ
(ರಾಜ್ಯ ) ಜಿಲ್ಲೆ

ಮಾಸದ ನೆನಪುಗಳಿಗೆ ಮಿಲನದ ರಂಗು :ಇಂದುಶೇಖರ ಮಣೂರ

By Updated:No Comments2 Mins Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

ಉದಯರಶ್ಮಿ ದಿನಪತ್ರಿಕೆ

ವಿಜಯಪುರ: ಗೆಳೆತನ ಎಂಬುದೊಂದು ಗಟ್ಟಿ ಬಂಧನ. ಸ್ನೇಹ ಆಕಸ್ಮಿಕವಾದರೂ ಅಪರೂಪವಾದ ಬಂಧ. ನಮ್ಮ ನೋವು-ನಲಿವಿಗೆ ಸ್ಪಂದಿಸುವ ಆ ಜೀವದಿಂದ ಸಿಗುವ ಕಾಳಜಿ, ಆತ್ಮೀಯತೆ ಮತ್ತು ಸಂತೋಷಕ್ಕೆ ಬೆಲೆ ಕಟ್ಟಲಾಗದು ಎಂದು ’ಉದಯರಶ್ಮಿ’ ಪತ್ರಿಕೆ ಸಂಪಾದಕ ಹಾಗೂ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಉಪಾಧ್ಯಕ್ಷ ಇಂದುಶೇಖರ ಮಣೂರ ಹೇಳಿದರು.
ವಿಜಯಪುರದ ಚಾಣಕ್ಯ ಮಹಾವಿದ್ಯಾಲಯದಲ್ಲಿ ಕರ್ನಾಟಕ ಲಲಿತಕಲಾ ಅಕಾಡೆಮಿ ಯು ಈ ವಿದ್ಯಾಲಯದ ಸಹಯೋಗದೊಂದಿಗೆ ಆಯೋಜಿಸಿದ “ಮೈಸೂರು ಸಾಂಪ್ರದಾಯಿಕ ಶೈಲಿ ತರಬೇತಿ ಕಾರ್ಯಾಗಾರ” ದಲ್ಲಿ ಪಾಲ್ಗೊಳ್ಳಲು ಆಗಮಿಸಿದ ಕಲಾವಿದ ಮಿತ್ರರಿಂದ ತಮ್ಮದೇ ಭಾವಚಿತ್ರದ ಕಲಾಕೃತಿ ಸ್ವೀಕರಿಸಿ ಅವರು ಭಾವುಕರಾಗಿ ನುಡಿದರು.


ಎಂಭತ್ತರ ದಶಕದ ಸ್ನೇಹಿತರನ್ನು ಹಲವು ದಶಕಗಳ ಬಳಿಕ ಮುಖಾಮುಖಿಯಾಗಿದ್ದು ಇದೊಂದು ಅವಿಸ್ಮರಣೀಯ ಘಳಿಗೆ‌. ಸಂತೋಷಕುಮಾರ್ ಮತ್ತು ರವೀಶ್ ಇವರೊಂದಿಗಿನ ಎಂದೂ ಮಾಸದ ನೆನಪುಗಳಿಗೆ ಇಂದಿನ ಈ ಮಿಲನ ಮತ್ತಷ್ಟು ರಂಗು ತುಂಬಿದೆ ಎಂದು ಇಂದುಶೇಖರ ಮಣೂರ ಸಂತಸ ವ್ಯಕ್ತಪಡಿಸಿದರು.
ಸಂಪಾದಕ ಮಣೂರ ಅವರ ೮೦ ರ ದಶಕದ ಬೆಂಗಳೂರಿನ ಕೆನ್ ಕಲಾ ಶಾಲೆಯ ಸಹಪಾಠಿಗಳಾದ ಚಿಕ್ಕಬಳ್ಳಾಪುರದ ಕಲಾ ಶಿಕ್ಷಕ ಸಂತೋಷಕುಮಾರ ಎನ್.ಆರ್ ಹಾಗೂ ಮೈಸೂರಿನ ಕಲಾ ಶಿಕ್ಷಕ ಎಚ್.ಎನ್.ರವೀಶ್ ಮಾತನಾಡಿ, ಸ್ನೇಹದಲ್ಲಿ ಅಹಂ ಆಗಲಿ, ದ್ವೇಷವಾಗಲಿ ಸುಳಿಯಬಾರದು. ಸ್ನೇಹ ಸರಿಯಾದ ಮಾರ್ಗದಲ್ಲಿ ನಡೆಯಲು ನಮ್ಮ ಸುಗುಣಗಳು ಸಹಕಾರಿಯಾಗಬೇಕು. ನಿಜವಾದ ಸ್ನೇಹಿತರ ನಡುವಿನ ಬಾಂಧವ್ಯ ಎಷ್ಟು ಪ್ರಬಲವಾಗಿದೆಯೆಂದರೆ, ಅದು ಜೀವನದುದ್ದಕ್ಕೂ ಇರುತ್ತದೆ. ನಿಜವಾದ ಸ್ನೇಹಿತನನ್ನು ಹೊಂದಿರುವುದು ತುಂಬಾ ಮೌಲ್ಯಯುತವಾದುದು ಎಂದ ಅವರು ’ಕೆನ್ ಸ್ಕೂಲ್ ಆಫ್ ಆರ್ಟ್’ ದಿನಗಳನ್ನು ಮೆಲುಕು ಹಾಕಿದರು.
ಈ ಹಳೆಯ ಮಿತ್ರರ ಮಾಸದ ನೆನಪುಗಳ ಮೆರವಣಿಗೆಗೆ ತುಮಕೂರಿನ ಹಿರಿಯ ಕಲಾವಿದ ರವಿಕುಮಾರ್ ಡಿ.ಬಿ, ಮೈಸೂರಿನ ಕಲಾವಿದ ರಾಜಕುಮಾರ್ ಸಾಕ್ಷಿಯಾಗಿದ್ದರು.

ಭಾವಚಿತ್ರ ಕಲಾಕೃತಿ ಕೊಡುಗೆ

ಚಿಕ್ಕಬಳ್ಳಾಪುರ ದ ಹಿರಿಯ ಕಲಾವಿದ ಸಂತೋಷಕುಮಾರ ಎನ್.ಆರ್ ತಮ್ಮ ಸನ್ಮಿತ್ರ, ’ಉದಯರಶ್ಮಿ’ ಸಂಪಾದಕ ಇಂದುಶೇಖರ ಮಣೂರ ಅವರಿಗೆ ತಾವು ಅಭಿಮಾನದಿಂದ ಸ್ನೇಹದ್ಯೋತಕವಾಗಿ ರಚಿಸಿದ ಅವರದೇ ಭಾವಚಿತ್ರದ ಕಲಾಕೃತಿಯನ್ನು ನೀಡಿ ಗೌರವಿಸಿದರು.

“ವರ್ಷಗಳು ಕಳೆದಂತೆ ಹಳೆಯ ಸ್ನೇಹಿತರು ನಮಗೆ ಹೆಚ್ಚು ಹೆಚ್ಚು ಅಮೂಲ್ಯರಾಗುತ್ತಾರೆ. ಹಿಂದೆ ಹೇಗೆ ಇದ್ದೆವು? ಈಗ ಹೇಗಾಗಿದ್ದೇವೆ? ಪಟ್ಟ ತೊಂದರೆಗಳು, ಗಳಿಸಿದ ಸಾಮರ್ಥ್ಯಗಳು ಈ ಎಲ್ಲವನ್ನೂ ಮೆಲುಕು ಹಾಕುತ್ತ, ನೆಮ್ಮದಿಯ ಬದುಕಿನ ಮಾರ್ಗವನ್ನು ಇನ್ನಷ್ಟು ಸುಗಮಗೊಳಿಸಿಕೊಳ್ಳಬಹುದು. ಪರಿಶುದ್ಧ, ನಿಸ್ವಾರ್ಥ, ತ್ಯಾಗದಿಂದ ಕೂಡಿದ ನಿಷ್ಕಲ್ಮಶ ಸ್ನೇಹ ಸಮಾಜಕ್ಕೂ ಒಳಿತನ್ನುಂಟು ಮಾಡುತ್ತದೆ.”

– ಇಂದುಶೇಖರ ಮಣೂರ
ಸಂಪಾದಕರು, ’ಉದಯರಶ್ಮಿ’ ದಿನಪತ್ರಿಕೆ

BIJAPUR NEWS public public news udaya rashmi Udayarashmi today newspaper udayarashminews.com
Share. Facebook Twitter Pinterest Email Telegram WhatsApp
  • Website

Related Posts

ಮಕ್ಕಳ ಬದುಕಿನಲ್ಲಿ ಪಾಲಕರ ಆಕರ್ಷಣೆ

ಮಹಿಳೆಯರಿಂದ ನಂಜಿಕೆ ತಿನಿಸು ತಯಾರಿಕೆ ಈಗ ಬಲು ಜೋರು

ಜಾನುವಾರುಗಳ ಉಚಿತ ತಪಾಸಣೆ ಹಾಗೂ ಚಿಕಿತ್ಸೆ ಶಿಬಿರ

ದುಡಿದು ತಿನ್ನದವರು ಗಂಡಸರಲ್ಲ :ದಿಂಗಾಲೇಶ್ವರ ಶ್ರೀ

Add A Comment

Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Uncategorized
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • ಮಕ್ಕಳ ಬದುಕಿನಲ್ಲಿ ಪಾಲಕರ ಆಕರ್ಷಣೆ
    In ವಿಶೇಷ ಲೇಖನ
  • ಮಹಿಳೆಯರಿಂದ ನಂಜಿಕೆ ತಿನಿಸು ತಯಾರಿಕೆ ಈಗ ಬಲು ಜೋರು
    In (ರಾಜ್ಯ ) ಜಿಲ್ಲೆ
  • ಜಾನುವಾರುಗಳ ಉಚಿತ ತಪಾಸಣೆ ಹಾಗೂ ಚಿಕಿತ್ಸೆ ಶಿಬಿರ
    In (ರಾಜ್ಯ ) ಜಿಲ್ಲೆ
  • ದುಡಿದು ತಿನ್ನದವರು ಗಂಡಸರಲ್ಲ :ದಿಂಗಾಲೇಶ್ವರ ಶ್ರೀ
    In (ರಾಜ್ಯ ) ಜಿಲ್ಲೆ
  • ಅಂತರಂಗದ ಅರಿವು ಜಾಗೃತಗೊಳಿಸುವ ಪ್ರಕ್ರಿಯೆ ಲಿಂಗದೀಕ್ಷೆ
    In (ರಾಜ್ಯ ) ಜಿಲ್ಲೆ
  • ಡಾ.ಅಂಬೇಡ್ಕರ್ ಜಯಂತಿಯಲ್ಲಿ ಅಧಿಕಾರಿಗಳು ಕಡ್ಡಾಯವಾಗಿ ಪಾಲ್ಗೊಳ್ಳಿ
    In (ರಾಜ್ಯ ) ಜಿಲ್ಲೆ
  • ದೇವರಹಿಪ್ಪರಗಿ ಮಡಿವಾಳ ಮಾಚಿದೇವರ ರಥೋತ್ಸವ ಸಂಪನ್ನ
    In (ರಾಜ್ಯ ) ಜಿಲ್ಲೆ
  • ಅಲ್ಪ ಸಂಖ್ಯಾತರ ಆಯೋಗದ ಅಧ್ಯಕ್ಷರ ಜಿಲ್ಲಾ ಪ್ರವಾಸ
    In (ರಾಜ್ಯ ) ಜಿಲ್ಲೆ
  • ಮಾ.೩೦ರಂದು ಭಗವಾನ್ ಶ್ರೀ ಮಹಾವೀರ ಜಯಂತಿ
    In (ರಾಜ್ಯ ) ಜಿಲ್ಲೆ
  • ಎಇಇ ಮೇಲೆ ಶಿಸ್ತುಕ್ರಮಕ್ಕೆ ದಲಿತ ಸ್ವರಾಜ್ಯ ಸೇನೆ ಆಗ್ರಹಿಸಿ ಮನವಿ
    In (ರಾಜ್ಯ ) ಜಿಲ್ಲೆ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2026 udayarashminews.com. Designed by udayarashmi news .

Type above and press Enter to search. Press Esc to cancel.