ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ಡಾ.ಬಿ.ಆರ್.ಅಂಬೇಡ್ಕರ ಅವರ ತತ್ವಾದರ್ಶಗಳ ತಳಹದಿಯ ಮೇಲೆ ಎಲ್ಲರೂ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಬೇಕು. ಅವರು ಹೇಳಿದ ತತ್ವ ಸಿದ್ಧಾಂತ ಹಾಗೂ ಕ್ರಾಂತಿ ಹೋರಾಟದ ತೇರನ್ನು ತಂದು ಬಿಟ್ಟಿದ್ದೇನೆ ಎಂದು ಜಿಲ್ಲಾ ಪ್ರಧಾನ ಸಂಚಾಲಕ ಸಂಜು ಕಂಬಾಗಿ ಹೇಳಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ವಾದ) ಸಿಂದಗಿ, ಆಲಮೇಲ ತಾಲೂಕಿನ ನೂತನ ಪದಾಧಿಕಾರಿಗಳನ್ನು ಸರ್ವಾನುಮತದಿಂದ ಆಯ್ಕೆಮಾಡಿ ಮಾತನಾಡಿದ ಅವರು, ಹೋರಾಟದ ತೇರನ್ನು ಎಲ್ಲರೂ ಒಂದುಗೂಡಿ ಎಳೆಯುವ ಕಾರ್ಯವಾಗಬೇಕು. ಸಂಘಟನೆಯ ರಾಜ್ಯ ಪ್ರಧಾನ ಸಂಚಾಲಕರ ಆಸೆಯಂತೆ ನೂತನ ಪದಾಧಿಕಾರಿಗಳು ತಾಲೂಕಿನಾದ್ಯಂತ ಸಂಚರಿಸಿ ಬಡವ, ಹಿಂದುಳಿದ ವರ್ಗ, ಅಲ್ಪ ಸಂಖ್ಯಾತರ, ದಿನ-ದಲಿತರ ಪರವಾಗಿ ಧ್ವನಿ ಎತ್ತುವ ಕಾರ್ಯ ನಿಮ್ಮಿಂದಾಗಬೇಕು ಎಂದರು.
ಈ ವೇಳೆ ಕ.ದ.ಸಂ.ಸ (ಅಂಬೇಡ್ಕರವಾದ) ಸಿಂದಗಿ ತಾಲೂಕಿನ ಪ್ರಧಾನ ಸಂಚಾಲಕರಾಗಿ ಸಿದ್ದು ಪೂಜಾರಿ, ಸಂಘಟನಾ ಸಂಚಾಲಕರನ್ನಾಗಿ ಸಂತೋಷ ಭಾಸ್ಕರ್, ಖಜಾಂಚಿಯಾಗಿ ಶಿವು ಬಡಿಗೇರ, ಸಹ ಸಂಚಾಲಕರನ್ನಾಗಿ ಯಲ್ಲು ಮಿರಗಿ, ಪರಶುರಾಮ ನಾಲ್ಕಮಾನ, ಶಿವಕುಮಾರ ಶರ್ಮಾ, ಏಕನಾಥ ಕಟ್ಟಿಮನಿ, ಅಶೋಕ ಭಜಂತ್ರಿ ಆಸೀಫ್ ಮುಲ್ಲಾ ಅವರನ್ನು ಆಯ್ಕೆ ಮಾಡಲಾಗಿದೆ. ಇನ್ನೂ ಆಲಮೇಲ ತಾಲೂಕಿನ ಪ್ರಧಾನ ಸಂಚಾಲಕರಾಗಿ ಶಶಿಧರ ನಾಯ್ಕೋಡಿ, ಸಂಘಟನಾ ಸಂಚಾಲಕರನ್ನಾಗಿ ಈಶ್ವರ ಮಣಗೀರಿ, ಖಜಾಂಜಿಯಾಗಿ ಗಣೇಶ ಅಣ್ಣೇನವರ, ಸಹ ಸಂಚಾಲಕರಾಗಿ ಚಿದಾನಂದ ಕಾಂಬಳೆ, ಹುಚ್ಚು ಸಿಂಗೆ, ಸಂಜು ಇಟಗಾರ, ಪ್ರಕಾಶ ಬ್ಯಾಕೋಡ, ಖಾಜು ಹಳಿಮನಿ, ಪರಶುರಾಮ ಹೊಸಮನಿ ಅವರನ್ನು ಜಿಲ್ಲಾ ಪ್ರಧಾನ ಸಂಚಾಲಕ ಸಂಜು ಕಂಬಾಗಿ ಅವರ ಅಧ್ಯಕ್ಷತೆಯಲ್ಲಿ ಆಯ್ಕೆ ಮಾಡಲಾಗಿದೆ ಎಂದು ರಾಜ್ಯ ಪ್ರಧಾನ ಸಂಚಾಲಕ ಮಾವಳ್ಳಿ ಶಂಕರ ಪತ್ರಿಕಾ ಪ್ರಕಟಣೆಯ ಮೂಲಕ ತಿಳಸಿದ್ದಾರೆ.
ಈ ವೇಳೆ ವಿಜಯಪುರ ನಗರ ಘಟಕದ ಪ್ರಧಾನ ಸಂಚಾಲಕ ಶಂಕರ ಚಲವಾದಿ, ನಿಕಟಪೂರ್ವ ಸಿಂದಗಿ ತಾಲೂಕಾಧ್ಯಕ್ಷ ಶಿವಕುಮಾರ ಮೇಲಿನಮನಿ, ಜಿಲ್ಲಾ ಮಹಿಳಾ ಒಕ್ಕೂಟ ಅಧ್ಯಕ್ಷೆ ಸುಜಾತ ವಗ್ಗರ ಸೇರಿದಂತೆ ಅನೇಕರು ಇದ್ದರು.

