ಕಲಾವಿದ ರಮೇಶ ಚವ್ಹಾಣ ರ “ನನ್ನ ಅಭಿವ್ಯಕ್ತಿ” ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನ | ಲಲಿತಕಲಾ ಅಕಾಡೆಮಿ ಅಧ್ಯಕ್ಷ ಪ.ಸ.ಕುಮಾರ್ ಅಭಿಮತ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಕಲಾವಿದರು ಸೃಜನಶೀಲರಾಗಿದ್ದರೆ ಮಾತ್ರ ಅವರಿಂದ ಸೃಜನಾತ್ಮಕ ಕಲಾಕೃತಿ ರಚನೆ ಸಾದ್ಯ ಎಂದು ಲಲಿತಕಲಾ ಅಕಾಡೆಮಿ ಅಧ್ಯಕ್ಷ ಪ.ಸ.ಕುಮಾರ್ ಅಭಿಪ್ರಾಯ ವ್ಯಕ್ತಪಡಿಸಿದರು.
ನಗರದ ಸರಕಾರಿ ಆರ್ಟ್ ಗ್ಯಾಲರಿಯಲ್ಲಿ ಬುದವಾರ ಸಂಜೆ ಕ್ಯಾನವಾಸ ಆರ್ಟ್ ಫೌಂಡೇಶನ್ ಆಯೋಜಿಸಿದ ಕಲಾವಿದ ರಮೇಶ ಚವ್ಹಾಣ ಅವರ “ನನ್ನ ಅಭಿವ್ಯಕ್ತಿ” ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನ ಉದ್ಘಾಟಿಸಿ ಅವರು ಮಾತನಾಡಿದರು.
ಕಲೆನಿಂತ ನೀರಾಗಬಾರದು. ಕಲಾವಿದ ನಿರಂತರವಾಗಿ ಕೃತಿ ರಚನೆಯಲ್ಲಿ ತೊಡಗಿದರೆ ಅತ್ಯಂತ ಸುಂದರ ಜೀವನ ಅವನದಾಗುತ್ತದೆ. ದೃಶ್ಯ ಕಲಾ ಪ್ರಕಾರಗಳಲ್ಲಿ ಹಲವಾರು ವಿಷಯಗಳಿದ್ದು, ಅದರಲ್ಲೂ ನವ್ಯಕಲೆಯು ಅತ್ಯಂತ ಕಷ್ಟದ ಕೆಲಸ. ಅದರಲ್ಲಿ ಸಿದ್ದಹಸ್ತರಾದ ಯುವ ಕಲಾವಿದ ರಮೇಶ ಚವ್ಹಾಣ ತಮ್ಮ ಕೆಲಸದಲ್ಲಿ ಸಾಧನೆ ಮಾಡುತ್ತಿರುವುದು ಶ್ಲಾಘನೀಯ ಎಂದರು.
ಪ್ರದರ್ಶನದ ಉದ್ಘಾಟನಾ ಕಾರ್ಯಕ್ರಮದಲ್ಲಿ ಲಲಿತಕಲಾ ಅಕಾಡೆಮಿಯ ರಿಜಿಸ್ಟ್ರಾರ್ ಬಿ. ನೀಲಮ್ಮ. ಪ್ರವಾಸೋದ್ಯಮ ಇಲಾಖೆಯ ಉಪನಿರ್ದೇಶಕ ಮಲ್ಲಿಕಾರ್ಜುನ ಬಜಂತ್ರಿ, ಹಿರಿಯ ಕಲಾವಿದರಾದ ಪಿ.ಎಸ್.ಕಡೇಮನಿ, ಎಂ.ಕೆ.ಪತ್ತಾರ, ವಿದ್ಯಾಧರ ಸಾಲಿ, ಬಾಬುರಾವ್ ನಡೋಣಿ, ಸಂಗಣ್ಣ ಪಾಟೀಲ್, ಡಾ ಶಶಿಕಲಾ ಹೂಗಾರ, ಬಿ.ಎಸ್.ಪಾಟೀಲ್, ಓ ವೆಂಕಟೇಶ, ಸವಿತಾ, ಲಿಂಗರಾಜ ಕಾಚಾಪೂರ, ಸಂತೋಷಕುಮಾರ ಎನ್.ಆರ್, ರವೀಶ ಎಚ್.ಎನ್. ರವಿಕುಮಾರ, ಡಿ.ಬಿ, ಅಕಾಡೆಮಿಯ ಸದಸ್ಯೆ ರಾಜೇಶ್ವರಿ ಮೋಪಗಾರ್, ಆಶಾರಾಣಿ. ನಡೋಣಿ, ವೆಂಕಟೇಶ ಬಡಿಗೇರ್, ವಿಶ್ವನಾಥ ಅಗಸರ್, ಶಿವಾನಂದ ಅಥಣಿ, ಛಾಯಾಗ್ರಾಹಕ ಕಲಾವಿದರಾದ ಸತೀಶ ಕಲಾಲ, ಪ್ರಶಾಂತ ಪಟ್ಟಣಶೆಟ್ಟಿ, ರಾಜುಸಿಂಗ್ ರಜಪೂತ, ಕಲಾವಿದ ಪತ್ರಕರ್ತ, ಇಂದುಶೇಖರ ಮಣೂರ ಸಹಿತ ಕಲಾವಿದರು, ಕಲಾಸಕ್ತರು ಉಪಸ್ಥಿತರಿದ್ದರು.

