Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

ಉದಯರಶ್ಮಿ ಇಂದಿನ ದಿನಪತ್ರಿಕೆ ಮಾರ್ಚ್ 29, 2026

ಹಿರಿಯ ಪತ್ರಕರ್ತ ಟಿ.ಕೆ.ಮಲಗೊಂಡಗೆ ಸನ್ಮಾನಿಸಿದ ದಿಂಗಾಲೇಶ್ವರ ಶ್ರೀ

ಕಳೆದುಹೋದ ೧೧೦ ಮೊಬೈಲ್‌ಗಳು ವಾರಸುದಾರರ ವಶಕ್ಕೆ

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»(ರಾಜ್ಯ ) ಜಿಲ್ಲೆ»ನಾವು ನಮ್ಮ ಕಾಯಕ ಮಾಡುವುದೇ ನಿಜ ಪೂಜೆ :ಮಾಧವಾನಂದ ಶ್ರೀ
(ರಾಜ್ಯ ) ಜಿಲ್ಲೆ

ನಾವು ನಮ್ಮ ಕಾಯಕ ಮಾಡುವುದೇ ನಿಜ ಪೂಜೆ :ಮಾಧವಾನಂದ ಶ್ರೀ

By Updated:No Comments2 Mins Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

ಉದಯರಶ್ಮಿ ದಿನಪತ್ರಿಕೆ

ಮುದ್ದೇಬಿಹಾಳ: ಧರ್ಮಗ್ರಂಥಗಳ ಜ್ಞಾನ ಪೀಳಿಗೆಯಿಂದ ಪೀಳಿಗೆಗೆ ನಿರಂತರವಾಗಿ ಸಾಗಿಸುವಲ್ಲಿ ಭಗವದ್ಗೀತಾ ಅಭಿಯಾನ ನಿರಂತರತೆಯನ್ನು ಕಾಯ್ದಕೊಳ್ಳುವ ಅನಿವಾರ್ಯತೆ ಇದೆ ಎಂದು ತಂಗಡಗಿ ಸಿದ್ದಾರೂಢ ಮಠದ ಮಾಧವಾನಂದ ಭಾರತೀ ಸ್ವಾಮೀಜಿಯವರು ನುಡಿದರು.
ಪಟ್ಟಣದ ಹಡಲಗೇರಿ ರಸ್ತೆಯಲ್ಲಿರುವ ಪವಾಡ ಬಸವೇಶ್ವರ ಆಶ್ರಮದಲ್ಲಿ ಸರ್ವಜ್ಞೇಂದ್ರ ಸರಸ್ವತೀ ಪ್ರತಿಷ್ಠಾನ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಸೋಂದಾ ಸ್ವರ್ಣವಲ್ಲೀ ಸಂಸ್ಥಾನ ಶಿರಸಿ, ತಾಲೂಕಾ ಅಭಿಯಾನ ಸಮಿತಿ ಹಾಗೂ ಚೇತನ ಹಿರಿಯ ಪ್ರಾಥಮಿಕ ಶಾಲೆ ಇವರ ಸಹಯೋಗದಲ್ಲಿ ಭಗವದ್ಗೀತಾ ಅಭಿಯಾನ ಕರ್ನಾಟಕ-೨೦೨೪ ಉದ್ಘಾಟನಾ ಸಮಾರಂಭದ ದಿವ್ಯ ಸಾನಿಧ್ಯವಹಿಸಿ ಅವರು ಮಾತನಾಡಿದರು.
ಮಗು ಚಿಕ್ಕವಯಸ್ಸಿನಲ್ಲಿರುವಾಗಲೇ ಸಂಸ್ಕಾರ ಮನೆಯಿಂದ ಪ್ರಾರಂಭವಾಗಬೇಕು. ನೋಡಿ, ಕೇಳಿ, ಮಾಡಿಕಲಿಯಲಿ ಎನ್ನುವ ರೀತಿಯಲ್ಲಿ ಅನ್ವಯಿಸಿಕೊಳ್ಳುವ ಪ್ರವೃತ್ತಿಯಿರುವುದರಿಂದ ಮನೆಯಲ್ಲಿ ತಂದೆ, ತಾಯಿ ಹಾಗೂ ಮನೆಯ ಸದಸ್ಯರ ವರ್ತನೆಯು ಸಂಸ್ಕಾರಭರಿತವಾಗಿರುವುದು ಅವಶ್ಯವಾಗಿದೆ. ನಾವು ನಮ್ಮ ಕಾಯಕವನ್ನು ಮಾಡುವುದೇ ನಿಜವಾದ ದೇವರ ಪೂಜೆ. ಗೀತೆಯ ತತ್ವದ ಪ್ರಸರಣ ನಿರಂತರವಾಗಿ ಸಾಗಬೇಕಾಗಿದೆ. ಮಾನಸಿಕ ಖಿನ್ನತೆಗೆ ಒಳಗಾಗಬಾರದು. ನಮ್ಮ ವಿಚಾರದಲ್ಲಿ ಕಲ್ಮಶ ವಿರಬಾರದು. ಸಮಾಜದಲ್ಲಿ ಗುರುತರವಾದ ಜವಾಬ್ದಾರಿ ಇರುವವರು ಸ್ವಅಧ್ಯಯನ ಮತ್ತು ಸ್ವಅನುಷ್ಠಾನ ಮಾಡಿಕೊಂಡಿರಬೇಕು. ಅಧರ್ಮಕ್ಕೆ ಎಂದೂ ಗೆಲುವಿಲ್ಲ. ಧರ್ಮಕ್ಕೆ ನಿರಂತರ ಗೆಲುವು ಇರುತ್ತದೆ. ಎಲ್ಲದಕ್ಕೂ ಮೊದಲು ಶೃದ್ಧೆಯನ್ನು ಹೊಂದಿರಬೇಕು. ಆಧುನಿಕತೆಗೆ ಮಾರುಹೋಗಬಾರದು ಎಂದರು.
ಪುರಾಣಿಕ ಮಾದೇವ ಶಾಸ್ತ್ರೀಯವರು ಮಾತನಾಡಿ ಭವದ್ಗೀತೆಯನ್ನು ಅರ್ಥೈಸಿಕೊಂಡು ದೃಢವಿಶ್ವಾಸದಿಂದ ನಡೆದಲ್ಲಿ ಜೀವನದಲ್ಲಿ ಬರುವ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳ ಬಹುದಾಗಿದೆ. ಇದು ಸರ್ವಕಾಲಿಕ ಸತ್ಯದ ವಿಚಾರವೇ ಆಗಿದೆ. ಇದಕ್ಕೆ ಸಾಕಷ್ಟು ಸತ್ಯ ನಿದರ್ಶನಗಳಿವೆ. ಭಗವದ್ಗೀತೆಯಲ್ಲಿ ಲೌಖಿಕ ಮತ್ತು ಪಾರಮಾರ್ಥಿಕ ವಿಚಾರವು ಅಡಗಿದೆ. ಮನುಷ್ಯನ ಜೀವನದ ದಿಕ್ಕನ್ನೆ ಬದಲಾಯಿಸುವ ಸಾಮರ್ಥ್ಯ ಗೀತೆಯಲ್ಲಿದೆ. ಧರ್ಮವೆನ್ನುವುದನ್ನ ಅರ್ಥೈಸಿಕೊಂಡಿರಬೇಕು. ಧರ್ಮವೆನ್ನುವುದು ದೊಡ್ಡಮರಗಳಿದ್ದಹಾಗೆ, ಅಲ್ಲಿ ಎಲ್ಲಾ ರೀತಿಯ ಜೀವ ಸಂಕುಲಗಳು ವಾಸಿಸುತ್ತವೆ. ಅದರಂತೆ ಸನಾತನ ಧರ್ಮ ಮಾನವೀಯ ಮೌಲ್ಯವನ್ನು ಎತ್ತಿ ಹಿಡಿಯುವಲ್ಲಿ ತೀರಾ ಮಹತ್ತದ್ದಾಗಿದೆ ಎಂದು ಹೇಳಿದರು.
ಪವಾಡ ಬಸವೇಶ್ವರ ಆಶ್ರಮದ ಚನ್ನಮಲ್ಲಪ್ಪ ಶರಣರು ದೀಪ ಬೆಳಗಿಸಿ ಅಭಿಯಾನವನ್ನು ಉದ್ಘಾಟಸಿದರು.
ಕಾರ್ಯಕ್ರಮದ ಪ್ರಾರಂಭದಲ್ಲಿ ಗುರುಮಾತೆ ರಂಜಿತಾ ಮತ್ತು ಜ್ಞಾನ ಭಾರತಿ ವಿದ್ಯಾ ಮಂದಿರ ಶಾಲೆ ಗೀತಗಾಯನ ತಂಡದವರು ಸಾಮೂಹಿಕವಾಗಿ ಭಗವದ್ಗೀತೆಯ ೯ ನೇ ಅಧ್ಯಾಯವನ್ನು ಪಠಣಮಾಡಿದರು.
ಈ ಸಂದರ್ಭದಲ್ಲಿ ಕಡಕೋಳ ಆಶ್ರಮದ ಶೋಭಾತಾಯಿ ಶರಣಮ್ಮ, ದೇವೂರ ಪವಾಡ ಬಸವೇಶ್ವರ ಆಶ್ರಮದ ಮಾತೋಶ್ರೀ ಅಮ್ಮನವರು, ಬನೋಶಿ ಮೌನೇಶ್ವರ ಆಶ್ರಮದ ಮಾತೋಶ್ರೀ ಅಮ್ಮನವರು, ರೂಢಗಿ ಚನ್ನಯ್ಯ ಮಠದ ಶರಣಮ್ಮನವರು, ವಿ.ಎಚ್.ಪಿ ಅಧ್ಯಕ್ಷರಾದ ಎಸ್.ಡಿ.ರಾಂಪೂರ, ಅಭಿಯಾನ ಸಮಿತಿ ಅಧ್ಯಕ್ಷ ಶ್ರೀಶೈಲ ದೊಡಮನಿ, ಆಶ್ರಮದ ಸಂಗಣ್ಣ ಕುಂಬಾರ, ಚೇತನ ಶಾಲೆಯ ಮುಖ್ಯಗುರು ಎಸ್.ಎಸ್.ಪೂಜಾರಿ, ಎಚ್.ಎನ್.ಇಟಗಿ, ಎಸ್.ಎಚ್.ಮುದ್ನಾಳ, ಪಿ. ನಾಗೇಶ, ಬಸನಗೌಡ ಬಿರಾದಾರ, ಸಂಗಮೇಶ ತಳವಾರ, ಸಾವಿತ್ರಿ ನಾಯಕ, ಬಸವರಾಜ ಲಿಂಗದಳ್ಳಿ, ಪ್ರಭಾ ಹೆಬ್ಬಾರ, ಎಸ್.ಬಿ.ರಾಂಪೂರ, ಮಂಜುನಾಥ ಪಡದಾಳಿ, ಅನ್ನಪೂರ್ಣ ನಾಗರಾಳ, ಕಾಶಿಬಾಯಿ ರಾಂಪೂರ, ಮಹಾಂತೇಶ ಹಿರೇಮಠ, ರೂಪಾ ನಾಟಿಕರ, ಬಸವರಾಜ ಅಂಗಡಗೇರಿ, ಸೇರಿದಂತೆ ಇತರರು ಹಾಜರಿದ್ದರು. ಸಂಚಾಲಕ ರಾಮಚಂದ್ರ ಹೆಗಡೆ ಸ್ವಾಗತಿಸಿ ನಿರೂಪಿಸಿದರು. ಪ್ರಮುಖರಾದ ಬಸವರಾಜ ನಂದಿಕೇಶ್ವರಮಠ ವಂದಿಸಿದರು.

BIJAPUR NEWS public public news udaya rashmi Udayarashmi today newspaper udayarashminews.com
Share. Facebook Twitter Pinterest Email Telegram WhatsApp
  • Website

Related Posts

ಉದಯರಶ್ಮಿ ಇಂದಿನ ದಿನಪತ್ರಿಕೆ ಮಾರ್ಚ್ 29, 2026

ಹಿರಿಯ ಪತ್ರಕರ್ತ ಟಿ.ಕೆ.ಮಲಗೊಂಡಗೆ ಸನ್ಮಾನಿಸಿದ ದಿಂಗಾಲೇಶ್ವರ ಶ್ರೀ

ಕಳೆದುಹೋದ ೧೧೦ ಮೊಬೈಲ್‌ಗಳು ವಾರಸುದಾರರ ವಶಕ್ಕೆ

ಏ.15 ರಿಂದ ಬಸವ ಜಯಂತಿ ಕಾರ್ಯಕ್ರಮ & ಓಲೆಮಠದ ಜಾತ್ರಾ ಮಹೋತ್ಸವ

Add A Comment

Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Uncategorized
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • ಉದಯರಶ್ಮಿ ಇಂದಿನ ದಿನಪತ್ರಿಕೆ ಮಾರ್ಚ್ 29, 2026
    In ದಿನಪತ್ರಿಕೆ
  • ಹಿರಿಯ ಪತ್ರಕರ್ತ ಟಿ.ಕೆ.ಮಲಗೊಂಡಗೆ ಸನ್ಮಾನಿಸಿದ ದಿಂಗಾಲೇಶ್ವರ ಶ್ರೀ
    In (ರಾಜ್ಯ ) ಜಿಲ್ಲೆ
  • ಕಳೆದುಹೋದ ೧೧೦ ಮೊಬೈಲ್‌ಗಳು ವಾರಸುದಾರರ ವಶಕ್ಕೆ
    In (ರಾಜ್ಯ ) ಜಿಲ್ಲೆ
  • ಏ.15 ರಿಂದ ಬಸವ ಜಯಂತಿ ಕಾರ್ಯಕ್ರಮ & ಓಲೆಮಠದ ಜಾತ್ರಾ ಮಹೋತ್ಸವ
    In (ರಾಜ್ಯ ) ಜಿಲ್ಲೆ
  • ಕಲಾಶ್ರೀ ಚವ್ಹಾಣ ಗೆ ಅಭಿನಂದಿಸಿದ ಡಾ.ಸುರೇಖಾ
    In (ರಾಜ್ಯ ) ಜಿಲ್ಲೆ
  • ಸಚಿವ ಎಂ. ಬಿ. ಪಾಟೀಲ ಅವರ ಪ್ರವಾಸ ವಿವರ
    In (ರಾಜ್ಯ ) ಜಿಲ್ಲೆ
  • ನ್ಯಾಯ ವ್ಯವಸ್ಥೆಯಲ್ಲಿ ಮಹತ್ವದ ಪಾತ್ರ ವಹಿಸುವ ನಿಖರ ತನಿಖೆ & ದೃಢ ಸಾಕ್ಷಿ
    In (ರಾಜ್ಯ ) ಜಿಲ್ಲೆ
  • ಮುಖ್ಯಮಂತ್ರಿಗಳ ಚಿನ್ನದ ಪದಕಕ್ಕೆ ಭಾಜನರಾದಪೊಲೀಸ್ ಅಧಿಕಾರಿಗಳು
    In (ರಾಜ್ಯ ) ಜಿಲ್ಲೆ
  • ಯಡ್ರಾಮಿ ಬಸವೇಶ್ವರ ಜಾತ್ರೆಯ ಅದ್ದೂರಿ ರಥೋತ್ಸವ ಸಂಪನ್ನ
    In (ರಾಜ್ಯ ) ಜಿಲ್ಲೆ
  • ಪರೀಕ್ಷಾ ಪ್ರಕ್ರಿಯೆಯ ಪ್ರತಿ ಹಂತ ವೀಕ್ಷಿಸಿದ ಜಿ.ಪಂ. ಸಿಇಒ ರಿಷಿ ಆನಂದ
    In (ರಾಜ್ಯ ) ಜಿಲ್ಲೆ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2026 udayarashminews.com. Designed by udayarashmi news .

Type above and press Enter to search. Press Esc to cancel.