Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

ಚಿನ್ನರ ಉತ್ಸವ: ಆದರ್ಶ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪ್ರಧಾನ

ಬಿ.ಎಲ್ಡಿಇ ಶಿಕ್ಷಣ ಮಹಾವಿದ್ಯಾಲಯಕ್ಕೆ (ಬಿ.ಇಡಿ) ಮೂರು ರ್‍ಯಾಂಕ್

ಇಟ್ಟಂಗಿ ಭಟಿಗಳಿಂದ ಆರೋಗ್ಯ, ಕೃಷಿ ಹಾಗೂ ಪರಿಸರದ ಮೇಲೆ ಪರಿಣಾಮ

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»(ರಾಜ್ಯ ) ಜಿಲ್ಲೆ»ಬಸವಾಭಿಮಾನಿಗಳು ’ವಚನ ದರ್ಶನ ’ ಕೃತಿ ವಿರುದ್ಧ ಸಿಡಿದೇಳಬೇಕು
(ರಾಜ್ಯ ) ಜಿಲ್ಲೆ

ಬಸವಾಭಿಮಾನಿಗಳು ’ವಚನ ದರ್ಶನ ’ ಕೃತಿ ವಿರುದ್ಧ ಸಿಡಿದೇಳಬೇಕು

By Updated:No Comments2 Mins Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

ಪುಣೆ-ಬೆಳಗಾವಿ ಯ ಬಸವ ತಿಳುವಳಿಕೆ ಮತ್ತು ಸಂಶೋಧನಾ ಕೇಂದ್ರ ಅಧ್ಯಕ್ಷ ಡಾ.ಶಶಿಕಾಂತ ಪಟ್ಟಣ ಕರೆ

ಉದಯರಶ್ಮಿ ದಿನಪತ್ರಿಕೆ

ವಿಜಯಪುರ: ಇತ್ತೀಚಿನ ದಿನಗಳಲ್ಲಿ ಕೆಲ ಕೋಮುವಾದಿ ಸಂಘಟನೆಗಳು ವಚನ ಸಾಹಿತ್ಯದ ಮೇಲೆ ದಾಳಿ ನಡೆಸಿ ವರ್ಗ ವರ್ಣ ಲಿಂಗ ಭೇದ ಆಶ್ರಮ ರಹಿತ ಸಾಂಸ್ಥಿಕರಣವಲ್ಲದ ಬಹು ದೊಡ್ಡ ಆಂದೋಲನವನ್ನು ಯಾಮಾರಿಸಿ ವಚನ ಚಳುವಳಿಯು ವೇದ ಆಗಮ ಶಾಸ್ತ್ರ ಉಪನಿಷದ್ ಪೂರ್ಣಾಗಳನ್ನು ಧಿಕ್ಕರಿಸಿ ಸ್ವಾನುಭಾವದ ನೆಲೆಯಲ್ಲಿ ವಚನಗಳನ್ನು ರಚಿಸಿದ್ದಾರೆ ಎಂದು
ಬಸವ ತಿಳುವಳಿಕೆ ಮತ್ತು ಸಂಶೋಧನಾ ಕೇಂದ್ರ ಪುಣೆ-ಬೆಳಗಾವಿ ಯ ಅಧ್ಯಕ್ಷ ಡಾ.ಶಶಿಕಾಂತ ಪಟ್ಟಣ ಆರೋಪಿಸಿದ್ದಾರೆ.
ಈ ಕುರಿತು ಸೋಮವಾರ ಪತ್ರಿಕೆಯೊಂದಿಗೆ ಮಾತನಾಡಿದ ಅವರು, ಹಲವಾರು ಒಳ್ಳೆಯ ವಿಚಾರಗಳನ್ನು ಬುದ್ಧ ಮಹಾವೀರ ಬಸವಣ್ಣ ಹೇಳಿದ್ದಾರೆ. ಅವುಗಳಲ್ಲಿ ಅನೇಕ ಸಾಮ್ಯತೆಗಳು ಇರುತ್ತವೆ ಹಾಗೆಂದ ಮಾತ್ರಕ್ಕೆ ಒಬ್ಬರ ವೈಚಾರಿಕ ಪ್ರೇರಣೆ ಇನ್ನೊಬ್ಬರ ಮೇಲೆ ಆಗಿದೆ ಎಂದರ್ಥವಲ್ಲ. ಭಾಷೆ ಬೇರೆ ಸಂಸ್ಕೃತಿ ಬೇರೆ ಎಲ್ಲರೂ ಮಾನವ ಕಾಳಜಿಯನ್ನು ಬಯಸಿದವರು.
ವಚನ ದರ್ಶನ ಎಂಬ ಪೂರ್ವ ನಿಯೋಜಿತ ಪೂರ್ವಗ್ರಹ ಪೀಡಿತ ಪುಸ್ತಕದ ಬಿಡುಗಡೆ ಪುಸ್ತಕ ಮಾರಾಟವು ರಾಜ್ಯದ ತುಂಬೆಲ್ಲಾ ನಡೆದಿದೆ. ಸ್ವಾತಂತ್ರ ನಂತರದ ಮತ್ತು ಅದರ ಪೂರ್ವದಲ್ಲಿ ಸಂಘ ಪರಿವಾರವಾಗಲಿ ಆರ್ ಎಸ ಎಸ ಆಗಲಿ ವಿಶ್ವ ಹಿಂದೂ ಪರಿಷತ್ ಆಗಲಿ ಎಂದೂ ಬಸವಣ್ಣ ಮತ್ತು ಶರಣರ ಬಗ್ಗೆ ಮಾತೆತ್ತಿದವರಲ್ಲ. ಈಗ ಒಮ್ಮಿಲೇ ಬಸವಣ್ಣನವರ ಮೇಲೆ ಏಕೆ ಪ್ರೀತಿ ಗೌರವ ಭಕ್ತಿ ಬಂದಿದೆ ಗೊತ್ತಿಲ್ಲ.
ಸದಾಶಿವ ಸ್ವಾಮಿಗಳ ಪ್ರಧಾನ ಸಂಪಾದಕತ್ವದಲ್ಲಿ ಅಯೋಧ್ಯಾ ಪ್ರಕಾಶನದ ಸಂಘ ಪರಿವಾರದ ಪ್ರಿಂಟಿಂಗ್ ಪ್ರೆಸ್ಸಿನಲ್ಲಿ ಆರ್ ಆರ್ ಎಸ ಸಿದ್ಧಾಂತದ ಕೆಲ ಲೇಖಕರನ್ನು ಬಳಸಿಕೊಂಡು ವಚನ ದರ್ಶನ ಪ್ರಕಟಿಸಿ ಮಾರಾಟ ಮಾಡುತ್ತಿದ್ದಾರೆ.
ವೇದ ಆಗಮ ಶಾಸ್ತ್ರ ಪುರಾಣಗಳನ್ನು ಧಿಕ್ಕರಿಸಿ ಸನಾತನಕ್ಕೆ ಸವಾಲೆಸೆಯುವ ರೀತಿಯಲ್ಲಿ ಶರಣರು ಪ್ರತಿ ಕ್ರಾಂತಿ ಮಾಡಿದರು .
44 ವಚನಕಾರರಲ್ಲಿ ಸುಮಾರು 480 ಕ್ಕೂ ಅಧಿಕ ವಚನಗಳಲ್ಲಿ ವೇದ ಆಗಮ ಶಾಸ್ತ್ರ ಪುರಾಣಗಳನ್ನು ಧಿಕ್ಕರಿಸಿದ ವಚನಗಳನ್ನು ಮರೆ ಮಾಚಿ ಕೆಲ ಪ್ರಕ್ಷಿಪ್ತ ಖೋಟಾ ವಚನಗಳನ್ನು ಹೆಕ್ಕಿಕೊಂಡು ತಮಗೆ ಬೇಕಾದ ರೀತಿಯಲ್ಲಿ ಕಪೋಲ ಕಲ್ಪಿತ ವಿಚಾರಗಳಿಂದ ಶರಣರ ವಚನಗಳು ವೇದ ಆಗಮ ಶಾಸ್ತ್ರ ಪುರಾನಾ ಆಧಾರಿತವಾಗಿವೆ ಎಂದು ಹಸಿ ಸುಳ್ಳು ಹೇಳುವದನ್ನು ಬಿಟ್ಟರೆ ಕೃತಿಯಲ್ಲಿ ಏನೂ ಇಲ್ಲ.
ವಚನ ಸಾಹಿತ್ಯವನ್ನು ಪಾಶ್ಚಿಮಾತ್ಯ ಸಾಹಿತ್ಯ ಸಿದ್ಧಾಂತಕ್ಕೆ ಹೋಲಿಸಬಾರದು ಅದರಲ್ಲೂ ಕಮ್ಯುನಿಸ್ಟ್ ಸಮಾಜವಾದಿ ಸಿದ್ಧಾಂತಗಳಿಗೆ ಹೋಲಿಕೆ ಮಾಡಬಾರದೆಂಬ ರಾಜಾರಾಮ ಹೆಗಡೆ ಅವರು ಬಸವಣ್ಣನವರ ವಿಶ್ವಮಾನ್ಯವಾಗಬೇಕೆಂಬುದು ಕೃತಿಯ ಉದ್ದೇಶವೆಂದಿದ್ದಾರೆ. ಎಂತಹ ವೈರುದ್ಧ್ಯತೇ ಅವರ ಬರವಣಿಗೆಯಲ್ಲಿ.
ಶೂನ್ಯನಾಥನೆಂಬ ಒಬ್ಬ ನಕಲಿ ವಚನಕಾರರನ್ನು ಸೃಷ್ಟಿಸಿದ್ದಾರೆ. ಡಾ ಫ ಗು ಹಳಕಟ್ಟಿ ಅವರನ್ನು ಕ್ರೈಸ್ತ ಮಠದ ವಿರೋಧಿ ಎಂದು ಬಿಂಬಿಸಿದ್ದಾರೆ.
ಹದಿನಾರನೆಯ ಶತಮಾನದಲ್ಲಿ ಉದ್ಭವಗೊಂಡ ಕೃತ್ರಿಮ ಖೋಟಾ ವಚನಗಳನ್ನೇ ಆಧಾರವಾಗಿತ್ತು ಕೊಂಡು ಲಿಂಗಾಯತ ಧಾರ್ಮ ಮಾನ್ಯತೆಯ ಹೋರಾಟದ ಧಿಕ್ಕು ತಪ್ಪಿಸುವ ಹುನ್ನಾರದಿಂದ ಇಂತಹ ಕೃತ್ಯಗಳು ನಡೆದಿವೆ.
ಬಸವ ತಿಳುವಳಿಕೆ ಮತ್ತು ಸಂಶೋಧನಾ ಕೇಂದ್ರ ಪುಣೆ ಅಕ್ಕನ ಅರಿವು ಧಾರವಾಡದ ಸ್ಥಳೀಯ ಬಸವ ಪರ ಸಂಘಟನೆಗಳ ಜೊತೆಗೂಡಿ ಅಲ್ಲಿ ಪತ್ರಿಕಾ ಗೋಷ್ಠಿ ನಡೆಸಿ ಪ್ರತಿಭಟಿಸಿ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ವಚನ ದರ್ಶನ ಪುಸ್ತಕ ಮುಟ್ಟುಗೋಲಿಗೆ ಆಗ್ರಹಿಸಿ ಮನವಿಯನ್ನು ಸಲ್ಲಿಸಲಾಯಿತು.
ಈ ಮಧ್ಯ ಸೆಪ್ಟೆಂಬರ್ 5 ರಂದು ವಿಜಯಪುರದಲ್ಲಿ ಈ ವಿವಾದಿತ ಕೃತಿ ಬಿಡುಗಡೆ ಸಮಾರಂಭದಲ್ಲಿ ಆರ್ ಎಸ್ ಎಸ್ ಪ್ರಮುಖ ಬಿ ಆರ್ ಶಂಕಾರಾನಂದ ಅವರು ಮಾತನಾಡುತ್ತ, ವಚನಗಳು ಬರೆದಿದ್ದಲ್ಲ ,ಸೃಜಿಸಿದ್ದು , ಬಸವಾದಿ ಶರಣರು ಅಸಮಾನತೆಯ ವಿರುದ್ಧ ಹೋರಾಟ ಚಳುವಳಿಯಯನ್ನು ನಡೆಸಿಲ್ಲ. ಕಲ್ಯಾಣದಲ್ಲಿ ನಡೆದದ್ದು ಕ್ರಾಂತಿ ಅಲ್ಲ. ಭಾರತದಲ್ಲಿ ಕ್ರಾಂತಿ,ಚಳುವಳಿಗೆ ಜಾಗವೇ ಇಲ್ಲ ಎಂದು ಅತ್ಯಂತ ಕೀಳುಮಟ್ಟದ ತಮ್ಮ ಜ್ಞಾನವನ್ನು ಪ್ರದರ್ಶಿಸಿದರೂ ಸಹಿತ ಲಿಂಗಾಯತ ಶ್ರೀಮಂತ ಮಠಗಳು ಬಸವ ಪರ ಸಂಘಟನೆಗಳು ಮಹಾಸಭೆಗಳು ಬಸವ ಸಮಿತಿ ಏಕೆ ಮೌನ ತಾಳಿವೆ ಅರ್ಥವಾಗದು. ಈಗ ಮೌನವಾದರೆ ಇಂತಹ ಕೃತಿಗಳ ಸರಮಾಲೆಗಳೇ ಪ್ರಕಟ ಗೊಳ್ಳಬಹುದು .


ಪ್ರತಿಯೊಬ್ಬ ಬಸವಾಭಿಮಾನಿ ಭಾರತೀಯ ಕನ್ನಡಿಗ ಇಂತಹ ಕೃತಿಗಳ ವಿರುದ್ಧ ಸಿಡಿದೇಳಬೇಕು. ಬುದ್ಧ ಬಸವ ಅಂಬೇಡ್ಕರ ಪುಲೆ ಬಾಪು ಮುಂತಾದವರ ಸಮಾಜವಾದದ ಕನಸನ್ನು ಸಮಾಧಿ ಮಾಡಲು ಹೋರಾಟ ಸನಾತನಿಗಳ ಕುತಂತ್ರಕ್ಕೆ ಉದಾಸೀನವ ಮಾಡದೆ ಹೋರಾಟಕ್ಕೆ ಸಜ್ಜಾಗಿ ಮುಂದಿನ ದಿನಗಳಲ್ಲಿ ವಿಜಯಪುರ ಮತ್ತು ಬೇರೆ ಬೇರೆ ಜಿಲ್ಲೆಗಳಲ್ಲಿ ದೊಡ್ಡ ಪ್ರಮಾದಲ್ಲಿ ಪ್ರತಿಭಟನೆ ನಡೆಯಲಿವೆ ಎಂದು ಡಾ.ಶಶಿಕಾಂತ ಪಟ್ಟಣ ತಿಳಿಸಿದ್ದಾರೆ.

BIJAPUR NEWS public public news udaya rashmi Udayarashmi today newspaper udayarashminews.com
Share. Facebook Twitter Pinterest Email Telegram WhatsApp
  • Website

Related Posts

ಚಿನ್ನರ ಉತ್ಸವ: ಆದರ್ಶ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪ್ರಧಾನ

ಬಿ.ಎಲ್ಡಿಇ ಶಿಕ್ಷಣ ಮಹಾವಿದ್ಯಾಲಯಕ್ಕೆ (ಬಿ.ಇಡಿ) ಮೂರು ರ್‍ಯಾಂಕ್

ಇಟ್ಟಂಗಿ ಭಟಿಗಳಿಂದ ಆರೋಗ್ಯ, ಕೃಷಿ ಹಾಗೂ ಪರಿಸರದ ಮೇಲೆ ಪರಿಣಾಮ

ಭೂತನಾಳ ಕೆರೆಯಲ್ಲಿ ಮುಳುಗಿ ಮೂವರ ದುರ್ಮರಣ

Add A Comment

Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Uncategorized
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • ಚಿನ್ನರ ಉತ್ಸವ: ಆದರ್ಶ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪ್ರಧಾನ
    In (ರಾಜ್ಯ ) ಜಿಲ್ಲೆ
  • ಬಿ.ಎಲ್ಡಿಇ ಶಿಕ್ಷಣ ಮಹಾವಿದ್ಯಾಲಯಕ್ಕೆ (ಬಿ.ಇಡಿ) ಮೂರು ರ್‍ಯಾಂಕ್
    In (ರಾಜ್ಯ ) ಜಿಲ್ಲೆ
  • ಇಟ್ಟಂಗಿ ಭಟಿಗಳಿಂದ ಆರೋಗ್ಯ, ಕೃಷಿ ಹಾಗೂ ಪರಿಸರದ ಮೇಲೆ ಪರಿಣಾಮ
    In (ರಾಜ್ಯ ) ಜಿಲ್ಲೆ
  • ಭೂತನಾಳ ಕೆರೆಯಲ್ಲಿ ಮುಳುಗಿ ಮೂವರ ದುರ್ಮರಣ
    In (ರಾಜ್ಯ ) ಜಿಲ್ಲೆ
  • ಏ.11 ರಂದು ರಾಷ್ಟ್ರಮಟ್ಟದ ವಿಚಾರ ಸಂಕಿರಣ ಅನುಸಂಧಾನ-11
    In (ರಾಜ್ಯ ) ಜಿಲ್ಲೆ
  • ಪರಿಶ್ರಮದಿಂದ ಗೆಲುವನ್ನು ಕೊಳ್ಳಬಹುದು
    In ವಿಶೇಷ ಲೇಖನ
  • ಬಂಜರು ನೆಲದಲ್ಲೂ ವಿದೇಶಿ ತಳಿ ಮಾವು ಬೆಳೆದ ರಾಜಶ್ರೀ ಜೈನ
    In (ರಾಜ್ಯ ) ಜಿಲ್ಲೆ
  • ಇಂಡಿ ಬಸ್ ಘಟಕಕ್ಕೆ ಅಧ್ಯಕ್ಷ ಅರುಣಕುಮಾರ ಭೇಟಿ
    In (ರಾಜ್ಯ ) ಜಿಲ್ಲೆ
  • ಡಾ. ಬಿ.ಆರ್.ಅಂಬೇಡ್ಕರ್ ಜಯಂತಿಯಲ್ಲಿ ಪಾಲ್ಗೊಳ್ಳಲು ಮನವಿ
    In (ರಾಜ್ಯ ) ಜಿಲ್ಲೆ
  • ರಾಜ್ಯ ಪತ್ರಕರ್ತರ ಸಮ್ಮೇಳನಕ್ಕೆ ಮುಖ್ಯಮಂತ್ರಿಗಳಿಗೆ ಆಹ್ವಾನ
    In (ರಾಜ್ಯ ) ಜಿಲ್ಲೆ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2026 udayarashminews.com. Designed by udayarashmi news .

Type above and press Enter to search. Press Esc to cancel.