ಉದಯರಶ್ಮಿ ದಿನಪತ್ರಿಕೆ
ಬಸವನಬಾಗೇವಾಡಿ: ಮೊದನಲಿನಿಂದಲೂ ನಾಟಕಗಳು ಗ್ರಾಮೀಣ ಜನರ ಮನರಂಜನೆ ಕೇಂದ್ರಗಳಾಗಿದ್ದವು. ವೈಜ್ಞಾನಿಕವಾಗಿ ಬೆಳವಣಿಗೆಯಾದಂತೆ ನಾಟಕಗಳು ಇತ್ತೀಚಿನ ದಿನಗಳಲ್ಲಿ ಕಡಿಮೆಯಾಗುತ್ತಿವೆ. ಕಲಾವಿದರ ಹಾಗು ಪ್ರೇಕ್ಷಕರ ಸಂಖ್ಯೆ ಕುಸಿಯುತ್ತಿರುವದು ಅತ್ಯಂತ ಶೋಚನಿಯ ಸಂಗತಿ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಹಾಸಿಂಪೀರ ವಾಲೀಕಾರ ಅಭಿಪ್ರಾಯ ವ್ಯಕ್ತಪಡಿಸಿದರು.
ತಾಲೂಕಿನ ಟಕ್ಕಳಕಿ ಗ್ರಾಮದಲ್ಲಿ ಕರಿಸಿದ್ದೇಶ್ವರ ಜಾತ್ರಾ ಮಹೋತ್ಸವದಂಗವಾಗಿ ಗ್ರಾಮದ ಕರಿಸಿದ್ದೇಶ್ವರ ನಾಟ್ಯ ಸಂಘದಡಿ ಹಮ್ಮಿಕೊಂಡಿದ್ದ ರೈತನ ಹೆಸರು ನಾಡಿನ ಹೆಸರು ಎಂಬ ಸಾಮಾಜಿಕ ನಾಟಕದ ಪ್ರದರ್ಶನ ಉದ್ಘಾಟಿಸಿ ಮಾತನಾಡಿದ ಅವರು, ಗ್ರಾಮೀಣ ಭಾಗದಲ್ಲಿ ನಡೆಯುವ ಜಾತ್ರೆ, ಉತ್ಸವ ಹಾಗೂ ಹಬ್ಬಗಳಲ್ಲಿ ನಾಟಕವನ್ನು ಸ್ಥಳೀಯ ಕಲಾವಿದರು ರಂಗಭೂಮಿ ಶಿಕ್ಷಕರಿಂದ ತರಬೇತಿ ಪಡೆದು ಪ್ರದಶ೯ನ ಮಾಡುತ್ತಿದ್ದರು. ಸಿನೆಮಾ ಹಾಗು ಮೊಬೈಲ್ ಭರಾಟೆಯಲ್ಲಿ ನಾಟಕಗಳು ಮಾಯವಾಗುತ್ತಿರುವುದು ಕಳವಳಕಾರಿ ಸಂಗತಿಯಾಗಿದೆ ಎಂದರು.
ಮುಖಂಡ ಸಂಗಮೇಶ ಓಲೇಕಾರ ಮಾತನಾಡಿ, ಹಳ್ಳಿಗಳಲ್ಲಿ ಜಾತ್ರೆಗಳು ಯಶಸ್ವಿಗೆ ನಾಟಕಗಳ ಪ್ರದಶ೯ನ ಅವಲಂಬಿತವಾಗಿದ್ದವು. ನಾಟಕಗಳಿಲ್ಲದೇ ಜಾತ್ರೆ ನಡೆಯುತ್ತಿರಲಿಲ್ಲ. ನಾಟಕಗಳು ಸಮಾಜದ ನ್ಯೂನತೆಗಳನ್ನು ಸರಿಪಡಿಸಿ ಸನ್ಮಾಗ೯ ತೋರಿಸುತ್ತವೆ ಎಂದರು.
ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಸಹ ಕಾಯ೯ದಶಿ೯ ರವಿ ಕಿತ್ತೂರ ಮಾತನಾಡಿದರು.
ವೇದಿಕೆಯಲ್ಲಿ ದುಂಡಯ್ಯ ಹಿರೇಮಠ, ಬ್ಲಾಕ ಕಾಂಗ್ರೆಸ್ ಅಧ್ಯಕ್ಷ ಸುರೇಶ ಹಾರಿವಾಳ, ಮುಖಂಡರಾದ ಪ್ರೇಮಕುಮಾರ ಮ್ಯಾಗೇರಿ .ರಾಜೇಸಾಬ ಶಿವನಗುತ್ತಿ, ಶಂಕರಗೌಡ ಬಿರಾದಾರ, ಶಪೀಕ ಹೊಕ್ರಾಣಿ, ಭೀಮಶಿ ಜಗ್ಗಲ, ರುದ್ರಗೌಡ ಪಾಟೀಲ, ಶರಣಪ್ಪ ಬಳ್ಳಾವೂರ, ಜೆ. ಸಿ. ವಂದಾಲ, ಚಂದ್ರಶೇಖರಗೌಡ ಪಾಟೀಲ, ತಿಪ್ಪಣ್ಣ ಜ್ಯೋತಿ , ಸುರೇಶ ಚಿಮ್ಮಲಗಿ, ಅರವಿಂದ ಗಂಗೂರ, ಎಸ್. ಜಿ. ಪಾಟೀಲ, ನೀಲಾ ಪಾಟೀಲ, ಶಂಕರಗೌಡ ಬಿರಾದಾರ, ಶ್ರೀಶೈಲ ಪೂಜಾರಿ, ಹಣಮಂತ ಟಕ್ಕಳಕಿ, ಗುರುಸಿದ್ದ ಪೂಜಾರಿ, ಕರೇಪ್ಪ ಬಂಜೋಡಿ, ಹಾಮೊ೯ನಿಯಂ ಶಿಕ್ಷಕ ಸಾಯಬಣ್ಣ ಹಡಪದ ಇತರರು ಇದ್ದರು. ಪಾಂಡುಗೌಡ ಬಿರಾದಾರ ನಿರೂಪಿಸಿದರು.

