ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಮಹರಾಷ್ಟ್ರದ ಫಂಡರಪುರದಲ್ಲಿ ದಿನಾಂಕ:೦೯-೧೧-೨೦೨೪ ರಿಂದ ೧೪-೧೧-೨೦೨೪ರವರೆಗೆ ನಡೆಯುವ ಕಾರ್ತಿಕ ಏಕಾದಶಿ ಜಾತ್ರೆಯ ಅಂಗವಾಗಿ ಜಿಲ್ಲೆಯ ಯಾತ್ರಾರ್ಥಿಗಳಿಗೆ ಉತ್ತಮ ಸಾರಿಗೆ ಸೌಲಭ್ಯ ಕಲ್ಪಿಸುವ ದೃಷ್ಟಿಯಿಂದ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ವಿಜಯಪುರ ವಿಭಾಗದ ವಿಜಯಪುರ, ಇಂಡಿ, ಸಿಂದಗಿ, ತಾಳಿಕೋಟೆ, ಮುದ್ದೇಬಿಹಾಳ, ಬಸವನ ಬಾಗೇವಾಡಿ ಘಟಕದ ಕೇಂದ್ರ ನಿಲ್ದಾಣದಿಂದ ವಿಶೇಷ ಸಾರಿಗೆ ಕಾರ್ಯಾಚರಣೆ ಮಾಡಲಾಗುವುದು. ಒಂದೇ ಗುಂಪಿನಿಂದ ಪ್ರಯಾಣಿಸುವ ಕನಿಷ್ಟ ೫೫ ಜನ ಪ್ರಯಾಣಿಕರು ಲಭ್ಯವಾದಲ್ಲಿ ಅವರ ಸ್ವ-ಸ್ಥಳದಿಂದಲೇ ನೇರವಾಗಿ ಫಂಡರಾಪುರಕ್ಕೆ ಬಸ್ಸಿನ ವ್ಯವಸ್ಥೆ ಕಲ್ಪಿಸಲಾಗುವುದು.
ಪ್ರಯಾಣಿಕರು ಸಾರಿಗೆ ಸೌಲಭ್ಯ ಹಾಗೂ ಹೆಚ್ಚಿನ ಮಾಹಿತಿಗಾಗಿ ಸಹಾಯಕ ಸಂಚಾರ ವ್ಯವಸ್ಥಾಪಕರು ಕೇಂದ್ರ ಬಸ್ ನಿಲ್ದಾಣ ವಿಜಯಪುರ (ಮೊ: ೭೭೬೦೯೯೨೨೫೮), ವಿಜಯಪುರ ಘಟಕ-೧ರ (೭೭೬೦೯೯೨೨೬೩), ವಿಜಯಪುರ ಘಟಕ-೨ರ (೭೭೬೦೯೯೨೨೬೪), ವಿಜಯಪುರ ಘಟಕ-೩ರ (೭೭೬೦೯೧೪೦೦೮), ಇಂಡಿ ಘಟಕ (೭೭೬೦೯೯೨೨೬೫), ಸಿಂದಗಿ ಘಟಕ (೭೭೬೦೯೯೨೨೬೬) ಮುದ್ದೇಬಿಹಾಳ ಘಟಕ (೭೭೬೦೯೯೨೨೬೭), ತಾಳಿಕೋಟಿ ಘಟಕ (೭೭೬೦೯೯೨೨೬೮), ಬಸವನ ಬಾಗೇವಾಡಿ (೭೭೬೦೯೯೨೨೬೯) ಕೇಂದ್ರ ಬಸ್ ನಿಲ್ದಾಣ ವಿಜಯಪುರದ ದೂರವಾಣಿ ಸಂಖ್ಯೆ (೦೮೩೫೨-೨೫೧೩೪೪) ಹಾಗೂ (ಮೊ.೭೭೬೦೯೯೨೨೫೮)ಕ್ಕೆ ಸಂಪರ್ಕಿಸಬಹುದಾಗಿದೆ ಎಂದು ವಿಜಯಪುರ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ವಿಭಾಗೀಯ ನಿಯಂತ್ರಣಾಧಿಕಾರಿಗಳ ಪ್ರಕಟಣೆ ತಿಳಿಸಿದೆ.
