ಉದಯರಶ್ಮಿ ದಿನಪತ್ರಿಕೆ
ಆಲಮೇಲ: ವಿಜಯಪುರ ಜಿಲ್ಲೆಯ ಆಲಮೇಲ ತಾಲೂಕಿನ ಸುಕ್ಷೇತ್ರ ದೇವರನಾವದಗಿ ಗ್ರಾಮದ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದ ಆವರಣದಲ್ಲಿ ಇದೆ ಸೋಮವಾರ 04 ನವೆಂಬರ ದಂದು ವಾಸುದೇವ ಬಲವಂತ ಫಡಕೆ ಗ್ರಾಮೀಣ ಅಭಿವೃದ್ಧಿ ಸಂಸ್ಥೆಯವರು ಹಮ್ಮಿಕೊಂಡ ಆದ್ಯ ಕ್ರಾಂತಿಕಾರಿ ಹುಟ್ಟು ಸ್ವಾತಂತ್ರ್ಯ ಹೋರಾಟಗಾರ ವಾಸುದೇವ ಬಲವಂತ ಫಡಕೆ ರವರ 122 ನೇ ಜಯಂತೋತ್ಸವ ಕಾರ್ಯಕ್ರಮ ಜರುಗುವುದು.
ಈ ಕಾರ್ಯಕ್ರಮಕ್ಕೆ ದಿವ್ಯ ಸಾನಿಧ್ಯವನ್ನು ಡಾ. ಚೆನ್ನಮಲ್ಲ ಶಿವಯೋಗಿ ಶಿವಾಚಾರ್ಯರು ತೇರಿನ ಮಠ ಬಡದಾಳ, ಸಾನಿಧ್ಯ ವೇ. ಬಸಲಿಂಗಯ್ಯ ಮಾ.ಹಿರೇಮಠ ದೇವರನಾದಗಿ, ಅಧ್ಯಕ್ಷತೆ ಅಶೋಕ ಮ.ಮನಗೂಳಿ ಶಾಸಕರು ಸಿಂದಗಿ,
ಸಮಾರಂಭದ ಉದ್ಘಾಟಕರಾಗಿ ಬಸನಗೌಡರ ರಾ.ಪಾಟೀಲ (ಯತ್ನಾಳ) ಮಾಜಿ ಕೇಂದ್ರ ಸಚಿವರು ಹಾಗೂ ಶಾಸಕರು ವಿಜಯಪುರ,
ನೇತೃತ್ವ ರಮೇಶ ಬಾ.ಭೂಸನೂರ ಮಾಜಿ ಶಾಸಕರು ಸಿಂದಗಿ,
ದಿಕ್ಸೂಚಿ ಭಾಷಣ ಆರ್.ಎಸ್.ಪಾಟೀಲ (ಕುಚುಬಾಳ) ಬಿಜೆಪಿ ಅಧ್ಯಕ್ಷರು ವಿಜಯಪುರ,
ಮುಖ್ಯ ಅತಿಥಿಗಳಾಗಿ ಶ್ರೀಮಂತ ನಾಗೂರ ಮಾಜಿ ಜಪಂ ಸದಸ್ಯರು ದೇವಣಗಾವ, ಗುರಣ್ಣಗೌಡ ಸಿ.ಗುಗ್ಗರಿ ಬಿಜೆಪಿ ಮುಖಂಡರು ದೇವರನಾವದಗಿ, ನಿಂಗಣ್ಣ ಗು.ಜನಿವಾರ ನೋಡಲ್ ಅಧಿಕಾರಿಗಳು ಡಿಸಿಸಿ ಮುದ್ದೇಬಿಹಾಳ,
ವಿಶೇಷ ಸನ್ಮಾನಿತರಾಗಿ ರಮೇಶ ಭ.ಬಿರಾದಾರ ಉಪನ್ಯಾಸಕರು ಸ.ಪ.ಪೂ.ಕಾಲೇಜ್ ಯಂಕಂಚಿ,
ಜಗದೇವಪ್ಪ ಮ.ಗುಗ್ಗರಿ ರೇಷ್ಮೆ ನಿರೀಕ್ಷಕರು ಶಿಡ್ಲಘಟ್ಟ ಸೇರಿದಂತೆ ಜಿಲ್ಲೆಯ ಹಾಗೂ ಗ್ರಾಮದ ಸಮಸ್ತ ವಾಸುದೇವ ಬಲವಂತ ಫಡಕೆ ಅಭಿಮಾನಿಗಳು ಆಗಮಿಸುವರು ಎಂದು ಸಂಘದ ಅಧ್ಯಕ್ಷ ಮಡಿವಾಳ ಸಿ.ಕುಮಸಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

