ತೊರವಿ ಗ್ರಾಪಂನಲ್ಲಿ ಭ್ರಷ್ಟಾಚಾರ ವಿರುದ್ದ ಜಾಗೃತಿ ಅರಿವು ಸಪ್ತಾಹ ಕಾರ್ಯಕ್ರಮ
ಉದಯರಶ್ಮಿ ದಿನಪತ್ರಿಕೆ
ತಿಕೋಟಾ: ಸರ್ಕಾರಿ ನೌಕರರು ಪ್ರಾಮಾಣಿಕತೆ ಮತ್ತು ದಕ್ಷತೆಯಿಂದ ಕೆಲಸ ಮಾಡಬೇಕು. ಕಛೇರಿಗೆ ಬರುವ ಸಾರ್ವಜನಿಕರೊಂದಿಗೆ ಸೌಜನ್ಯತೆಯಿಂದ ವರ್ತಿಸಬೇಕು ಎಂದು ಉಪಪೋಲಿಸ್ ಅಧಿಕ್ಷಕರು ಕರ್ನಾಟಕ ಲೋಕಾಯುಕ್ತನ ಸುರೇಶರೆಡ್ಡಿ ಎಂ.ಎಸ್. ಹೇಳಿದರು.
ತಾಲ್ಲೂಕಿನ ತೊರವಿ ಗ್ರಾಮ ಪಂಚಾಯತಿಯಲ್ಲಿ ಬುಧವಾರ ಭ್ರಷ್ಟಾಚಾರ ವಿರುದ್ದ ಜಾಗೃತಿ ಅರಿವು ಸಪ್ತಾಹ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಕಛೇರಿಗಳಲ್ಲಿ ಸಾರ್ವಜನಿಕರು ಕೊಟ್ಟ ಅಂದಿನ ಅರ್ಜಿ ಅಂದೇ ವಿಲೇವಾರಿ ಮಾಡಿ ಅವರಿಗೆ ಸ್ವೀಕೃತಿ ಕೊಡಬೇಕು. ಅರ್ಜಿಗೆ ಸಂಭಂದಿಸಿದಂತೆ ಕಛೇರಿಯಲ್ಲಿ ಪೈಲ್ ಮಾಡಿ ಇಟ್ಟುಕೊಳ್ಳಬೇಕು. ಅರ್ಜಿ ಜೊತೆ ಯಾವುದಾದರೂ ದಾಖಲೆ ಕಡಿಮೆ ಇದ್ದರೆ ಆಗಲೇ ತಿಳಿಸಬೇಕು. ಅಪೂರ್ಣ ಅರ್ಜಿ ಇದ್ದು ಮಾಡಲಿಕೆ ಆಗದಿದ್ದರೆ ಹಿಂಬರಹ ಬರೆದು ಕೊಡಬೇಕು. ಮಾಡುವ ಕೆಲಸ ಕಾನೂನಾತ್ಮಕವಾಗಿಯೇ ಇರಬೇಕು. ಸಾರ್ವಜನಿಕ ಅಧಿಕಾರಿ ಮನಸ್ಸು ಮಾಡಿದರೆ ಸಮಾಜವ ಬದಲಾವಣೆ ಮಾಡಿ ಸುಧಾರಣೆ ಮಾಡಬಹುದು ಎಂದರು.
ತಿಕೋಟಾ ಹಾಗೂ ಬಬಲೇಶ್ವರ ಪಟ್ಟಣದಲ್ಲಿರುವ ತಹಶಿಲ್ದಾರ ಕಛೇರಿಗಳಲ್ಲಿ ಸಹ ಭ್ರಷ್ಟಾಚಾರ ವಿರುದ್ದ ಜಾಗೃತಿ ಅರಿವು ಸಪ್ತಾಹ ಏರ್ಪಡಿಸಿ ಎಲ್ಲ ಇಲಾಖೆಯ ಅಧಿಕಾರಿ ಹಾಗೂ ಸಿಬ್ಬಂದಿ ವರ್ಗದವರಿಗೆ ಅರಿವು ಮೂಡಿಸಿದರು.
ಈ ಸಂದರ್ಭದಲ್ಲಿ ಪಿಡಿಓ ರಾಜಶ್ರೀ ತುಂಗಳ ವಿ.ಎಚ್. ಬಿರಾದಾರ, ಎ.ಎಚ್. ಗೋಲಗೇರಿ, ಗ್ರಾಮ ಪಂಚಾಯತಿ ಸದಸ್ಯರು, ಆಶಾ ಅಂಗನವಾಡಿ ಕಾರ್ಯಕರ್ತೆಯರು, ಗ್ರಾಮ ಪಂಚಾಯತ್ ಸಿಬ್ಬಂದಿ ಭಾಗವಹಿಸಿದ್ದರು.
ಗ್ರಾಪಂ ಕುರಿತು ಪ್ರಶಂಸೆ
ಒಬ್ಬ ಪಿಡಿಓ ಅಧಿಕಾರಿ ಮನಸ್ಸು ಮಾಡಿ ಸಾರ್ವಜನಿಕರಿಗೆ ಹಾಗೂ ವಿಧ್ಯಾರ್ಥಿಗಳಿಗೆ ಹೈಟೆಕ್ ಗ್ರಂಥಾಲಯ ನಿರ್ಮಿಸಿ ಶಾಲಾ ಮಕ್ಕಳಿಗೆ ಡಿಜಿಟಲ್ ಬೊರ್ಡ ಅಳವಡಿಕೆ ಮಾಡಿ ಶೈಕ್ಷಣಿಕ ಗುಣಮಟ್ಟ ಹೆಚ್ಚಳ ಮಾಡಲು ಅನೂಕೂಲ ಮಾಡಿದ್ದಾರೆ. ಸ್ಪರ್ಧಾರ್ಥಿಗಳಿಗೆ ಹಾಗೂ ಎಲ್ಲರಿಗೂ ಅನೂಕೂಲವಾಗುವ ಸುಸಜ್ಜಿತ ಗ್ರಂಥಾಲಯ ಮಾದರಿಯಾಗಿದೆ ಎಂದು ಪ್ರಶಂಸೆ ವ್ಯಕ್ತಪಡಿಸಿದ ಉಪಪೋಲಿಸ್ ಅಧಿಕ್ಷಕರು ಕರ್ನಾಟಕ ಲೋಕಾಯುಕ್ತನ ಸುರೇಶರೆಡ್ಡಿ ಎಂ.ಎಸ್. ಶಾಲಾ ಮಕ್ಕಳೊಂದಿಗೆ ಸಂವಾದ ನಡೆಸಿದರು.
ಪ್ರತಿಜ್ಞಾವಿಧಿ ಬೋಧನೆ
ಇದೇ ಸಂದರ್ಭದಲ್ಲಿ ಲಂಚ ಕೊಡುವದಿಲ್ಲ, ಲಂಚ ತೆಗೆದುಕೊಳ್ಳುವದಿಲ್ಲ ಎಂದು ಭಾಗವಹಿಸಿದ ಎಲ್ಲ ಅಧಿಕಾರಿ ವರ್ಗದವರಿಗೆ ಪ್ರತಿಜ್ಞಾವಿಧಿ ಬೋಧಿಸಲಾಯಿತು.

