ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಜಿಲ್ಲೆಯಲ್ಲಿನ ೧೫,೦೦೦ ಎಕರೆ, ಕರ್ನಾಟಕ ರಾಜ್ಯದ ೧,೧೨,೦೦೦ ಎಕರೆ ಹಾಗೂ ಭಾರತ ದೇಶದಲ್ಲಿನ ೯,೪೬,೦೦೦ ಎಕರೆ ಜಮೀನನ್ನು ಯಾವ ಮುಸಲ್ಮಾನರು,“ವಕ್ಫ” ಬೋರ್ಡ್ಗೆ ದಾನ ನೀಡಿದರು ಯಾವಾಗ ನೀಡಿದರು? ಎಂಬುದನ್ನು ಬಹಿರಂಗಪಡಿಸಬೇಕೆಂದು ಸ್ವಾಮಿ ವಿವೇಕಾನಂದ ಸೇನೆ ಬಹಿರಂಗ ಸವಾಲು ಹಾಕಿದೆ.
ಈ ಕುರಿತು ಮಂಗಳವಾರ ಪ್ರಕಟಣೆಯಲ್ಲಿ ಸವಾಲು ಹಾಕಿದ ಸ್ವಾಮಿ ವಿವೇಕಾನಂದ ಸೇನೆ ಅಧ್ಯಕ್ಷ ರಾಘವ ಅಣ್ಣಿಗೇರಿ ಅವರು, ಕಾಂಗ್ರೆಸ್ ನಾಯಕರಿಗೆ ಹಲವು
ಪ್ರಶ್ನೆಗಳನ್ನು ಮುಂದಿಟ್ಟಿದ್ದಾರೆ.
೨೦೦೯ರಲ್ಲಿ ೪,೦೦,೦೦೦ ಎಕರೆ ಇದ್ದಂತಹ ವಕ್ಫ್ ಆಸ್ತಿ ಇಂದು ೯,೪೬,೦೦೦ ಎಕರೆ ಹೇಗಾಯಿತು ? ೨೦೧೩ ರಲ್ಲಿ ಮನಮೋಹನ್ ಸಿಂಗ್ ನೇತೃತ್ವದ ಕಾಂಗ್ರೆಸ್ ಸರ್ಕಾರ ದೆಹಲಿಯಲ್ಲಿ, ಭಾರತ ಸರ್ಕಾರದ ೧೨೩ ಪ್ರಮುಖ ಆಸ್ತಿಗಳನ್ನು ವಕ್ಫ್ ಬೋರ್ಡಿಗೆ ಏಕೆ ನೀಡಿತು ? ಎಂಬುದನ್ನು ದೇಶದ ಜನತೆಯ ಮುಂದೆ ಬಹಿರಂಗಪಡಿಸಿ… ಬಹಿರಂಗಪಡಿಸಿದರೆ, ವಕ್ಫ್ ಬೋರ್ಡ್ಗೆ ದಾನ ನೀಡಿದ ಮಹಾ ದಾನಿಗಳನ್ನು, ಸ್ವಾಮಿ ವಿವೇಕಾನಂದ ಸೇನೆಯಿಂದ ಸನ್ಮಾನಿಸಲಾಗುವುದು ಎಂದಿದ್ದಾರೆ.
೧೯೭೪, ೧೯೭೭ ಹಾಗೂ ೨೦೧೬ ರಲ್ಲಿ ಯಾವ ಆಧಾರದ ಮೇಲೆ ಕಾಂಗ್ರೆಸ್ ಸರಕಾರ ಗೆಜೆಟ್ ನೋಟಿಫಿಕೇಶನ್ ಹೊರಡಿಸಿತ್ತು? ೫೭ ಮುಸ್ಲಿಂ ರಾಷ್ಟ್ರಗಳಲ್ಲಿ ಇರದೇ ಇರುವ ವಕ್ಫ್ ಕಾಯ್ದೆ ಭಾರತದಲ್ಲಿ ಏಕೆ? ವಕ್ಫ್ ಹೆಸರಿನಲ್ಲಿ ಇಲ್ಲಿಯವರೆಗೆ ಆದ ಅವ್ಯವಹಾರಗಳು ಹಾಗೂ ಅವ್ಯವಹಾರ ಮಾಡಿದವರ ಹೆಸರುಗಳನ್ನು ಬಹಿರಂಗಪಡಿಸುವಿರಾ?
ಈ ಮೇಲಿನ ವಿಷಯಗಳೆಲ್ಲವನ್ನು ದೇಶದ ಜನತೆಗೆ ತಿಳಿಸಬೇಕೆಂದು ಸ್ವಾಮಿ ವಿವೇಕಾನಂದ ಸೇನೆಯಿಂದ ಕಾಂಗ್ರೆಸ್ ಸಚಿವರುಗಳಿಗೆ ಸವಾಲು ಹಾಕಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

