ವಿಜಯಪುರದಲ್ಲಿ ಇಂದು ೬ ನೇ ದಿನಕ್ಕೆ ಕಾಲಿರಿಸಿದ ಜಯ ಕರ್ನಾಟಕ ಸಂಘಟನೆ ಧರಣಿ ಸತ್ಯಾಗ್ರಹ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ನಗರದ ವಿಮಾನ ನಿಲ್ದಾಣಕ್ಕೆ ಶ್ರೀ ಬಸವೇಶ್ವರ ಹೆಸರು ಗಾಂಧಿ ವೃತ್ತದ ನವೀಕರಣ, ರೈಲ್ವೆ ನಿಲ್ದಾಣಕ್ಕೆ ಶ್ರೀ ಸಿದ್ದೇಶ್ವರ ಸ್ವಾಮೀಜಿಯವರ ಹೆಸರನ್ನು ಮರುನಾಮಕರಣ ಹಾಗೂ ವಿಜಯಪುರ ನಗರದ ಕಿತ್ತೂರ ರಾಣಿ ಚನ್ನಮ್ಮ ರಂಗ ಮಂದಿರ ನವೀಕರಗೊಳಿಸಿ ನಾಟಕ ಪ್ರದರ್ಶನಕ್ಕೆ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ಜಯ ಕರ್ನಾಟಕ ಸಂಘಟನೆ ಹಮ್ಮಿಕೊಂಡಿರುವ ಧರಣಿ ಸತ್ಯಾಗ್ರಹ ಸೋಮವಾರ ೫ನೇ ದಿನಕ್ಕೆ ಮುನ್ನಡೆದಿದೆ.
ಧರಣಿ ಸ್ಥಳಕ್ಕೆ ಭೇಟಿ ನೀಡಿದ ಶರಣು ಹೂಗಾರ, ರವಿ ಶಿಂಧೆ, ರಂಗಭೂಮಿ ಕಲಾವಿದರಾದ ಸಿದ್ದು ನಾಲತವಾಡ ಮಾತನಾಡಿ, ಕಿತ್ತೂರ ರಾಣಿ ಚೆನ್ನಮ್ಮ ನಾಟಕ ಮಂದಿರ ಸ್ಥಗಿತಗೊಂಡು ಸುಮಾರು ದಶಕಗಳೆ ಕಳೆದಿವೆ. ನಾಟಕ ಮಂದಿರ ಪ್ರಾರಂಭ ಇದ್ದ ಸಂದರ್ಭದಲ್ಲಿ ರಂಗಭೂಮಿ ಕಲಾವಿದರು ತಮ್ಮ ದಿನನಿತ್ಯದ ಜೀವನ ನಡೆಸಿಕೊಂಡು ಬಂದಿದ್ದರೂ ಇದು ಸದ್ಯಕ್ಕೆ ಬಂದ ಇದ್ದ ಕಾರಣ ರಂಗಭೂಮಿ ಕಲಾವಿದರು ನಾಟಕವನ್ನು ನಂಬಿ ಜೀವನ ನಡೆಸುವವರು ಕಷ್ಟದಲ್ಲಿದ್ದಾರೆ. ಪುನಃ ನಾಟಕ ಮಂದಿರ ನವೀಕರಣಗೊಳಿಸಿ ನಾಟಕ ಪ್ರದರ್ಶನಕ್ಕೆ ಅನುವು ಮಾಡಿಕೊಡಬೇಕು. ಇದರಿಂದ ನಾಟಕ ಕಲಾವಿದರಿಗೆ ಹೊಸ ಜೀವನ ಕಟ್ಟಿಕೊಳ್ಳಲು ಸಹಕಾರಿ ಆಗಲಿದೆ. ನಾಟಕ ಪುನಃರಾರಂಭಕ್ಕೆ ಹಲವಾರು ಬಾರಿ ಸಂಬಂಧಪಟ್ಟ ಅಧಿಕಾರಿಗಲಿಗೆ ಮನವಿ ಸಲ್ಲಿಸಿದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಸದ್ಯಕ್ಕೆ ನೀವು ಹಮ್ಮಿಕೊಂಡಿರುವ ಸತ್ಯಾಗ್ರಹಕ್ಕೆ ವಿಜಯಪುರ ಜಿಲ್ಲೆಯ ನಾಟಕದವರ ಕಡೆಯಿಂದ ಸಂಪೂರ್ಣ ಬೆಂಬಲ ನೀತ್ತೇವೆ ಎಂದರು.
ಜಿಲ್ಲಾಧ್ಯಕ್ಷ ಸಂಗಮೇಶಗೌಡ ದಾಶ್ಯಾಳ ಮಾತನಾಡಿ, ನಮ್ಮ ಈ ಬೇಡಿಕೆಗಳು ಈಡೇರಿಸುವವರೆಗೆ ನಾವು ಈ ಹೋರಾಟವನ್ನು ಹಿಂತೆಗೆದುಕೊಳ್ಳುವದಿಲ್ಲ. ಈ ಹೋರಾಟಕ್ಕೆ ಜಿಲ್ಲೆಯ ಎಲ್ಲ ಪ್ರಗತಿಪರ ಸಂಘಟನೆಗಳು, ಕಲಾವಿದರು ಬೆಂಬಲ ನೀಡಬೇಕೆಂದರು.
ಮಹಾಂತೇಶ ಇಂಗಳೇಶ್ವರ, ರಾಜಶೇಖರ ಗುರಗುಂಡಗಿ, ಮಲ್ಲನಗೌಡ ಬಿರಾದಾರ, ಪ್ರಭುಗೌಡ ಕೋಳೂರ, ಲಗಮಣ್ಣ ಹಿರೇಕುರುಬರ, ಚನ್ನಪ್ಪ ಐಗಳಿ, ಮಲ್ಲಪ್ಪ ಹಿರೇಕುರುಬರ, ಬಸನಗೌಡ ಪಾಟೀಲ, ಮಲ್ಲಿಕಾರ್ಜುನ ಕೊಂಡಗೂಳಿ, ಭೀರಪ್ಪ ತಡಲಗಿ, ಶ್ರೀಮಂತ ಕೊಂಡಗೂಳಿ, ಕಾರ್ಯಾಧ್ಯಕ್ಷ ಪಿಂಟೂ ಗೊಬ್ಬೂರ, ಪ್ರಧಾನ ಕಾರ್ಯದರ್ಶಿ ಮುಕದಸ್ಸ್ ಇನಾಮದಾರ, ಅಶೋಕ ಕೊಡಗ, ಆನಂದ ಹೊನ್ನೂರ, ಅಮೀನ ಚಿಕ್ಕಳ್ಳಿ, ಮಲ್ಲಮ್ಮ ಲಮಾಣಿ, ಸುಜಾತಾ ಪೂಜಾರಿ, ಲಕ್ಷ್ಮೀ ದಾಶ್ಯಾಳ, ಶಿವಗಂಗಾ ಕಟ್ಟಿಮನಿ, ಬೇಬಿ ತಳವಾರ, ರಾಜೇಶ್ವರಿ ತಳವಾರ ಹಾಗೂ ಬಸವನ ಬಾಗೇವಾಡಿ, ಚಡಚಣ ತಾಲೂಕಾ ಪದಾಧಿಕಾರಿಗಳು ಉಪಸ್ಥಿತರಿದ್ದರು.

