ವಿಜಯಪುರದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಬಸನಗೌಡ ಪಾಟೀಲ ಯತ್ನಾಳ ಭೂಮಿಪೂಜೆ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ನಗರದ ಜನತೆಯ ಸಹಕಾರದಿಂದ ಅಭಿವೃದ್ಧಿ ವಂಚಿತವಾಗಿದ್ದ ವಿಜಯಪುರ ನಗರವನ್ನು ಪ್ರಸ್ತುತ ಮಾದರಿ ನಗರವನ್ನಾಗಿ ಅಭಿವೃದ್ಧಿಪಡಿಸಲು ಸಾಧ್ಯವಾಯಿತು ಎಂದು ಶಾಸಕರಾದ ಬಸನಗೌಡ ಪಾಟೀಲ ಯತ್ನಾಳ ಅವರು ಹೇಳಿದರು.
ನಗರಾಭಿವೃದ್ದಿ ಪ್ರಾಧಿಕಾರದಿಂದ ಸನ್ 2023ನೇ ಸಾಲಿನಲ್ಲಿ ಕೈಗೆತ್ತಿಕೊಂಡ ಕಾಮಗಾರಿಗಳಿಗೆ ಹಿಂದೇಯೇ ಮಂಜೂರಿಸಲಾದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಸೋಮವಾರ ನಗರದ ವಿವಿಧೆಡೆ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಅವರು, ಪ್ರತಿಯೊಂದರಲ್ಲಿಯೂ ಕೊನೆಯ ಸ್ಥಾನದಲ್ಲಿರುತ್ತಿದ್ದ ವಿಜಯಪುರ ನಗರ ಸದ್ಯ, ಅಭಿವೃದ್ಧಿ ಮತ್ತು ಸಾಧನೆಯಲ್ಲಿ ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಗುರುತಿಸಿಕೊಳ್ಳುವಂತೆ ಮಾಡಲಾಗಿದೆ ಎಂದರು.
ಮೊದಲಿಗೆ ಲಿಂಗೇಶ್ವರ ಕಾಲನಿ ಉದ್ಯಾನವನದಲ್ಲಿ, ನಮರ್ಥ ನಗರದ ರಿಂಗ್ ಮನಗೂಳಿ ರಸ್ತೆ ಉದ್ಯಾನವನದಲ್ಲಿ, ಯೋಗಾಪುರ ಕಾಲೊನಿಯ ಡಾ.ಅಂಬೇಡ್ಕರ್ ವೃತ್ತದ ಹತ್ತಿರ, ರಿಂಗ್ ರಸ್ತೆಯ ಚಿದಂಬರ ಗುಡಿ ಹತ್ತಿರ ಹಾಗೂ ವಾ.ನಂ.22 ರಲ್ಲಿ ಬರುವ ಓನಕೆ ಓಬವ್ವ ಉದ್ಯಾನವನದಲ್ಲಿ, ರೂ.22.70 ಲಕ್ಷ ಮೊತ್ತದಲ್ಲಿ 12.00/12.50 ಮೀ ಎತ್ತರದ ಹೈಮಾಸ್ಟ್ ಗಳ ಅಳವಡಿಕೆ ಕಾಮಗಾರಿಗಳಿಗೆ ವಾ.ನಂ.21 ರಲ್ಲಿ ಬರುವ ಚಿದಂಬರ ಗುಡಿ ಹತ್ತಿರ ಭೂಮಿಪೂಜೆ ನೆರವೇರಿಸಿದರು.
ನಂತರ ರೂ.47.49 ಲಕ್ಷ ಮೊತ್ತದಲ್ಲಿ ಕೈಗೊಳ್ಳಲಾಗುವ ಸಾಯಿಪಾರ್ಕ್ ಏಳು ಮಕ್ಕಳ ತಾಯಿ ಗುಡಿ ಹತ್ತಿರ ಖಾಲಿ ಜಾಗದಲ್ಲಿ ಗಾರ್ಡನ್ ಅಭಿವೃದ್ಧಿ ಹಾಗೂ ಮಹಾಲಕ್ಷ್ಮೀ ಗುಡಿ ಹತ್ತಿರದ ಉದ್ಯಾನವನದ ಅಭಿವೃದ್ಧಿ ಕಾಮಗಾರಿಗಳಿಗೆ ಸಾಯಿಪಾರ್ಕ್ ಏಳು ಮಕ್ಕಳ ತಾಯಿ ಗುಡಿಯ ಹತ್ತಿರ ಭೂಮಿಪೂಜೆಯನ್ನು ನೆರವೇರಿಸಿದರು.
ತದ ನಂತರ ರೂ.65.34 ಲಕ್ಷ ಮೊತ್ತದಲ್ಲಿ ಕೌತಾಳ ಲೇಔಟ್ ಜಯಲಕ್ಷ್ಮೀ ನಗರದ ಹತ್ತಿರದ ಉದ್ಯಾನವನದ ಅಭಿವೃದ್ಧಿ, ರಾಮನಗರದ ಉದ್ಯಾನವನದಲ್ಲಿ ಚೈನ್ ಲಿಂಕ್ ಮೆಶ್, ಪಿಡಿಜೆ ಲೇಔಟ್ ಕೃಷ್ಣಾ ನಗರದಲ್ಲಿ, ಆದಿಲ್ ಶಾಹಿ ನಗರದಲ್ಲಿ, ಗ್ಯಾಂಗಬಾವಡಿ ಓಂ ಗಣಪತಿ ಗುಡಿ ಹತ್ತಿರ, ಎಂ.ಬಿ.ಪಾಟೀಲ ನಗರದ (ಸಿ ಬ್ಲಾಕ್)ದಲ್ಲಿಯ, ತೋಂಟದಾರ್ಯ ಲೇಔಟ್ ದಲ್ಲಿ, ವಾ.ನಂ.12 ರ ಆನಂದ ನಗರದ ದಾನಮ್ಮ ದೇವಿ ಗುಡಿ ಹತ್ತಿರ ಸುಮಾರು 12.00/12.50 ಮೀ ಎತ್ತರದ ಹೈಮಾಸ್ಟ್ ಗಳನ್ನು ಅಳವಡಿಸುವ ಕಾಮಗಾರಿಗಳಿಗೆ ಕೌತಾಳ ಲೇಔಟ್ ಜಯಲಕ್ಷ್ಮೀ ನಗರದ ಹತ್ತಿರ ಭೂಮಿಪೂಜೆಯನ್ನು ನೆರವೇರಿಸಿದರು.
ಪ್ರತಿ ಭೂಮಿಪೂಜೆ ಸಮಾಮಭದ ಬಳಿಕೆ ನೆರೆದ ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸಿದ ಶಾಸಕರು, ಸ್ಥಳದಲ್ಲೇ ಹಲವಾರು ಪರಿಹಾರ ಕಲ್ಪಿಸಿದರು. ಮಹಾನಗರ ಪಾಲಿಕೆ ಸದಸ್ಯರು, ಮುಖಂಡರು, ಕಾರ್ಯಕರ್ತರು, ಅಭಿಮಾನಿಗಳು, ಬಡಾವಣೆ, ಕಾಲೊನಿಗಳ ನಿವಾಸಿಗಳು ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.

