ಉದಯರಶ್ಮಿ ದಿನಪತ್ರಿಕೆ
ಕೊಲ್ಹಾರ: ಇಸ್ರೇಲ್ ಹಾಗೂ ಇರಾಕ್ ಎರಡು ದೇಶದ ನಡುವೆ ನಡೆಯುತ್ತಿರುವ ಯುದ್ದದ ಪರಿಣಾಮದಿಂದ ಹವಾಮಾನ ವೈಪರೀತ್ಯ ಉಂಟಾಗಿ ವಿಶ್ವದ ಅನೇಕ ದೇಶಗಳಲ್ಲಿ ಮನುಷ್ಯನ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಸಂಭವವಿದೆ ಎಂದು ಕಾಲಜ್ಞಾನ ಬ್ರಹ್ಮ ಡಾ.ಶರಣಬಸವ ಮಹಾಸ್ವಾಮಿಗಳು ತಳ್ಳಿಹಾಳ ಕೋಡಿಮಠ ಗಜೇಂದ್ರಗಡ ಹೇಳಿದರು.
ನಾಡು ಸಂಚಾರ ಪ್ರಯುಕ್ತ ಭಕ್ತರ ತಿಂಗಳ ಬೇಟಿ ಕಾರ್ಯಕ್ರಮದ ನಿಮಿತ್ಯ ಕೊಲ್ಹಾರ ಪಟ್ಟಣಕ್ಕೆ ಆಗಮಿಸಿದ ಸಂದರ್ಭದಲ್ಲಿ ಜಗದ್ಗುರು ರೇಣುಕಾಚಾರ್ಯ ಸೌಹಾರ್ದ ಸಹಕಾರಿ ಸಂಘದವರು ಏರ್ಪಡಿಸಿದ್ದ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ಕಾರ್ತೀಕ ಮಾಸದ ಕಾಲಜ್ಞಾನವನ್ನು ನುಡಿದ ಅವರು ಈ ತಿಂಗಳಿನಲ್ಲಿ ಮಕ್ಕಳಿಗೆ ಯುವಕರಿಗೆ ಶೀತಭಾದೆ ಚಳಿಜ್ವರದಂತಹ ರೋಗವು ವ್ಯಾಪಕವಾಗಿ ಹರಡುವದು ಸ್ವಾಮಿಗಳಿಗೆ ಕಂಟಕ ಬರುವುದು ಎಂದ ಅವರು ಇದರಿಂದ ಭಾರತ ದೇಶದ ಜನರಿಗೆ ಅಷ್ಟೇನು ಮಾರಕವಲ್ಲ ರಾಜಕೀಯದಲ್ಲಿ ಸ್ಥಾನಪಲ್ಲಟ ಏರಿಳಿತವಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ರಾಜಶೇಖರಯ್ಯ ಹಿರೇಮಠ, ಗುರುಸಿದ್ದಯ್ಯ ಪರಡಿಮಠ, ರುದ್ರಯ್ಯ ಮಠಪತಿ, ವಿದ್ಯಾಧರ ದೇಸಾಯಿ, ಬಸಯ್ಯ ಗಣಾಚಾರಿ, ಈರಯ್ಯ ಗಣಕುಮಾರ ಹಾಗೂ ಬ್ಯಾಂಕ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.

