ಮೇಳಾದಲ್ಲಾದ ಅಫಘಾತಕ್ಕೆ ಜಿಲ್ಲಾಡಳಿತ ಹೊಣೆ :ಭೀಮ್ ಸರ್ಕಾರ
ಉದಯರಶ್ಮಿ ದಿನಪತ್ರಿಕೆ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಇಂಡಿಯಾ ಬಿಗ್ಗೇಷ್ಟ್ ಅಂಡರ್ ವಾಟರ್ ಫಿಶ್ ಟ್ಯುನಲ್ ಎಕ್ಸಪೊ ಎಕ್ಸಬೀಷನ್ ಕಂಪನಿ ನಡೆಸುವ ಮೇಳಾದಲ್ಲಿ ಆದ ಅಫಘಾತಕ್ಕೆ ಜಿಲ್ಲಾಡಳತವೇ ಹೊಣೆ ಎಂದು ಭೀಮ್ ಸರಕಾರ ಸಂಘಟನೆಯು ಜಿಲ್ಲಾಧಿಕಾರಿಗಳ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು,
ಮನವಿಯಲ್ಲಿ ಮೇಳಾದಲ್ಲಿ ಅ.೨೦ ರವಿವಾರದಂದು ನಡೆದ ಅಪಘಾತದಲ್ಲಿ ಬಸವನ ಬಾಗೇವಾಡಿ ತಾಲೂಕಾ ಇಂಗಳೇಶ್ವರ ಗ್ರಾಮದ ಹಾಲಿ ವಸ್ತಿ ನಿಡಗುಂದಿ ಪಟ್ಟಣದ ನಿಖಿತಾ ಅರವಿಂದ ಬಿರಾದಾರ (೧೮) ಸಾವಿಗೀಡಾಗಿದ್ದು, ಜಿಲ್ಲಾಡಳಿತವೇ ನೇರ ಹೊಣೆಗಾರಿಯಾಗಿರುತ್ತದೆ. ಏಕೆಂದರೆ, ಇದಕ್ಕೆ ಅಧಿಕೃತವಾದ ಪರವಾನಿಗೆಯನ್ನು ಜಿಲ್ಲಾಡಳಿತ ನೀಡದಿರುವುದು, ಏಕೆಂದರೆ, ಈ ಸದರ ಕಂಪನಿ ನಡೆಸುವ ಮೇಳಾಕ್ಕೆ ಪೂರ್ವದಲ್ಲಿ ಸಂಬಂಧಿಸಿದ ಎಲ್ಲ ಇಲಾಖೆಗೆ ನಿರಾಕ್ಷೇಪಣಾ ಪ್ರಮಾಣ ಪತ್ರ ನೀಡಿರುವ ಕುರಿತು ನಮ್ಮ ಸಂಘಟನೆಯು ಲಿಖಿತ ಮನವಿ ಮೂಲಕ ಕೇಳಿಕೊಂಡಿತ್ತು, ನಿರಾಕ್ಷೇಪಣಾ ಪತ್ರ ಹಾಗೂ ಪರವಾನಿಗೆ ನೀಡಿದರ ಬಗ್ಗೆ ಅಧಿಕಾರಿಗಳು ನಮ್ಮ ಗಮನಕ್ಕೆ ತರದೆ ಇರುವದು ಸಂಶಯಕ್ಕೆ ಕಾರಣವಾಗಿದ್ದು, ಸದರ ಕಂಪನಿಯು ಅಧಿಕೃತ ಪರವಾನಿಗೆ ಇಲ್ಲದೆ ನಡೆಸಿದೆ ಎಂಬುದು ಸ್ಪಷ್ಟವಾಗುತ್ತದೆ. ಆದ್ದರಿಂದ ಮೊನ್ನೆ ಘಟಿಸಿದ ಅನಾಹುತಕ್ಕೆ ಜಿಲ್ಲಾಡಳಿತವೇ ನೇರ ಜವಾಬ್ದಾರಿ ಎಂಬುದರಲ್ಲಿ ಎರಡು ಮಾತಿಲ್ಲ ಜಿಲ್ಲಾಡಳಿತದ ವಿರುದ್ಧ ಕ್ರಮ ಕೈಕೊಳ್ಳಲು ಮುಖ್ಯ ಮಂತ್ರಿಗಳಿಗೆ ಮನವಿ ಮಾಡುತ್ತ ಒಂದು ವೇಳೆ ನ್ಯಾಯ ಸಿಗದ ಪಕ್ಷದಲ್ಲಿ ನಾವೂ ನ್ಯಾಯಾಲಯದ ಮೊರೆ ಹೋಗುವುದು ಖಚಿತ ಎಂದು ಎಚ್ಚರಿಸಲಾಗಿದೆ.
ಈ ಸಂದರ್ಭದಲ್ಲಿ ಅನೀಲ ಬೋರಗಿ, ಸೋಮಶೇಖರ ಶಹಾಪೂರ, ಪರಶುರಾಮ ಮಹಾದೇವ ಚಲವಾದಿ, ಪವನ ಹರಿಜನ, ಸುನೀಲ ಬೋರಗಿ, ಗುರಪ್ಪ ಶಹಾಪೂರ, ಶಂಕರ ಬಜಂತ್ರಿ, ಶಿವಪ್ಪ ಬಬಲೇಶ್ವರ, ವಿಜು ಚಂದನಸೇವೆ, ವಿಜು ಶಹಾಪೂರ ಮುಂತಾದವರು ಉಪಸ್ಥಿತರಿದ್ದರು.

