ಉದಯರಶ್ಮಿ ದಿನಪತ್ರಿಕೆ
ಮುದ್ದೇಬಿಹಾಳ: ಪಟ್ಟಣದ ಹಳೆಯ ತರಕಾರಿ ಮಾರುಕಟ್ಟೆಯ ಬಳಿಯ ಶ್ರೀ ಖಾಸ್ಗತೇಶ್ವರ ಮಠದಲ್ಲಿ ಅ.೨೬ ರಂದು ಸಂಜೆ ೫ಕ್ಕೆ ದ.ರಾ ಬೇಂದ್ರೆಯವರ ಪುಣ್ಯ ಸ್ಮರಣೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಈ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಖಾಸ್ಗತೇಶ್ವರ ಮಠದ ಶರಣೆ ತಾಯಿ ನೀಲಮ್ಮನವರು ವಹಿಸಲಿದ್ದು, ಗಣ್ಯ ವ್ಯಾಪಾರಿ ಬಸವರಾಜ ಮೋಟಗಿ ಉದ್ಘಾಟಿಸಲಿದ್ದಾರೆ. ಹಿರಿಯ ಸಾಹಿತಿ ಬಿ.ಎಂ.ಹಿರೇಮಠರು ಉಪಸ್ಥಿತರಿರಲಿದ್ದು ಕಸಾಪ ಅಧ್ಯಕ್ಷ ಕಾಮರಾಜ ಬಿರಾದಾರ ಅಧ್ಯಕ್ಷತೆ ವಹಿಸಲಿದ್ದಾರೆ. ಪ್ರೋ.ಐ.ಬಿ.ಹಿರೇಮಠರು ಉಪನ್ಯಾಸ ನೀಡಲಿದ್ದು ಮುಖ್ಯ ಅತಿಥಿಗಳಾಗಿ ತಾಪಂ ಮಾಜಿ ಅಧ್ಯಕ್ಷ ವಾಯ್.ಎಚ್.ವಿಜಯಕರ, ಗಣ್ಯ ವ್ಯಾಪಾರಸ್ಥರಾದ ಅಬ್ದುಲ್ಗಫಾರ ಮಕಾನದಾರ, ವಾಸುದೇವ ಶಾಸ್ತ್ರಿ, ಎಂ.ಎಸ್.ಬಿರಾದಾರ, ಅಶೋಕ ಚಟ್ಟೇರ, ಶಿಕ್ಷಕಿಯರಾದ ಸರೋಜಾ ಕೋರಿ, ಸುಮಲತಾ ಸಜ್ಜನ ಆಗಮಿಸಲಿದ್ದು, ಶಿಕ್ಷಕರಾದ ಸಿದ್ದನಗೌಡ ಬಿರಾದಾರ, ಪ್ರಭುಗೌಡ ರೆಡ್ಡಿ, ಸಿ.ಜಿ.ನಾಗರಾಳ ಕಾರ್ಯಕ್ರಮವನ್ನು ನಿರ್ವಹಿಸಲಿದ್ದಾರೆ.
