ಉದಯರಶ್ಮಿ ದಿನಪತ್ರಿಕೆ
ಇಂಡಿ: ಎಲ್ಲರು ಮಹಾತ್ಮರ ಸ್ಮರಣೆ ಮಾಡಬೇಕು. ಇದರಿಂದ ಎಂತಹ ಕಷ್ಟಗಳು ಬಂದರೂ ಪರಿಹಾರವಾಗುತ್ತವೆ ಎಂದು ಕಾಶಿ ಪೀಠದ ಜಗದ್ಗುರು ಡಾ.ಮಲ್ಲಿಕಾರ್ಜುನ ವಿಶ್ವಾರಾಧ್ಯ ಶಿವಾಚಾರ್ಯ ಭಗವತ್ವಾರರು ಹೇಳಿದರು.
ಶನಿವಾರ ತಾಲೂಕಿನ ಹಲಸಂಗಿ ಗ್ರಾಮದ ಶ್ರೀ ದೇವಿ ಉತ್ಸವ ಹಾಗೂ ಅಡ್ಡ ಪಲ್ಲಕ್ಕಿ ಮಹೋತ್ಸವ, ಧರ್ಮ ಸಭೆ ಕಾರ್ಯಕ್ರಮದಲ್ಲಿ ಅವರು ಆಶೀರ್ವಚನ ನೀಡಿದರು.
ಕರ್ಮದ ಹಾದಿ ಬಿಟ್ಟು, ಧರ್ಮದ ಹಾದಿ ಹಿಡಿಯುವುದರಿಂದ ಧರ್ಮ ನಮ್ಮನ್ನು ಕಾಯುತ್ತದೆ. ಮೂಲ ಪುರುಷನನ್ನು ನಂಬಿದವರು ಯಾರೂ ಕೆಟ್ಟಿಲ್ಲ. ಸತ್ಯದ ಮಂತ್ರವನ್ನು ಬಿಟ್ಟು ಮಿಕ್ಕಿದ ಮಂತ್ರವನ್ನು ನಂಬಿದವರು ಯಾರಿಗೂ ಒಳ್ಳೆಯದಾಗಿಲ್ಲ ಎಂದರು.
ಅತಿಯಾದ ಆಶೆ ಮನುಷ್ಯನನ್ನ ಹಾಳು ಮಾಡುತ್ತದೆ. ಇರುವುದರಲ್ಲಿಯೇ ಬದುಕು ನಡೆಸುವ ಕಲೆಯನ್ನ ನಾವುಗಳು ಕಲಿಯಬೇಕು. ಶರಣರು ದೊಡ್ಡ ದೊಡ್ಡ ಕಟ್ಟಡಗಳನ್ನ ನಿರ್ಮಾಣ ಮಾಡಲಿಲ್ಲ ಅವರಿಂದ ಸಣ್ಣ ಸಣ್ಣ ಮನೆಗಳಲ್ಲಿಯೇ ದೊಡ್ಡ ದೊಡ್ಡ ಧರ್ಮದ ಕಾರ್ಯಗಳನ್ನ ಮಾಡಿ ತೋರಿಸಿದವರು. ಆದರೆ ನಾವುಗಳು ದೊಡ್ಡ ದೊಡ್ಡ ಮನೆಗಳಲ್ಲಿ ಇದ್ದೇವೆ, ಆದರೆ ಧರ್ಮದ ಕಾರ್ಯಗಳಿಗೆ ತನು ಮನ ಧನದಿಂದ ಸೇವೆ ಮಾಡುವುದನ್ನ ಮರೆತು ಬಿಟ್ಟಿದ್ದೇವೆ. ಮನೆ ದೊಡ್ಡದಿದ್ದರೆ ಸಾಲದು ಮನಸ್ಸು ದೊಡ್ಡದಿರಬೇಕು. ಧರ್ಮದ ಕಾರ್ಯಗಳಿಗೆ ಸದಾಕಾಲವೂ ದುಡಿಯುವುದನ್ನ ಕಲಿತಾಗ ಮಾತ್ರ ಈ ಜೀವನ ಪಾವನವಾಗಲೂ ಸಾದ್ಯ ಎಂದರು.
ಉತ್ತರ ಕರ್ನಾಟಕ ಪರಮಪಾವನ ಪುಣ್ಯ ಕ್ಷೇತ್ರ, ಸೂಫಿ ಸಂತರ ಪುಣ್ಯತಾಣ, ಐತಿಹಾಸಿಕ ಜಕ್ಕವ್ವನ ಕೋಟೆ, ಪರಮ ತಪೋಮೋರ್ತಿ ಅಲ್ಲಮಪ್ರಭುಗಳು ನೆಲಸಿದ ಪುಣ್ಯಸ್ಥಳ, ಹಲಸಂಗಿ ಗೆಳೆಯರ ಸಾಹಿತಿಗಳ ನಾಡು ಎಂದು ಪ್ರಸಿದ್ದ ಪಡದಿದೆ. ಹಾಲಿನಂತೆ ಇರುವ ಮನಸ್ಸುಗಳು ಹಲಸಂಗಿ ಗ್ರಾಮದಲ್ಲಿ ಇವೆ ಎಂದರು.
ಜಿಲ್ಲಾ ಪಂಚಾಯತ ಮಾಜಿ ಸದಸ್ಯ ಪಂಚಪ್ಪ ಕಲಬುರ್ಗಿ ಮಾತನಾಡಿ, ರಾಜ್ಯದಲ್ಲಿ ಮಧ್ಯಪಾನ ನಿಷೇಧ ಮಾಡಲು ಮನವಿ ಮಾಡಿದ ಅವರು, ಇಂದಿನ ಕಾಲದಲ್ಲಿ ಪ್ರತಿಯೊಂದು ಮನೆಯಲ್ಲಿ ಯುವಕರು ಮಧ್ಯಪಾನಕ್ಕೆ ಅಂಟಿಕೊಂಡಿದ್ದಾರೆ. ನಮ್ಮ ಗ್ರಾಮ ವ್ಯಸನ ಮುಕ್ತ ಗ್ರಾಮನಾಗಿ ಮಾಡಿ ಎಂದು ಶ್ರೀಗಳ ಮೂಲಕ ರಾಜ್ಯ ಸರಕಾರಕ್ಕೆ ಮನವಿ ಮಾಡಿದರು.
ಭೀಮಾಶಂಕರ ಸಕ್ಕರೆ ಕಾರ್ಖಾನೆ ಉಪಾಧ್ಯಕ್ಷ ಎಮ್.ಆರ್. ಪಾಟೀಲ ಮಾತನಾಡಿದರು.
ಈ ಸಂದರ್ಭದಲ್ಲಿ ಮಾಳಕವಠೆ ಗ್ರಾಮದ ಪಂಚಾಕ್ಷರಿ ಮಾಹಾಸ್ವಾಮಿಗಳು, ಹತ್ತಳಿಯ ಗುರುಪಾದೇಶ್ವರ ಶಿವಾಚಾರ್ಯರು, ತಡವಲಗಾದ ಅಭಿನವ ರಾಚೋಟೆಶ್ವರ ಮಾಹಾಸ್ವಾಮಿಗಳು, ತದ್ದೇವಾಡಿ ಚಂದ್ರಶೇಖರ ದೇವರು, ಮಾಹಾಂತೇಷ ಸ್ವಾಮೀಜಿ, ರೇವಣಸಿದ್ದಯ್ಯ ಹಿರೇಮಠ, ಜೇನಾಪುರ ಶ್ರೀಗಳು, ಗ್ರಾಪಂ ಅಧ್ಯಕ್ಷ ನಿತೀಶ ಮನಮಿ, ಭೀಮಾಶಂಕರ ಸಕ್ಕರೆ ಕಾರ್ಖಾನೆ ಸದಸ್ಯ ರೇವಗೊಂಡಪ್ಪ ಪಾಟೀಲ, ಸಿದ್ದಾರಾಮ ನಿಚ್ಚಳ, ಅಶೋಕ ಕುಲಕರ್ಣಿ, ವಿಶ್ವನಾಥ ಪೂಜಾರಿ, ಮಲ್ಲಯ್ಯ ಹಿರೇಮಠ, ಬಾಬಾಸಾಹೇಬ ವಿಜಯಪುರ, ಫರವೇಜ ಪಟೇಲ, ರುಕ್ಮುದೀನ ತದ್ದೇವಾಡಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಕಾರ್ಯಕ್ರಮದ ಮೊದಲು ಶ್ರೀಗಳ ಅಡ್ಡಪಲ್ಲಕ್ಕಿ ಮಹೋತ್ಸವ ನಡೆಯಿತು ೨೫೧ ಸುಮಂಗಲಿಯರಿಂದ ಕುಂಭ ಮೇಳ, ಡೊಳ್ಳು ಕುಣಿತ, ಕೊಂಬೆ ಕುಣಿತ, ಸಕಲ ಸಂಗೀತ ವಾಧ್ಯಗಳ ಮೂಲಕ ಭವ್ಯವಾದ ಮೆರವಣಿಗೆ ಜರುಗಿತು.

