ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ವೈದ್ಯಕೀಯ ಕಾಲೇಜುಗಳಿಗೆ ದೇಹದಾನ ಮಾಡುವುದು ಸಾಮಾನ್ಯ. ಆದರೆ, ಇದೇ ಮೊದಲ ಬಾರಿಗೆ ಆಯುರ್ವೇದ ನಗರದ ಬಿ.ಎಲ್.ಡಿ ಇ ಸಂಸ್ಥೆಯ ಎವಿಎಸ್ ಆಯುರ್ವೇದ ಮಹಾವಿದ್ಯಾಲಯಕ್ಕೆ ಇದೇ ಮೊದಲ ಬಾರಿಗೆ ದೇಹದಾನ ಮಾಡಲಾಗಿದೆ.
ದೇಹದಾನ ಜಾಗೃತಿಗಾಗಿ ತಂದೆಯ ಮೃತ ದೇಹ ಛೇದನ ಮಾಡಿ ವೈದ್ಯಕೀಯ ಇತಿಹಾಸ ಸೃಷ್ಠಿಸಿದ ಬೆಳಗಾವಿ ಕೆ.ಎಲ್.ಇ ವಿಶ್ವವಿದ್ಯಾಲಯದ ಶ್ರೀ ಬಿ. ಎಂ. ಕೆ. ಆಯುರ್ವೇದ ಮಹಾವಿದ್ಯಾಲಯದ ಶರೀರ ರಚನಾ ಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಮಹಾಂತೇಶ ರಾಮಣ್ಣವರ ಅವರು ಬೈಲಹೊಂಗಲದ ಡಾ. ರಾಮಣ್ಣವರ ಚಾರಿಟೆಬಲ್ ಟ್ರಸ್ಟಿನ ಟ್ರಸ್ಟ್ ವತಿಯಿಂದ ಅ.16 ರಂದು ಬುಧವಾರ ಈ ದೇಹದಾನ ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು ಎವಿಎಸ್ ಆಯುರ್ವೇದ ಕಾಲೇಜಿನ ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ಅಧ್ಯಯನಕ್ಕೆ ತಮ್ಮ ಟ್ರಸ್ಟ ಮೂಲಕ ಒಂದು ಮೃತ ಶರೀರವನ್ನು ಈ ದೇಹದಾನ ಮಾಡಲಾಗಿದೆ ಎೞದು ಹೇಳಿದರು. ಅಲ್ಲದೇ, ದೇಹದಾನ, ಅಂಗಾಂಗ ದಾನ, ರಕ್ತದಾನ ಹಾಗೂ ಅಂಗಾಂಗ ಕಸಿಯ ಕುರಿತು ಬಿಎಎಂಎಸ್ ವಿದ್ಯಾರ್ಥಿಗಳಿಗೆ ಸವಿವರವಾಗಿ ಮಾಹಿತಿ ನೀಡಿದರು.
ಶರಣ ವಿಚಾರ ವಾಹಿನಿಯ ಐ. ಆರ್. ಮಠಪತಿ ಸ್ವಾಮೀಜಿ ಅವರೂ ಕೂಡ ದೇಹದಾನದ ಜಾಗೃತಿ ಕುರಿತು ತಿಳಿಸಿದರು.
ಕಾಲೇಜಿನ ಪ್ರಾಚಾರ್ಯ ಡಾ. ,ಸಂಜಯ ಕಡ್ಲಿಮಟ್ಟಿ ಅವರು ವೈದ್ಯಕೀಯ ವಿದ್ಯಾರ್ಥಿಗಳಿಗೆ ಪ್ರತಿಜ್ಞಾ ವಿಧಿ ಭೋಧಿಸಿದರು.
ಈ ಸಂದರ್ಭದಲ್ಲಿ ಶರೀರ ರಚನಾ ಶಾಸ್ತ್ರ ವಿಭಾಗದ ಸಹಪ್ರಾಧ್ಯಾಪಕ ಡಾ. ಶಿವಕುಮಾರ ಯರಗಲ, ಡಾ. ರಫಿಯಾಬಾನು ತಾಳಿಕೋಟಿ, ಎಸ್. ಎಲ್. ಬಾಡಗಿ, ಅಫೀಫಾ ಸುಬೇದಾರ, ಈಶ್ವರಿ ದೊಡವಾಡ, ಡಾ. ಸಾನಿಕಾ ದೇಶಪಾಂಡೆ, ವಿದ್ಯಾರ್ಥಿಗಳು, ಕಾಲೇಜಿನ ಸಿಬ್ಬಂದಿ ಉಪಸ್ಥಿತರಿದ್ದರು.

