ಬಸವನಬಾಗೇವಾಡಿ: ಪಟ್ಟಣದ ಆರಾಧ್ಯದೈವ ಮೂಲನಂದೀಶ್ವರ (ಬಸವೇಶ್ವರ) ದೇವರ ಜಾತ್ರಾಮಹೋತ್ಸವದಂಗವಾಗಿ ನಂದಿ ತರಕಾರಿ ಮಾರುಕಟ್ಟೆ ಆವರಣದಲ್ಲಿ ಗೆಳೆಯರ ಬಳಗವು ಹಮ್ಮಿಕೊಂಡಿದ್ದ ೫೫ ಎಚ್ಪಿ ಟ್ರ್ಯಾಕ್ಟರ್ ಜಗ್ಗುವ ಸ್ಪರ್ಧೆ ಕಿಕ್ಕಿರಿದ ಯುವಕರನ್ನು, ಜನಸ್ತೋಮವನ್ನು ಕಾತರ ಮೂಡಿಸುವ ಜೊತೆಗೆ ರೋಮಾಂಚನಗೊಳಿಸಿತು.
ಪಟ್ಟಣದಲ್ಲಿ ಜಾತ್ರೆಯಂಗವಾಗಿ ಎರಡನೇ ಬಾರಿಗೆ ಹಮ್ಮಿಕೊಂಡಿದ್ದ ಈ ಸ್ಪರ್ಧೆಯಲ್ಲಿ ಭಾಗವಹಿಸಲು ಆಲಮೇಲ, ಇಂಡಿ, ಬಬಲೇಶ್ವರ, ಬುದ್ನಿ, ಕುಂಟೋಜಿ, ಜಮಖಂಡಿಯ ಹಿಪ್ಪರಗಿ ಸೇರಿದಂತೆ ವಿವಿಧ ಭಾಗಗಳಿಂದ ೨೬ ಟ್ರ್ಯಾಕ್ರ್ಗಳು ಬಂದಿದ್ದವು.
ಸ್ಪರ್ಧೆಗೆ ಹಿರೇಮಠದ ಶಿವಪ್ರಕಾಶ ಶಿವಾಚಾರ್ಯ ಸ್ವಾಮೀಜಿ, ಶಿವಾನಂದ ಈರಕಾರಮುತ್ಯಾ, ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷ ಸುರೇಶ ಹಾರಿವಾಳ ಚಾಲನೆ ನೀಡಿದರು.
ಸ್ಪರ್ಧೆ ಆರಂಭವಾಗುತ್ತಿದ್ದಂತೆ ನಂದಿ ತರಕಾರಿ ಮಾರುಕಟ್ಟೆ ಆವರಣ, ವಿವಿಧ ಕಟ್ಟಡಗಳ ಮಾಳಿಗೆಯ ಮೇಲೆ ನಿಂತಿದ್ದ ಯುವ ಪಡೆಯ ರ್ಷೋದ್ಘಾರ ಮುಗಿಲು ಮುಟ್ಟಿತು. ಟ್ರ್ಯಾಕ್ಟರ್ ಜಗ್ಗಾಟ ನೆರೆದ ಜನರಲ್ಲಿ ಕಾತರತೆ ಮೂಡಿಸಿತು. ನಂದಿ ತರಕಾರಿ ಮಾರುಕಟ್ಟೆ ಸುತ್ತಮುತ್ತ ಎಲ್ಲಿ ನೋಡಿದರೂ ದ್ವಿಚಕ್ರವಾಹನಗಳು, ಅಪಾರ ಸಂಖ್ಯೆಯ ಜನರು ಕಂಡುಬಂದರು. ಸ್ರ್ಧೆಯಲ್ಲಿ ಯಾವುದೇ ಅಹಿತಕರ ಘಟನೆ ಸಂಭವಿಸದಂತೆ ಟ್ರ್ಯಾಕ್ಟರ್ ಜಗ್ಗಾಟ ನಡೆಯುವ ಪ್ರದೇಶದ ಸುತ್ತಲೂ ಬ್ಯಾರಿಕೇಡ್ ಅಳವಡಿಸಲಾಗಿತ್ತು. ಇದರ ಜೊತೆಗೆ ಸೂಕ್ತ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು. ಜನರನ್ನು ನಿಯಂತ್ರಿಸುವಲ್ಲಿ ಪೊಲೀಸ್ ಸಿಬ್ಬಂದಿಗಳು ಹರಸಾಹಸ ಪಟ್ಟರು.
ಈ ಸ್ರ್ಧೆಯಲ್ಲಿ ಪ್ರಥಮ ರೂ.೫೧ ಸಾವಿರ, ದ್ವಿತೀಯ ರೂ. ೩೦ ಸಾವಿರ, ತೃತೀಯ ರೂ. ೨೦ ಸಾವಿರ, ಚತರ್ಥಿ ರೂ.೧೦ ಸಾವಿರ, ಐದನೇ ಬಹುಮಾನ ರೂ. ೫ ಸಾವಿರ ನಗದು ಬಹುಮಾನವಿದೆ. ಈ ಬಹುಮಾನ ಪಡೆಯಲು ಟ್ರ್ಯಾಕ್ಟರ್ ಚಾಲಕರು ತಮ್ಮ ತಮ್ಮ ಟ್ರ್ಯಾಕ್ಟರ್ ಅನ್ನು ಬಾರಿ ಕಸರತ್ತಿನೊಂದಿಗೆ ಟ್ರ್ಯಾಕ್ಟರ್ ಜಗ್ಗುವ ಕಡೆಗೆ ಹೆಚ್ಚು ಗಮನ ಹರಿಸುವುದು ಕಂಡುಬಂದಿತ್ತು. ಸಂಜೆ ೭ ಗಂಟೆಯಾದರೂ ಒಂದನೇ ಸುತ್ತು ಮುಗಿದಿರಲಿಲ್ಲ.
ಈ ಸ್ರ್ಧೆಯಲ್ಲಿ ನಾಲ್ಕು ಸುತ್ತು ಇದ್ದು. ಸ್ರ್ಧೆಯು ತಡರಾತ್ರಿಯವರೆಗೂ ಎಲ್ಲ ಸುತ್ತುಗಳು ಮುಕ್ತಾಯವಾಗುವವರೆಗೂ ಮುಂದುವರಿಯಲಿದೆ ಎಂದು ಸ್ಪರ್ಧೆಯ ಆಯೋಜಕರಲ್ಲಿ ಒಬ್ಬರಾದ ಮಂಜು ಹಾರಿವಾಳ ಹೇಳಿದರು.
ಸ್ರ್ಧೆಯ ಆಯೋಜಕರಾದ ಮಂಜು ಹಾರಿವಾಳ. ಮೀರಸಾಬ ಕೊರಬು, ಸುರೇಶ ಹಾರಿವಾಳ, ಪಿಂಟುಗೌಡ ಪಾಟೀಲ, ಸಂತೋಷ ಕೂಡಗಿ, ಬಸವರಾಜ ಚೌಧರಿ, ಗುರು ವಂದಾಲ, ಮಲ್ಲು ಡೋಣೂರ, ಶ್ರೀಶೈಲ ಹೆಬ್ಬಾಳ, ಮಾಂತು ಮಾಲಗಾರ, ಜಗದೀಶ ನಿಕ್ಕಂ, ಮಹೇಶ ಹಾರಿವಾಳ,ಸಂಗಮೇಶ ಮೈಲೇಶ್ವರ, ಗುಂಡು ಪಡಶೆಟ್ಟಿ ಸೇರಿದಂತೆ ಇತರರು ಇದ್ದರು. ಅಶೋಕ ಹಾರಿವಾಳ ನಿರೂಪಿಸಿದರು.
Subscribe to Updates
Get the latest creative news from FooBar about art, design and business.
ಟ್ರ್ಯಾಕ್ಟರ್ ಜಗ್ಗುವ ಸ್ಪರ್ಧೆ ವೀಕ್ಷಿಸಲು ಕಿಕ್ಕಿರಿದ ಜನಸ್ತೋಮ
Related Posts
Add A Comment

