ಮುದ್ದೇಬಿಹಾಳ: ಶ್ರೀ ಸಿದ್ದೇಶ್ವರ ಶ್ರೀಗಳ ಹಸ್ತದಿಂದ ವಿಜಯಪುರದಲ್ಲಿ ಪ್ರಾರಂಭವಾದ ಬಿಎಲ್ಡಿ ಸೌಹಾರ್ದ ಸಹಕಾರಿ ಸಂಘ ಸಧ್ಯ ಹಲವು ಶಾಖೆಗಳನ್ನು ಪ್ರಾರಂಭಿಸಿ ಎರಡೇ ವರ್ಷಗಳಲ್ಲಿ ದಾಖಲೆಯ ೪೦೦ಕೋಟಿ ರೂ ಗಳಷ್ಟು ವ್ಯವಹಾರ ನಡೆಸಿ ಸಾಧನೆಯತ್ತ ಮುನ್ನುಗ್ಗುತ್ತಿರುವದು ಹೆಮ್ಮೆಯ ವಿಷಯ ಎಂದು ಎಂಎಲ್ಸಿ ಸುನೀಲಗೌಡ ಪಾಟೀಲ ಹೇಳಿದರು.
ಪಟ್ಟಣದ ಬಸವೇಶ್ವರ ವೃತ್ತದ ಬಳಿ ನೂತನವಾಗಿ ಪ್ರಾರಂಭವಾದ ಬಿಎಲ್ಡಿ ಸೌಹಾರ್ದ ಸಹಕಾರಿ ಸಂಘವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸಾರ್ವಜನಿಕರಿಗೆ ಸೇವೆ ನೀಡುವ ಉದ್ದೆಶದಿಂದ ಪ್ರಾರಂಭಿಸಲಾಗಿರುವ ಈ ಸೌಹಾರ್ದ ಬರುವ ದಿನಗಳಲ್ಲಿ ಬೆಂಗಳೂರಿನಲ್ಲಿರುವ ಉತ್ತರ ಕರ್ನಾಟಕದ ಜನತೆಗೆ ಅನುಕೂಲವಾಗಲೆಂದು ಅಲ್ಲೊಂದು ಸೇರಿದಂತೆ ಹಲವು ಕಡೆ ಹೆಚ್ಚಿನ ಶಾಖೆಗಳನ್ನು ತೆರೆಯುವ ಉದ್ದೇಶ ಹೊಂದಿದೆ. ನುರಿತ ಸಿಬ್ಬಂದಿ ಎಲ್ಲ ಜವಾಬ್ದಾರಿಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತಿದ್ದು ಬರುವ ದಿನಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಬೆಳೆಯಲಿರುವ ವಿಶ್ವಾಸವನ್ನು ವ್ಯಕ್ತಪಡಿಸಿದರು.
ದಿವ್ಯ ಸಾನಿಧ್ಯ ವಹಿಸಿದ್ದ ಕುಂಟೋಜಿ ಸಂಸ್ಥಾನ ಹಿರೇಮಠದ ಡಾ.ಚನ್ನವೀರ ಶಿವಾಚಾರ್ಯರು ಮಾತನಾಡಿ ಬಿಎಲ್ಡಿ ಸಂಸ್ಥೆ ಅಂದರೆನೇ ಅದೊಂದು ದೊಡ್ಡ ಹೆಸರು. ಈ ಸಂಸ್ಥೆಗೆ ತನ್ನದೇ ಆದ ವ್ಯಕ್ತಿತ್ವ ಇದೆ. ಆರೋಗ್ಯ, ಶಿಕ್ಷಣ ಕ್ಷೇತ್ರದಲ್ಲಿ ತನ್ನದೇ ಆದ ವಿಶೇಶ ಛಾಪನ್ನು ಮೂಡಿಸಿ ಸಧ್ಯ ಸೌಹಾರ್ಧ ಕ್ಷೇತ್ರದಲ್ಲಿ ಭವ್ಯ ಪಾದವನ್ನು ಇರಿಸಿದ್ದು ರೈತರಿಗೆ ಕೂಲಿ ಕಾರ್ಮಿಕರಿಗೆ ಬಡವರಿಗೆ ಆಸರೆಯಾಗಲಿ ಎನ್ನುವದು ನಮ್ಮ ಶುಭ ಹಾರೈಕೆ ಎಂದರು.
ಬಿಎಲ್ಡಿ ಸಂಸ್ಥೆಯ ಡೈರೆಕ್ಟರ್ ವಿಜಯಕುಮಾರ ಕನಮಡಿ ಮಾತನಾಡಿದರು. ಈ ವೇಳೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗುರಣ್ಣ ತಾರನಾಳ, ಗುತ್ತಿಗೆದಾರರಾದ ರಾಯನಗೌಡ ತಾತರೆಡ್ಡಿ ಮತ್ತು ಸಿ.ಬಿ.ಅಸ್ಕಿ, ಕಸಾಪ ಅಧ್ಯಕ್ಷ ಕಾಮರಾಜ ಬಿರಾದಾರ, ಪ್ರಮುಖರಾದ ಸಂಗಣ್ಣ ಬಿರಾದಾರ(ಜಿಟಿಸಿ), ರಾಜುಗೌಡ ಕರಡ್ಡಿ, ರಾಜೇಂದ್ರಗೌಡ ರಾಯಗೊಂಡ, ಹರೀಶ ಬೆವೂರ, ದಾನಯ್ಯ ಹಿರೇಮಠ, ವಿಜೇಂದ್ರ ಇರಕಲ್, ಸಿಕಂದರ ಜಾನ್ವೇಕರ್, ಗೋಪಿ ಮಡಿವಾಳರ, ಪುರಸಭೆ ಸದಸ್ಯರುಗಳಾದ ಮಹೆಬೂಬ ಗೊಳಸಂಗಿ, ರಪೀಕ ದ್ರಾಕ್ಷಿ, ಶಿವು ಶಿವಪೂರ, ಯಲ್ಲಪ್ಪ ನಾಯಕಮಕ್ಕಳ, ಚನ್ನಪ್ಪಣ್ಣ ಕಂಠಿ, ವಿರೇಶ ಹಡಲಗೇರಿ, ರಿಯಾಜ ಢವಳಗಿ, ಸೇರಿದಂತೆ ಮತ್ತೀತರರು ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

