ಸಿಂದಗಿ: ಬಡವರಿಗೆ ಹಂಚಿಕೆಯಾಗಬೇಕಾದ ಮನೆಗಳ ವಿಧಾನವನ್ನು ಬಿಟ್ಟು ಪುರಸಭೆಯ ಆಡಳಿತ ವ್ಯವಸ್ಥೆ ಯಾವ ರೀತಿ ಮಾಡಿದೆ ಎಂದರೆ ಎಸ್.ಸಿ/ಎಸ್.ಟಿ ಸಮುದಾಯಕ್ಕೆ ಬಂದಿರುವ ಮನೆಗಳನ್ನು ಸಾಮಾನ್ಯ ವರ್ಗದವರ ಕುಟುಂಬಗಳಿಗೆ ಮನೆ ಹಾಕಿ ಹಣ ಲೂಟಿ ಹೊಡೆಯೊದಕ್ಕೆ ಕೈಹಾಕಿದ್ದು ಇದು ನಾಚೀಗೇಡಿನ ಸಂಗತಿ ಎಂದು ಬಿಜೆಪ ಮಂಡಲ ತಾಲೂಕಾಧ್ಯಕ್ಷ ಸಂತೋಷ ಪಾಟೀಲ ಡಂಬಳ ಹೇಳಿದರು.
ಪಟ್ಟಣದ ತಹಶೀಲ್ದಾರ್ ಕಛೇರಿಯ ಮುಂಭಾಗದಲ್ಲಿ ನಗರದ ಬಿಜೆಪಿಯ ಎಸ್.ಡಿ.ಮೋರ್ಚಾ ವತಿಯಿಂದ ನಡೆದ ಅಕ್ರಮವಾಗಿ ಬೇರೆ ವರ್ಗದವರಿಗೆ ಮನೆಗಳನ್ನು ಹಂಚಿಕೆ ಮಾಡಿದ ಅಧಿಕಾರಿಗಳ ಮೇಲೆ ಅಟ್ರಾಸಿಟಿ ಪ್ರಕರಣ ದಾಖಲಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಮನವಿ ಸಲ್ಲಿಸಿ ಮಾತನಾಡಿದ ಅವರು, ದಲಿತ ಸಮುದಾಯಕ್ಕೆ ಮಾಡಿದ ಬಹು ದೊಡ್ಡ ಅನ್ಯಾಯ. ಇದರಿಂದ ಬಡವರಿಗೆ ಅನ್ಯಾಯವಾಗಿದೆ. ದಿನದಲಿತರಿಗೆ ಸಿಗಬೇಕಾದ ಯೋಜನೆಗಳು ಸಿರಿವಂತರಿಗೆ ಸಿಗುವಂತಾಗುತ್ತಿದೆ. ಕೊಟ್ಟೆಂತರ ಹಣ ಲೂಟಿ ಹೊಡೆಯುವ ಹುನ್ನಾರ ನಡೆದಿದೆ. ಎಸ್.ಸಿ/ಎಸ್.ಟಿ ಮನೆಗಳನ್ನು ಯಾರೂ ಸಾಮಾನ್ಯ ವರ್ಗಕ್ಕೆ ಹಂಚಿಕೆ ಮಾಡಿದ್ದಾರೆ ಅವರ ವಿರುದ್ಧ ಅಟ್ರಾಸಿಟಿ ಪ್ರಕರಣ ದಾಖಲಿಸಿ ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಈ ವೇಳೆ ಎಸ್.ಟಿ.ಮೋರ್ಚಾ ತಾಲೂಕಾಧ್ಯಕ್ಷ ಪ್ರಶಾಂತ ಕದ್ದರಕಿ ಮಾತನಾಡಿ, ಪಟ್ಟಣ ಗಬ್ಬೆದ್ದು ನಾರುತ್ತಿದ್ದರೂ ಅತ್ತಕಡೆ ಗಮನ ನೀಡದೆ. ಯಾವ ಅನುದಾನ ಹೇಗೆ ಕಬಳಿಸಬೇಕು. ಯಾರ ಹೆಸರ ಮೇಲೆ ತೆಗೆಯಬೇಕು ಎನ್ನುವ ವಿಚಾರದಲ್ಲಿಯೇ ಇದ್ದಾರೆ. ಇದು ಹೀಗೆ ಮುಂದುವರೆದರೆ ತಾಲೂಕಿನ ದೊಡ್ಡ ದೊಡ್ಡ ಭ್ರಷ್ಟಾಚಾರಗಳು ಬಯಲಿಗೆ ಬರುತ್ತವೆ. ಜಿಲ್ಲಾಧಿಕಾರಿಗಳು ಕೂಡಲೇ ಮಧ್ಯಸ್ಥಿಕೆ ವಹಿಸಿ ಭ್ರಷ್ಟಾಚಾರವನ್ನು ಬಯಲಿಗೆಳೆದು ತಪ್ಪಿತಸ್ಥರ ಮೇಲೆ ಸೂಕ್ತ ಕ್ರಮಕೈಗೊಳ್ಳಬೇಕು. ಕ್ರಮ ಕೈಗೊಳ್ಳದೇ ಹೋದ ಪಕ್ಷದಲ್ಲಿ ಉಗ್ರಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಈ ವೇಳೆ ಅಶೋಕ ಅಲ್ಲಾಪುರ, ಅಶೋಕ ನಾರಾಯಣಪೂರ, ಪೀರು ಕೆರೂರ, ವಿಠ್ಠಲ ನಾಯ್ಕೋಡಿ, ಸಿದ್ದು ಪೂಜಾರಿ, ಗೀರಿಶ ನಾಗೂರ, ಸಾಯಬಣ್ಣ ದೇವರಮನಿ, ಶಿವಕುಮಾರ ಬಿರಾದಾರ, ರಾಜು ಗೌಂಡಿ, ಸೇರಿದಂತೆ ಬಿಜೆಪಿ ಪಕ್ಷದ ವಿವಿಧ ಮೋರ್ಚಾಗಳ ತಾಲೂಕಾಧ್ಯಕ್ಷರು, ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

