ಕಲಬುರ್ಗಿ: ನಗರದ ಕರುಣೇಶ್ವರ ಕಾಲೋನಿ ನಿವಾಸಿ ಶರಣೆ ರೇಣುಕಾ ಶಿವಶರಣ ನಗನೂರ ಅವರ ನಿವಾಸದಲ್ಲಿ ಶ್ರಾವಣ ಮಾಸದ ಅಂಗವಾಗಿ ನಡೆಯುವ 21 ನೇ ದಿನದ ಶ್ರಾವಣ ಮಾಸ – ವಚನ – ನಿವಾಸ ಕಾರ್ಯಕ್ರಮವು ಅರ್ಥಪೂರ್ಣವಾಗಿ ಜರುಗಿತು.
ಜೇವರ್ಗಿಯ ಬಸವ ಕೇಂದ್ರ ಮಹಿಳಾ ಘಟಕವು ನೇತೃತ್ವದಲ್ಲಿ ನಡೆದ ಈ ಅಪರೂಪದ ಕಾರ್ಯಕ್ರಮಕ್ಕೆ ಶ್ರೀ ಗುರು ಬಸವಣ್ಣನವರ ಹಾಗೂ ಶ್ರೀ ಷಣ್ಮುಖಶಿವಯೋಗಿಗಳ ಭಾವಚಿತ್ರದೊಂದಿಗೆ ವಚನಗಳ ಗ್ರಂಥ ಪ್ರವೇಶ ಮಾಡುವ ಮೂಲಕ ಚಾಲನೆ ನೀಡಲಾಯಿತು.
ಬಳಿಕ ಕಾಲೊನಿಯ ಮಹಿಳಾ ಬಳಗವು ಸಾಮೂಹಿಕವಾಗಿ ವಿವಿಧ ಶರಣರ ವಚನಗಳನ್ನು ಪಠಿಸುವ ಮೂಲಕ ಶ್ರದ್ಧಾ-ಭಕ್ತಿಯಿಂದ ಕಾರ್ಯಕ್ರಮ ನಡೆಸಲಾಯಿತು
ಜೇವರ್ಗಿಯ ಬಸವ ಕೇಂದ್ರ ಮಹಿಳಾ ಘಟಕದ ಈ ಮಹತ್ಕಾರ್ಯಕ್ಕೆ ಸಹಕರಿಸಿದ ನಗನೂರ ಪರಿವಾರದವರಿಗೆ ಮಹಿಳಾ ಘಟಕವು ಧನ್ಯವಾದಗಳೊಂದಿಗೆ ಗೌರವ ಸೂಚಿಸಿತು.
ರಾಜೇಶ್ವರಿ ವಿಜಯಕುಮಾರ್ ಪಾಟೀಲ್ ಸೇಡಂ ಅಧ್ಯಕ್ಷತೆ ವಹಿಸಿದ್ದರು.
ರೇಣುಕಾ ನಗನೂರ್, ಸಾವಿತ್ರಿ ಹಳ್ಳಿ, ಪುಷ್ಪಾವತಿ ಪಡಶೆಟ್ಟಿ, ಬನಶಂಕರಿ ಹುಂಡೆಕರ್, ಮಂಜುಳಾ ಸುಬೇದಾರ್, ರಾಜೇಶ್ವರಿ ಜೇವರ್ಗಿ ನಾಗಮ್ಮ ಜೇವರ್ಗಿ ಸೇರಿದಂತೆ ಅನೇಕರಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

