ವಿಜಯಪುರ: ಜಿಲ್ಲೆಯ ಆಲಮೇಲ ತಾಲ್ಲೂಕಿನ ಕಡಣಿಯ ಬೆರಗು ಪ್ರಕಾಶನ ಸಂಸ್ಥೆಯು ಪ್ರಸಕ್ತ ವರ್ಷದಿಂದ ಉತ್ತಮ ಪ್ರಕಾಶನ ಸಂಸ್ಥೆಯನ್ನು ಗುರುತಿಸಿ ಪ್ರಶಸ್ತಿ ನೀಡಲು ನಿರ್ಧರಿಸಿದೆ ಎಂದು ಸಂಚಾಲಕಿ ವಿಜಯಲಕ್ಷ್ಮಿ ಕತ್ತಿ ತಿಳಿಸಿದ್ದಾರೆ.
ಕರ್ನಾಟಕ ಸರಕಾರದ ಸಚಿವರಾಗಿ ಕಾರ್ಯನಿರ್ವಹಿಸಿದ ದಿ.ಎಂ.ಸಿ.ಮನಗೂಳಿ ಸ್ಮರಣಾರ್ಥ ದತ್ತಿ ಪ್ರಶಸ್ತಿಯನ್ನು ಸಿಂದಗಿ ಶಾಸಕರಾದ ಶ್ರೀ ಅಶೋಕ ಮನಗೂಳಿ ಅವರು ಬೆರಗು ಪ್ರಕಾಶನದಲ್ಲಿ ಸ್ಥಾಪಿಸಿದ್ದು ಕರ್ನಾಟಕದಲ್ಲಿನ ನಿರಂತರವಾಗಿ ಕಾರ್ಯನಿರ್ವಹಿಸುತ್ತಿರುವ ಪ್ರಕಾಶನ ಸಂಸ್ಥೆಗೆ ನೀಡಲು ತೀರ್ಮಾನಿಸಲಾಗಿದೆ, ಪ್ರಶಸ್ತಿಯು ೨೫ ಸಾವಿರ ರೂ.ಗಳ ನಗದು ಹಾಗೂ ಬೆಳ್ಳಿ ಪದಕ, ಪ್ರಶಸ್ತಿ ಪತ್ರ ಒಳಗೊಂಡಿದ್ದು, ಆಸಕ್ತ ಪ್ರಕಾಶನ ಸಂಸ್ಥೆಗಳು, ಲೇಖಕರು ಪ್ರಸ್ತಾವನೆ ಸಲ್ಲಿಸಬಹುದಾಗಿದೆ. ಸಾಹಿತ್ಯಾಸಕ್ತರು ಕೂಡಾ ಹೆಸರು ಸೂಚಿಸಬಹುದಾಗಿದೆ.
ಹಾಗೂ ಮುಖಪುಟ ಕಲಾವಿದರೊಬ್ಬರಿಗೆ ೫ ಸಾವಿರ ರೂ.ನಗದು, ಪ್ರಶಸ್ತಿ ಫಲಕ ನೀಡಲಾಗುತ್ತಿದ್ದು, ಕಲಾವಿದರು ತಮ್ಮ ವಿವರಗಳನ್ನು ಸೆ. ೧೫ ರೊಳಗಾಗಿ ನೀಡುವಂತೆ ಅವರು ಕೋರಿದ್ದಾರೆ.
- ಸಂಚಾಲಕರು, ಬೆರಗು ಪ್ರಕಾಶನ(ರಿ) ಕಡಣಿ
- ಮೊ: 7795341335

