ವಿಜಯಪುರ: ನಗರದ ಬಿ. ಎಲ್. ಡಿ. ಈ ಡೀಮ್ಡ್ ವಿಶ್ವವಿದ್ಯಾನಿಲಯದ ಶ್ರೀ. ಬಿ. ಎಂ. ಪಾಟೀಲ ವೈದ್ಯಕೀಯ ಕಾಲೇಜಿನ ಮಕ್ಕಳ ವೈದ್ಯ ಡಾ. ಎಂ. ಎಂ. ಪಾಟೀಲ ಮತ್ತು ಅವರ ತಂಡ ಬರೆದ “ತೊಳೆಯದ ದ್ರಾಕ್ಷಿ ಸೇವನೆಯಿಂದ ಉಂಟಾದ ವಿಷಪ್ರಭಾವ” ಎಂಬ ಮಹತ್ವದ ಲೇಖನ ವಿಶ್ವದ ಮಟ್ಟದಲ್ಲಿ ಪ್ರಸಿದ್ಧವಾದ ಬ್ರಿಟಿಷ್ ಮೆಡಿಕಲ್ ಜರ್ನಲ್ ಗ್ಲೋಬಲ್ ಹೆಲ್ತ್ ಕೇಸ್ ರಿಪೋರ್ಟ್ ನಲ್ಲಿ ಪ್ರಕಟವಾಗಿದೆ.
ಈ ಲೇಖನವು ಗ್ರಾಮೀಣ ಪ್ರದೇಶಗಳಲ್ಲಿ ಕಂಡುಬರುವ ಒಂದು ಮುಖ್ಯ ಸಮಸ್ಯೆಯನ್ನು ಅತ್ಯಂತ ಪರಿಣಾಮಕಾರಿಯಾಗಿ ಬೆಳಕಿಗೆ ತಂದಿದೆ. ದ್ರಾಕ್ಷಿಯನ್ನು ತಿನ್ನುವ ಮುನ್ನ ಅದನ್ನು ಸ್ವಚ್ಛಗೊಳಿಸದೆ ಇರುವುದರಿಂದ ಉಂಟಾಗುವ ಸಮಸ್ಯೆಗಳು ವಿಶೇಷವಾಗಿ ರಾಸಾಯನಿಕ ಕೀಟನಾಶಕಗಳಿಂದ ಎದುರಾಗುವ ಅಪಾಯಗಳ ಕುರಿತು ಈ ಲೇಖನ ಸಂಪೂರ್ಣ ಮಾಹಿತಿ ಹೊಂದಿದೆ. ಗ್ರಾಮೀಣ ಭಾಗದ ಮಕ್ಕಳು ಎದುರಿಸುವ ಹಾನಿಕಾರ ಸಮಸ್ಯೆಗಳಿಗೆ ಒಳಗಾಗುವುದನ್ನು ಹೇಗೆ ತಪ್ಪಿಸಬಹುದು ಎಂಬುದರ ಕುರಿತು ಕೂಡ ಈ ಲೇಖನದಲ್ಲಿ ಮಾಹಿತಿ ನೀಡಲಾಗಿದೆ.
ಗ್ರಾಮೀಣ ಪ್ರದೇಶಗಳಲ್ಲಿ ಆರೋಗ್ಯ ಶಿಕ್ಷಣದ ಕೊರತೆ ಎಷ್ಟು ಗಂಭೀರವಾಗಿದೆ ಎಂಬುದನ್ನು ಈ ಲೇಖನದಲ್ಲಿ ಎತ್ತಿ ತೋರಿಸಲಾಗಿದ್ದು, ಮಕ್ಕಳಲ್ಲಿ ಈ ರೀತಿಯ ರೋಗ ಲಕ್ಷಣಗಳನ್ನು ಗುರುತಿಸುವುದು ಮತ್ತು ತ್ವರಿತ ಚಿಕಿತ್ಸೆ ನೀಡುವುದು ಎಷ್ಟು ಮುಖ್ಯ ಎಂಬುದರ ಮೇಲೂ ಈ ಲೇಖನ ಬೆಳಕು ಚೆಲ್ಲಿದೆ. ಅಲ್ಲದೇ, ತೊಳೆಯದೆ ಇರುವ ದ್ರಾಕ್ಷಿ ಹಣ್ಣುಗಳ ಸೇವನೆಯ ಅಭ್ಯಾಸದಿಂದ ಮಕ್ಕಳ ಮೇಲೆ ಉಂಟಾಗುವ ಆರೋಗ್ಯ ಹಾನಿಯ ಬಗ್ಗೆ ಮಹತ್ವದ ಎಚ್ಚರಿಕೆಯನ್ನು ಮೂಡಿಸಲಾಗಿದೆ.
ಡಾ. ಎಂ. ಎಂ. ಪಾಟೀಲ ಅವರ ತಂಡದಲ್ಲಿ ಸಂಶೋಧನೆ ಕೇಂದ್ರದ ಉಪನಿರ್ದೇಶಕಿ ಡಾ. ಚಂದ್ರಿಕಾ ದೊಡ್ಡಿಹಾಳ, ಡಾ. ಅನ್ವಿತಾ ಸಿನ್ಹಾ ಹಾಗೂ ಡಾ. ಪ್ರಸನ್ನ ಕುಮಾರ ಬಿ.ಎಂ ಸಹ-ಲೇಖಕರಾಗಿದ್ದಾರೆ.
ಅಂತಾರಾಷ್ಟ್ರೀಯ ಖ್ಯಾತಿಯ ಜರ್ನಲ್ ನಲ್ಲಿ ಲೇಖನ ಪ್ರಕಟವಾಗಿರುವುದ ಈ ಸಾಧನೆಗೆ ವಿವಿ ಕುಲಾಧಿಪತಿ ಎಂ. ಬಿ. ಪಾಟೀಲ, ಸಮಕುಲಾಧಿಪತಿ ಡಾ. ವೈ. ಎಂ. ಜಯರಾಜ, ಕುಲಪತಿ ಪ್ರೊ. ಆರ್. ಎಸ್. ಮುಧೋಳ, ಸಮಕುಲಪತಿ ಪ್ರೊ. ಅರುಣ ಇನಾಮದಾರ, ರಜಿಸ್ಟ್ರಾರ್ ಡಾ. ರಾಘವೇಂದ್ರ ವಿ. ಕುಲಕರ್ಣಿ ಹಾಗೂ ಪ್ರಾಚಾರ್ಯ ಪ್ರೊ. ಅರವಿಂದ ಪಾಟೀಲ, ಅಲೈಡ್ ಹೆಲ್ತ್ ಸಾಯಿನ್ಸ್ ಡೀನ್ ಡಾ. ಎಸ್. ವಿ. ಪಾಟೀಲ ಅಭಿನಂದನೆ ಸಲ್ಲಿಸಿದ್ದಾರೆ.
Subscribe to Updates
Get the latest creative news from FooBar about art, design and business.
ವಿಶ್ವಖ್ಯಾತಿಯ ಜರ್ನಲ್ ನಲ್ಲಿ ಡಾ. ಎಂ.ಎಂ.ಪಾಟೀಲ ತಂಡದ ಲೇಖನ ಪ್ರಕಟ
Related Posts
Add A Comment

