ವಿಜಯಪುರ: ಜಿಲ್ಲಾ ಪಂಚಾಯತಿಯಲ್ಲಿ ಉಪ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿರುವ ವಿಜಯಕುಮಾರ ಅಜೂರೆ ಅವರ ಕಾರ್ಯ ಇತರೆ ಅಧಿಕಾರಿಗಳಿಗೆ ಮಾದರಿಯಾಗಿದೆ.
ಸೋಮವಾರ ಕಚೇರಿ ಕರ್ತವ್ಯವನ್ನು ಮುಗಿಸಿಕೊಂಡು ಮಧ್ಯಾಹ್ನದ ಸಮಯದಲ್ಲಿ ಇನ್ನೇನು ಊಟಕ್ಕೆ ಹೋಗಬೇಕು ಎಂದು ತಮ್ಮ ಕಚೇರಿಯ ಹೊರಗಡೆ ಬಂದಾಗ, ಕಚೇರಿ ಆವರಣದಲ್ಲಿ ನಿಂತಿರುವ ವೃದ್ಧನೋರ್ವರನ್ನು ಕಂಡು “ಜಗದ ಚಿಂತಿ ನಮಗ್ಯಾತಕೆ” ಎಂದುಕೊಳ್ಳದೇ ಪರರ ನೋವುಗಳಿಗೆ ಸ್ಪಂದಿಸುವ ಮನೋಭಾವ ಹೊಂದಿರುವ ಅಜೂರೆ ಅವರು ತಕ್ಷಣ ಆ ವೃದ್ಧನ ಬಳಿ ತೆರಳಿ, ಅವರನ್ನು ಕಚೇರಿ ಒಳಗಡೆ ಕರೆದುಕೊಂಡು ಹೋಗಿ ಶಾಂತಚಿತ್ತದಿಂದ ಸಮಸ್ಯೆ ಆಲಿಸಿ, ಅದನ್ನು ಬಗೆಹರಿಸುವ ಭರವಸೆ ನೀಡಿ ವೃದ್ಧನಲ್ಲಿ ಆತ್ಮವಿಶ್ವಾಸ ತುಂಬುವ ಮೂಲಕ ಮಾನವೀಯತೆ ಮೆರೆದ ದೃಶ್ಯ ’ಉದಯರಶ್ಮಿ’ ಓದುಗರಿಗೆ ಕಂಡುಬಂದಿದೆ
Subscribe to Updates
Get the latest creative news from FooBar about art, design and business.
Related Posts
Add A Comment

