ಇಂಡಿ: ನಗರದ ಅಭಿವೃದ್ಧಿಯ ಹಿತದೃಷ್ಠಿಯಿಂದ ಪುರಸಭೆ ಸದಸ್ಯರು ಕಾಂಗ್ರೇಸ್ ಪಕ್ಷಕ್ಕೆ ಬೆಂಬಲಿಸಿದ್ದಾರೆ. ನಮ್ಮ ಪಕ್ಷದ ಅಭ್ಯರ್ಥಿಗಳಿಗೆ ಬೆಂಬಲ ಸೂಚಿಸಿದ ಸರ್ವ ಸದಸ್ಯರಿಗೂ ಅಭಿನಂದಿಸುವುದಾಗಿ ಶಾಸಕ ಯಶವಂತ್ರಾಯಗೌಡ ಪಾಟೀಲ ತಿಳಿಸಿದರು.
ಸೋಮವಾರ ನಡೆದ ಪುರಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಗೆಲುವಿನ ಹಿನ್ನೆಲೆ, ಪಟ್ಟಣದ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಸಾಮಾಜಿಕ ನ್ಯಾಯ ಹಾಗೂ ಸಮ-ಸಮಾಜದ ನಿರ್ಮಾಣದ ಹಿನ್ನೆಲೆಯಲ್ಲಿ ಪುರಸಭೆ ಅಧ್ಯಕ್ಷ ಉಪಾಧ್ಯಕ್ಷ ಆಯ್ಕೆ ಮಾಡಲಾಗಿದೆ ಎಂದು ತಿಳಿಸಿದರು.
ಒಟ್ಟು ೨೩ ಪುರಸಭೆ ಸದಸ್ಯ ಹಾಗೂ ಶಾಸಕ, ಸಂಸದರು ಸೇರಿ ೨೫ ಮತಗಳಿದ್ದು, ಅದರಲ್ಲಿ ೧೫ ಮತಗಳು ಕಾಂಗ್ರೆಸ ಪಕ್ಷದ ಅಧ್ಯಕ್ಷ ಅಭ್ಯರ್ಥಿ ಲಿಂಬಾಜಿ ರಾಠೋಡ ಉಪಾಧ್ಯಕ್ಷ ಅಭ್ಯರ್ಥಿ ಜಹಾಂಗೀರ್ ಸೌದಾಗಾರ ಆಯ್ಕೆಯಾಗಿದ್ದಾರೆ. ಈ ಗೆಲುವಿಗೆ ಪಕ್ಷದ ಸಂಘಟನೆ ಕಾರಣ ಎಂದರು.
ಇನ್ನು ಮತಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಸಮುದಾಯಗಳಿಗೆ ಸಾಮಾಜಿಕ ನ್ಯಾಯದ ಅಡಿಯಲ್ಲಿ ನಾಮನಿರ್ದೇಶನ ಸೇರಿದಂತೆ, ಚುನಾವಣೆಯಲ್ಲಿ ಹಾಗೂ ವಿವಿಧ ಕ್ಷೇತ್ರದಲ್ಲಿ ಸಾಮಾಜಿಕ ನ್ಯಾಯ ಕಲ್ಪಿಸಲಾಗಿದೆ. ಇನ್ನು ಮುಂದೆ ವಿಶೇಷವಾಗಿ ಮಾಡಲ್ ಸಿಟಿ, ಲೆಮನ್ ಸಿಟಿ ಮಾಡುವ ಗುರಿ ಉದ್ದೇಶ ಹೊಂದಲಾಗಿದೆ ಎಂದು ಹೇಳಿದರು.
ಈಗಾಗಲೇ ನಗರದಲ್ಲಿ ೨೪*೭ ಕುಡಿಯುವ ನೀರಿನ ಸೂಕ್ತ ವ್ಯವಸ್ಥೆ ಕಲ್ಪಿಸಲಾಗಿದ್ದು, ಇನ್ನೂ ನಗರದ ಒಳರಸ್ತೆಗಳಿಗೆ ಹಾಗೂ ಮತಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಎಲ್ಲಾ ರಸ್ತೆಗಳಿಗೆ ಆಧ್ಯತೆ ನೀಡಿ ಅತೀ ಶೀಘ್ರದಲ್ಲೇ ದುರಸ್ಥಿ ಕಾರ್ಯ ಮಾಡಲಾಗುವುದು. ಚುನಾವಣೆ ಬರಬಹುದು, ಹೋಗಬಹುದು. ಆದರೆ ವಿಶ್ವಾಸ, ಪ್ರೀತಿ, ಸೌಹಾರ್ದತೆಯ ಸಾಮರಸ್ಯದ ಬದುಕು ಅವಶ್ಯಕ. ಗಡಿಭಾಗದಲ್ಲಿ ಸಂಸ್ಕಾರ, ಸಂಸ್ಕೃತಿ ಹಾಗೂ ಕನ್ನಡ ಭಾಷೆಯನ್ನು ಬೆಳೆಸಬೇಕು. ನಗರದಲ್ಲಿ ಗತವೈಭವದ ದಿನಗಳು ನಡೆಯಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಪುರಸಭೆಗೆ ನೂತನವಾಗಿ ಆಯ್ಕೆಯಾದ ಅಧ್ಯಕ್ಷ ಲಿಂಬಾಜಿ ರಾಠೋಡ, ಉಪಾಧ್ಯಕ್ಷ ಮಹಾ ಸೌದಾಗಾರ, ಬ್ಲಾಕ್ ಅಧ್ಯಕ್ಷ ಜಾವೀದ್ ಮೋಮಿನ್, ಭೀಮಣ್ಣ ಕವಲಗಿ, ಇಲಿಯಾಸ್ ಬೊರಾಮಣಿ ಹಾಗೂ ಪುರಸಭೆ ಸದಸ್ಯ ಭೀಮನಗೌಡ ಪಾಟೀಲ, ಅಯೂಬ್ ಬಾಗವಾನ, ಸಂಗೀತಾ ಸುದೀರ ಕರಕಟ್ಟಿ, ಭಾಗಿರಥಿ ಕುಂಬಾರ, ಉಮೇಶ್ ದೇಗಿನಾಳ, ಸತೀಶ ಕುಂಬಾರ, ಭೀಮಾಶಂಕರ ಮೂರಮನ ಸೇರಿದಂತೆ ಇನ್ನೂ ಅನೇಕ ಮುಖಂಡರು ಉಪಸ್ಥಿತರಿದ್ದರು.
Subscribe to Updates
Get the latest creative news from FooBar about art, design and business.
ಕಾಂಗ್ರೆಸ್ ಗೆಲುವಿಗೆ ಪಕ್ಷದ ಸಂಘಟನೆ ಕಾರಣ :ಶಾಸಕ ಯಶವಂತ್ರಾಯಗೌಡ
Related Posts
Add A Comment

