ಸಿಂದಗಿ: ಗ್ರಾಹಕರ ಕಾಯ್ದೆ ೧೯೮೬ರಿಂದ ಅನುಷ್ಠಾನಗೊಂಡಿದ್ದು, ಗ್ರಾಹಕರು ಈ ಕಾಯ್ದೆಯ ಸದುಪಯೋಗ ಪಡೆದುಕೊಳ್ಳಬೇಕು ಎಂದು ಬೆಂಗಳೂರಿನ ಸಿಎಒಸಿವ್ಹಿಒ ಸಂಸ್ಥಾಪಕ ಮುಖ್ಯಸ್ಥ ಸೋಮಶೇಖರ ವಿ.ಕೆ ಹೇಳಿದರು.
ಪಟ್ಟಣದ ಜಿ.ಪಿ.ಪೋರವಾಲ್ ಕಲಾ, ವಾಣಿಜ್ಯ ಹಾಗೂ ವ್ಹಿ.ವ್ಹಿ.ಸಾಲಿಮಠ ವಿಜ್ಞಾನ ಮಹಾವಿದ್ಯಾಲಯದಲ್ಲಿ ವಿಜಯಪುರ ಜಿಲ್ಲಾ ಗ್ರಾಹಕ ಹಿತರಕ್ಷಣ ವೇದಿಕೆ ಚಾರಿಟೆಬಲ್ ಟ್ರಸ್ಟ್ ವತಿಯಿಂದ ಹಮ್ಮಿಕೊಂಡ ಗ್ರಾಹಕರ ಹಿತರಕ್ಷಣ ಜಾಗೃತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸಮಾಜದಲ್ಲಿ ಪ್ರತಿಯೊಬ್ಬರೂ ಗ್ರಾಹಕರಾಗುತ್ತಾರೆ. ಪ್ರತಿನಿತ್ಯ ಏನಾದರೂ ವಸ್ತುಗಳನ್ನು ಖರೀದಿಸುತ್ತಲೇ ಇರುತ್ತಾರೆ. ಖರೀದಿಸಲಾದ ವಸ್ತು ಹಾಳಾದರೆ ನಿರಾಸೆ ಪಡದೆ ಗ್ರಾಹಕರ ವೇದಿಕೆಗೆ ದೂರು ನೀಡಬೇಕು. ವಸ್ತುಗಳನ್ನು ಖರೀದಿಸುವ ಮೊದಲು ಎಚ್ಚರಿಕೆಯಿಂದ ಇರಬೇಕು. ಯಾವುದೇ ವಸ್ತು ಖರೀದಿ ಮಾಡುವಾಗ ಐಎಸ್ಐ ಚಿಹ್ನೆ ಹೊಂದಿರುವುದು ಕಡ್ಡಾಯವಾಗಿ ಗಮನಿಸಬೇಕು ಎಂದು ಸಲಹೆ ನೀಡಿದರು.
ಈ ವೇಳೆ ಪಿಎಸ್ಐ ಆರೀಫ ಮುಷಾಪುರಿ ಮಾತನಾಡಿ, ಗ್ರಾಹಕರು ಯಾವುದೇ ವಸ್ತುಗಳನ್ನು ಖರೀದಿಸುವಾಗ ರಶೀದಿ ಬಹಳ ಮುಖ್ಯವಾಗಿರುತ್ತದೆ. ಗ್ರಾಹಕರ ಹಕ್ಕುಗಳನ್ನು ಉಲ್ಲಂಘಿಸಿದವರಿಗೆ ಕಠಿಣ ಶಿಕ್ಷೆಯನ್ನು ನೀಡಲಾಗುತ್ತದೆ. ಈ ಹಕ್ಕುಗಳನ್ನು ಕಾಯಲು ಗ್ರಾಹಕರ ಹಕ್ಕುಗಳ ನ್ಯಾಯಾಲಯವಿದೆ. ಪ್ರಸ್ತುತ ಬಹುತೇಕ ವ್ಯಾಪಾರಿಗಳು ಹೆಚ್ಚು ಲಾಭ ಪಡೆಯುವ ಉದ್ದೇಶದಿಂದ ಗ್ರಾಹಕರ ಹಕ್ಕುಗಳನ್ನು ಉಲ್ಲಂಘಿಸಿ ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡುತ್ತಾರೆ. ಇದರಿಂದ ಬಹುತೇಕ ಗ್ರಾಹಕರು ಮೋಸ ಹೋಗುತ್ತಾರೆ. ಹೆಚ್ಚಿನವರು ಇದರ ವಿರುದ್ಧ ಧ್ವನಿಯೇ ಎತ್ತುವುದಿಲ್ಲ. ಅನೇಕ ಗ್ರಾಹಕರಿಗೆ ಈ ಕುರಿತು ಕಾನೂನಿದೆ ಹಕ್ಕಿದೆ ಎಂಬುದೇ ತಿಳಿದಿಲ್ಲ. ಆದ್ದರಿಂದಲೇ ಗ್ರಾಹಕರ ಹಕ್ಕು ಮೂಡಿಸಲು ಒಂದು ದಿನವಿದೆ ಎಂದರು.
ಈ ವೇಳೆ ಪ್ರಾಚಾರ್ಯ ಡಿ.ಎಂ.ಪಾಟೀಲ, ಸಂಗಪ್ಪ ವಿ.ಹೆಚ್, ವೇದಿಕೆಯ ಅಧ್ಯಕ್ಷ ಬಸವರಾಜ ಎಮ್, ಮಲ್ಲಿಕಾರ್ಜುನ ಎಮ್, ಡಾ.ರವಿ ಗೋಲಾ, ಪ್ರಕಾಶತೇಜು ರಾಠೋಡ, ಡಾ.ಮಹಾದೇವ ಸಂಕಪಾಲ, ಸಂಪತ್ ಎಮ್, ಚಂದ್ರಕಾಂತ ಡಬ್ಲೂ ಸೇರಿದಂತೆ ಮಹಾವಿದ್ಯಾಲಯದ ಬೋಧಕ-ಬೋದಕೇತರ ಸಿಬ್ಬಂದಿಗಳು ಹಾಗೂ ವೇದಿಕೆಯ ಪದಾಧಿಕಾರಿಗಳು, ವಿದ್ಯಾರ್ಥಿಗಳು ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

