ಸಿಂದಗಿ: ಮಕ್ಕಳಲ್ಲಿ ಧಾರ್ಮಿಕ ಪ್ರಜ್ಞೆಯನ್ನು ಬೆಳೆಸುವ ಪ್ರಯತ್ನವಾಗಿ ಮತ್ತು ಅವರಲ್ಲಿರುವ ಪ್ರತಿಭೆಯನ್ನು ಗುರುತಿಸಿ ಬೆಳೆಸುವ ಉದ್ದೇಶದಿಂದ ಇಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ ಎಂದು ಶಿಕ್ಷಕ ಪ್ರಸನ್ನ ಕುಲಕರ್ಣಿ ಹೇಳಿದರು.
ಪಟ್ಟಣದ ಸೋಂಪುರ ರಸ್ತೆಯ್ಲಲಿರುವ ಶ್ರೀಗುರು ಕೃಪಾ ಆಂಗ್ಲ ಮಾಧ್ಯಮ ಶಾಲೆಯ ವತಿಯಿಂದ ಹಮ್ಮಿಕೊಂಡ ಶ್ರೀಕೃಷ್ಣ ಜನ್ಮಾಷ್ಟಮಿಯ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.
ಈ ವೇಳೆ ಶಾಲೆಯ ಮುಖ್ಯಗುರುಮಾತೆ ಹೇಮಾ ಪೋದ್ದಾರ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಇದೇ ಸಂದರ್ಭದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿಯ ನಿಮಿತ್ಯವಾಗಿ ಹಮ್ಮಿಕೊಂಡ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ವಿತರಣೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ಆಡಳಿತಾಧಿಕಾರಿ ಹಣಮಂತ ಪೋದ್ದಾರ, ಶಿಕ್ಷಕರಾದ ಶೃತಿ ಕುಲಕರ್ಣಿ, ಹರೀಶ ಪೊದ್ದಾರ, ವಿಶಾಲ ಹಿರೇಮಠ, ಸವಿತಾ ಬನಗುಂಡಿ, ಭಾರತಿ ಬಿರಾದಾರ, ಪೂಜಾ ದಸ್ಮಾ, ಆಲಿಯಾ ಸೀತನೂರ, ವರ್ಷಾ ಜೋಷಿ, ಮಯೂರಿ ಜಮಾದಾರ, ರೇಣುಕಾ ಬಿರಾದಾರ, ಸಹನಾ ಪರೂತಿ, ನೇತ್ರಾ ವಸ್ತçದ, ಆರ್.ಬಿ.ಬಿರಾದಾರ, ಬಸು ಮಾಳೆಗಾರ ಶಶೀಧರ ಸೇರಿದಂತೆ ಶಾಲೆಯ ಬೋಧಕ-ಬೋಧಕೇತರ ಸಿಬ್ಬಂದಿಗಳು ಇದ್ದರು.
ವಿದ್ಯಾನಿಕೇತನ ಶಾಲೆ:
ಪಟ್ಟಣದ ಹೂಗಾರ ಲೇಔಟ್ನಲ್ಲಿರುವ ವಿದ್ಯಾನಿಕೇತನ ಶಾಲೆಯಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿಯ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ಈ ವೇಳೆ ಶಾಲೆಯ ಮಕ್ಕಳ ರಾಧಾಕೃಷ್ಣ ವೇಷದಲ್ಲಿ ಗಮನ ಸೆಳೆದರು.
ಕಾರ್ಯಕ್ರಮದಲ್ಲಿ ಕುಸುಮಾ ಯಾಳಗಿ, ಸಕ್ಕುಬಾಯಿ ಡಾಂಗಿ, ವಿಕಾಸ ಚೌರ, ಅಕ್ಷಯ ದೀಕ್ಷಾ, ಸುಮಾ ಬಿರಾದಾರ, ರೂಪಾ, ಪ್ರಗತಿ ಸೇರಿದಂತೆ ಶಾಲೆಯ ಬೋಧಕ-ಬೋಧಕೇತರ ಸಿಬ್ಬಂದಿಗಳು ಇದ್ದರು.
ಲಿಟಲ್ ವಿಂಗ್ಸ್ ಸ್ಕೂಲ್:
ನಗರದ ಹೊರ ವಲಯದಲ್ಲಿರುವ ಮಾಂಗಲ್ಯ ಭವನದಲ್ಲಿ ಲಿಟಲ್ ವಿಂಗ್ಸ್ ಸ್ಕೂಲ್ ವತಿಯಿಂದ ಹಮ್ಮಿಕೊಂಡ ಕೃಷ್ಣ ಜನ್ಮಾಷ್ಟಮಿಯ ಕಾರ್ಯಕ್ರಮವನ್ನು ಬಿಎನ್ಬಿ ಫೌಂಡೇಶನ್ ಅಧ್ಯಕ್ಷ ಬಿಜೆಪಿ ಮುಖಂಡ ಶ್ರೀಶೈಲಗೌಡ ಬಿರಾದಾರ ಉದ್ಘಾಟಿಸಿದರು.
ಸಾನಿಧ್ಯವನ್ನು ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿ ವಿಶ್ವವಿದ್ಯಾಲಯದ ಸಂಚಾಲಕಿ ಪವಿತ್ರಾ ಅಕ್ಕನವರು ವಹಿಸಿದ್ದರು. ಈ ವೇಳೆ ಪತ್ರಕರ್ತ ಟಿ.ಕೆ.ಮಲಗೊಂಡ, ಸತೀಶ ಹಿರೇಮಠ, ಶಿಕ್ಷಕ ಬಸವರಾಜ್ ಹೂಗಾರ, ಸಂಸ್ಥೆಯ ಅಧ್ಯಕ್ಷ ಅಭಿಷೇಕ್ ಚೌಧರಿ, ಕಾವೇರಿ ಮಲ್ಲೇವಾಡಿ, ಬಸವರಾಜ ಶಿಲವಂತ, ಸುನಿತಾ ತೇಲಿ, ದಾದಾಪೀರ ಅಂಗಡಿ ಮುಖ್ಯ ಗುರುಮಾತೆ ಪೂಜಾ ಗಾಯಕವಾಡ, ಭಾರತಿ ಚೌಧರಿ, ಭಾರತಿ ಜೋಗೂರ, ಪೂರ್ಣಿಮಾ ಗುಮಟೆ, ಸಂಗೀತಾ ಕರಾಬಿ, ನಾಗರೇಖಾ, ಸುರುಭಿ, ಪ್ರಿಯಾಂಕಾ, ಸುಷ್ಮಾ ಚೌಧರಿ, ಹೊಸಮನಿ, ಕಾವ್ಯ ಹಿಪ್ಪರಗಿ, ಖುಷ್ಬು ಪಾಟೀಲ ಮುನ್ನಾ ಖೇಡ, ಸಂತೋಷ ಇಂಗಳೆ, ಪ್ರಕಾಶ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ಶಿಕ್ಷಕಿ ನಗ್ಮಾ ಪಾಟೀಲ ನಿರೂಪಿಸಿದರು, ಭಾಗ್ಯ ಕೋತಂಬರಿ ಸ್ವಾಗತಿಸಿದರು, ಪ್ರೀತಿ ಸೂರ್ಯವಂಶಿ ವಂದಿಸಿದರು.
Subscribe to Updates
Get the latest creative news from FooBar about art, design and business.
Related Posts
Add A Comment

