ವಿಜಯಪುರ: ನಗರದ ಛತ್ರಪತಿ ಶಿವಾಜಿ ಮಹಾರಾಜರ ವೃತ್ತದ ಗಜಾನನ ಉತ್ಸವ ಮಹಾಮಂಡಳಕ್ಕೆ 2024-25ನೇ ಸಾಲಿನ ನೂತನ ಪದಾಧಿಕಾರಿಗಳ ನೇಮಕ ಮಾಡಲಾಯಿತು.
ಈ ಸಂದರ್ಭದಲ್ಲಿ ಶ್ರೀ ಗಜಾನನ ಉತ್ಸವ ಮಹಾಮಂಡಳ ಸಂಸ್ಥಾಪಕರು, ಮಾಜಿ ಸಚಿವರಾದ ಅಪ್ಪಾಸಾಹೇಬ ಮ.ಪಟ್ಟಣಶೆಟ್ಟಿ ಅವರಿಗೆ ನೂತನ ಆಯ್ಕೆಯಾದ ಎಲ್ಲಾ ಪದಾಧಿಕಾರಿಗಳು ಸನ್ಮಾನಿಸಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಮಾಜಿ ಸಚಿವರು, ಶ್ರೀ ಗಜಾನನ ಉತ್ಸವ ಮಹಾಮಂಡಳ ಇಡೀ ವಿಜಯಪುರ ಜಿಲ್ಲೆಯಲ್ಲಿ ಮಾದರಿ ಗಣೇಶೋತ್ಸವ ಆಚರಿಸುವ ಮೂಲಕ ಎಲ್ಲರ ಮನೆ ಮಾತಾಗಿದೆ. ಈ ಮಂಡಳಿ ಗಣೇಶ ಉತ್ಸವದ ಜೊತೆಗೆ ಹತ್ತು ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳು, ಸಾಮಾಜಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಸಾಂಸ್ಕೃತಿಕ ಉತ್ಸವಕ್ಕೂ ಸೈ ಹಾಗೂ ಸಾಮಾಜಿಕ ಚಟುವಟಿಕೆಗೂ ಸೈ , ಮತ್ತು ಈ ಮಹಾಮಂಡಳದ ವತಿಯಿಂದ ಕರೊನಾ ಮಾಹಾಮಾರಿ ಸಂದರ್ಭದಲ್ಲಿ ರೋಗಿಗಳ ಪರಿಚಾರಕರಿಗೆ ಸತತ 54 ದಿನಗಳ ಕಾಲ ಶುಚಿ ರುಚಿಯಿಂದ ಕೂಡಿದ ಆಹಾರದ ಪೊಟ್ಟಣ ವಿತರಣೆ ಮಾಡುವ ಮೂಲಕ ಮಾನವೀಯತೆ ಕಾರ್ಯವನ್ನು ಮಾಡಿದ ನಮ್ಮ ಮಹಾಮಂಡಳದ ಕಾರ್ಯಕರ್ತರು ಜೀವನದ ಹಂಗು ತೊರೆದು ಕಾರ್ಯ ನಿರ್ವಹಿಸುವ ಮೂಲಕ ನಿಸ್ವಾರ್ಥ ಸೇವೆ ಸಲ್ಲಿಸಿದ್ದಾರೆ, ಅದೇ ರೀತಿ ಸರಿ ಸುಮಾರು 10 ಸಾವಿರಕ್ಕೂ ಹೆಚ್ಚು ಸಸಿಗಳನ್ನು ವಿತರಣೆ, ಹಾಗೂ ಸಾಕಷ್ಟು ಸಸಿಗಳನ್ನು ನೆಟ್ಟು ಸಾಮಾಜಿಕ ಅರಣ್ಯ ಸಂರಕ್ಷಣೆ ಮಾಡಿದ್ದಾರೆ. ಮತ್ತೊಂದು ವಿಶೇಷ ಸಂಗತಿ ಕಳೆದ ಮೂರು ವರ್ಷಗಳಿಂದ ಉಚಿತವಾಗಿ ಮಣ್ಣಿನಲ್ಲಿ ತಯಾರಿಸಿದ ಐದು ಸಾವಿರ ಗಣೇಶ ಮೂರ್ತಿಗಳನ್ನು ವಿತರಿಸುವ ಮೂಲಕ ಪರಿಸರ ಸ್ನೇಹಿ ಹಬ್ಬವನ್ನು ಆಚರಣೆಗೆ ನಾಂದಿಯಾಯಿತು.
ಈ ಮಹಾಮಂಡಳಕ್ಕೆ ಮತ್ತೊಂದು ಹೆಮ್ಮೆಯ ಸಂಗತಿ ಏನೆಂದರೆ ಎಲ್ಲಾ ಗಣೇಶ ಮಂಡಳಿಯ ರೀತಿಯಲ್ಲಿ ಗಣೇಶನ ಮೂರ್ತಿಯನ್ನು ಪ್ಲಾಸ್ಟರ್ ಆಪ್ ಪ್ಯಾರಿಸ್ ಬದಲಾಗಿ ಶಾಶ್ವತವಾಗಿ ನಿರ್ಮಿಸಿದ ಫೈಬರ್ ಮೂರ್ತಿಯನ್ನು ಕರ್ನಾಟಕದಲ್ಲಿ ಪ್ರಪ್ರಥಮ ಬಾರಿಗೆ ಪ್ರತಿಷ್ಠಾಪನೆ ಮಾಡಿದ್ದು ನಮ್ಮ ಮಹಾಮಂಡಳ ಅನ್ನೋದು ಒಂದು ಹೆಮ್ಮೆಯ ವಿಷಯ, ಹಿಂದೂ ಧರ್ಮದಲ್ಲಿ ಗಣೇಶ ಚತುರ್ಥಿ ಹಬ್ಬದ ಆಚರಣೆಯನ್ನು ಸಾಂಸ್ಕೃತಿಕ ಹಾಗೂ ಪರಿಸರ ಸ್ನೇಹಿ ಗಣೇಶೋತ್ಸವನ್ನು ಈ ನಾಡಿನ ಸಮಸ್ತ ಕನ್ನಡಿಗರು ಆಚರಣೆ ಮಾಡುಬೇಕು ಎಂಬ ಭಾವನೆಯನ್ನು ವ್ಯಕ್ತ ಪಡಿಸಿದರು.
ಈ ಸಂದರ್ಭದಲ್ಲಿ ಈ ಮಹಾಮಂಡಳ ಮಾಜಿ ಅಧ್ಯಕ್ಷರು, ಹಿರಿಯರು ಹಾಗೂ ಪದಾಧಿಕಾರಿಗಳು ಪಾಲ್ಗೊಂಡಿದ್ದರು.
ನೂತನ ಪದಾಧಿಕಾರಿಗಳು
ಅಧ್ಯಕ್ಷರು- ಆನಂದ ಕ ಮುಚ್ಚಂಡಿ
ಕೋಶಾಧ್ಯಕ್ಷರು-ನಿಖೀಲ ಮ್ಯಾಗೇರಿ
ಉಪಾಧ್ಯಕ್ಷರು-ಗಣೇಶ ಹಜೇರಿ,
ಬಸವರಾಜ ದಿಂಡವಾರ,
ವಿನಯ ಬಬಲೇಶ್ವರ,
ಅಕ್ಷಯ ಇಜೇರಿ,
ಮನೋಜ ಶಿಖ್ರೆ,
ಪ್ರಧಾನ ಕಾರ್ಯದರ್ಶಿ-ಪ್ರೇಮ ಬಿರಾದಾರ,
ಸತೀಶ ಗಾಯಕವಾಡ,
ಕಾರ್ಯದರ್ಶಿ-ಸಾಗರ ಶೇರಖಾನೆ,
ಮಂಥನ ಗಾಯಕವಾಡ,
ಸಂತೋಷ ಪತ್ತಾರ,
ಕೃಷ್ಣಾ ಗಾಯಕವಾಡ,
ಸಹ-ಕಾರ್ಯದರ್ಶಿ-ಆಕಾಶ ಬಡಿಗೇರ,
ಪ್ರಸಾದ ಕುಲಕರ್ಣಿ,
ಆಕಾಶ ಮಠಪತಿ,
ಆನಂದ ಬೋವಿ,
ಕಾರ್ಯಕ್ರಮದ ಮುಖ್ಯ ಸಂಚಾಲಕರು-ವಿವೇಕ ತಾವರಗೇರಿ,
ಕಾರ್ಯಕ್ರಮದ ಸಂಚಾಲಕರು-ಮಯೂರ ಕಟ್ಟಿಮನಿ, ಸಾಗರ ಜಾಲಗಾರ,
ಕಾರ್ಯಕ್ರಮದ ಸಹ-ಸಂಚಾಲಕರು- ನವೀನ ಶೇಡಬಾಳ.

