ವಿಜಯಪುರ: ಗ್ರಾಮ ಪಂಚಾಯತಿಗಳಲ್ಲಿ ನಡೆಯುವ ಅವ್ಯವಹಾರ ಹಾಗೂ ಭ್ರಷ್ಟಾಚಾರಗಳನ್ನು ಹಾಗೂ ಅಭಿವೃದ್ದಿ ಕಾಮಗಾರಿಗಳನ್ನು ಅನುಷ್ಟಾನಗೊಳಿಸುವಂತೆ ಮತ್ತು ತಪ್ಪಿತಸ್ಥರ ಮೇಲೆ ಕ್ರಮ ಜರುಗಿಸುವಂತೆ ಆಗ್ರಹಿಸಿ ಜಯ ಕರ್ನಾಟಕ ಸಂಘಟನೆಯ ವತಿಯಿಂದ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾ ಅಧ್ಯಕ್ಷ ಸಂಗಮೇಶ ಎಸ್. ದಾಶ್ಯಾಳ ಮಾತನಾಡಿ, ಸರಕಾರವು ಗ್ರಾಮ ಪಂಚಾಯತಿಗಳಿಂದ ಗ್ರಾಮಗಳ ಅಭಿವೃದ್ದಿ ಆಗಲೆಂದು ನೈರ್ಮಲೀಕರಣ ಹಾಗೂ ನೀರು ನಿರ್ವಹಣೆ ಸೇರಿದಂತೆ ಸಾಕಷ್ಟು ಯೋಜನೆಗಳನ್ನು ರೂಪಗೊಳಿಸಿತು. ಆದರೆ ಯಾವುದೂ ಸರಿಯಾಗಿ ಅನುಷ್ಠಾನೊಂಡಿಲ್ಲ. ಹೆಚ್.ಕೆ.ಪಾಟೀಲ ಗ್ರಾಮೀಣಾಭಿವೃದ್ದಿ ಹಾಗೂ ಪಂಚಾಯತ ರಾಜ್ಯ ಸಚಿವರಾಗಿದ್ದಾಗ ಅವರು ಪಂಚಾಯತಿಗಳಲ್ಲಿ ಭ್ರಷ್ಟಾಚಾರ ನಡೆಯಬಾರದು ಎಂಬ ನಿಟ್ಟಿನಲ್ಲಿ ಒಳ್ಳೆಯ ಯೋಜನೆಗಳನ್ನು ಬೆಳಕಿಗೆ ತಂದಿದ್ದರು. ಅದರೆ ಆ ಯೋಜನೆಗಳು ಪೈಲುಗಳಲ್ಲಿ ಹುದುಗಿಕೊಂಡು ಸರಕಾರದ ಪ್ರತಿ ನಿಧಿಗಳು, ಜನರಿಗೆ ಅನ್ಯಾಯ ಮಾಡಿದ್ದಾರೆ. ಇದಕ್ಕೆ ಉನ್ನತ ಶ್ರೇಣಿಯ ಅಧಿಕಾರಿಗಳು, ಜನಪ್ರತಿನಿಧಿಗಳು ತಲೆಕೆಡಿಸಿಕೊಂಡಿಲ್ಲ. ಈ ಮನವಿಗೆ ಜಿಲ್ಲಾಡಳಿತವು ಸ್ಪಂದಿಸದೇ ಹೋದಲ್ಲಿ ಕಾನೂನು ರಿತ್ಯ ಹೋರಾಟ ಕೈಗೊಳ್ಳಲಾಗುವದು ಎಂದು ಎಚ್ಚರಿಕೆ ನೀಡಿದರು.
ಈ ಸಮಯದಲ್ಲಿ ಪಿಂಟು ಗೊಬ್ಬೂರ, ಮಕದಸ್ ಇನಾಮದಾರ, ರಿಯಾಜ ಪಾಂಡು, ಶಿವನಗೌಡ ಪಾಟೀಲ, ಆನಂದ ಹೊನ್ನೂರ, ಚನ್ನಪ್ಪಗೌಡ ಬಿರಾದಾರ, ಸಂಗಮೇಶ ಹಿರೇಮಠ, ಸಿದರಾಜ ಹೋಳಿ, ರೆಹಮಾನ ಕಣಕಾಲ್, ವಿರೇಶ ಸಿಂಧೂರ, ಶರಣು ಹೂಗಾರ, ಲಿಂಗರಾಜ ಗುರಗುಂಡಿ, ಸುನೀಲ ಗವಾರಿ, ಸುರೇಶಗೌಡ ಇಂಗಳಗೇರಿ, ಸಿದ್ರಾಮಪ್ಪ ಅವಟಿ, ಸಂತೋಷ ಮನಗೂಳಿ, ಸುಜಾತಾ ಪೂಜಾರಿ, ಮಲ್ಲಮ್ಮ ಲಮಾಣಿ, ಬೇಬಿ ತಳವಾರ, ಕವಿತಾ ಅಹೊಳ್ಳಿ, ನಾಗಮ್ಮ ವಾಲಿಕಾರ, ಬಾನು ಹತ್ತರಕಿಹಾಳ, ಕವಿತಾ ಖಿಲಾರಿ, ಅಶ್ವಿನಿ ಸಾವಂತ್ ಇನ್ನಿತರರು ಇದ್ದರು.
Subscribe to Updates
Get the latest creative news from FooBar about art, design and business.
ಗ್ರಾಪಂಗಳಲ್ಲಿ ಭ್ರಷ್ಟಾಚಾರ: ಕಡಿವಾಣಕ್ಕೆ ಜಯ ಕರ್ನಾಟಕ ಆಗ್ರಹ
Related Posts
Add A Comment

