ಮುದ್ದೇಬಿಹಾಳ: ಪಟ್ಟಣದ ಅಂಬೇಡ್ಕರ್ ವೃತ್ತದ ಬಳಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದ್ದು ಇಲ್ಲಿ ಅಲೆದಾಡುವ ಸಾರ್ವಜನಿಕರಿಗೆ ಸಾಕಷ್ಟು ತೊಂದರೆ ನೀಡುತ್ತಿವೆ. ಕೂಡಲೇ ಈ ಬೀದಿ ನಾಯಿಗಳ ಹಾವಳಿಯನ್ನು ಪುರಸಭೆಯವರು ತಡೆಗಟ್ಟಬೇಕು ಎಂದು ಕಸಾಪ ಅಧ್ಯಕ್ಷ ಕಾಮರಾಜ ಬಿರಾದಾರ ಸೇರಿದಂತೆ ಹಲವರು ಒತ್ತಾಯಿಸಿದ್ದಾರೆ.
ಈ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕಳೆದ ಕೆಲವು ದಿನಗಳಿಂದ ಹಲವು ಬೀದಿನಾಯಿಗಳಿಂದ ಸಾರ್ವಜನಿಕರಿಗೆ ಸಾಕಷ್ಟು ತೊಂದರೆ ಆಗುತ್ತಿದೆ. ರಸ್ತೆಯಲ್ಲಿ ಎಲ್ಲಂದರಲ್ಲಿ ಅಲೆದಾಡಿ ವಾಹನ ಸವಾರರಿಗೆ ತೊಂದರೆ ನೀಡುತ್ತಿವೆ. ಕೆಲ ಪಾದಾಚಾರಿಗಳಿಗೆ ಕಚ್ಚಿ ಗಾಯ ಪಡಿಸಿದ ಉದಾಹರಣೆ ಕೂಡ ಇವೆ. ಕಾರಣ ಕೂಡಲೇ ಪುರಸಭೆಯವರು ಸೂಕ್ತ ಕ್ರಮ ಕೈಗೊಳ್ಳುವಂತೆ ತಿಳಿಸಿದರು.
ಮುಖಂಡ ಹುಸೇನ ಮಲ್ಲಾ ಮಾತನಾಡಿ ಚಿಕ್ಕ ಮಕ್ಕಳು, ವಿದ್ಯಾರ್ಥಿಗಳು, ವೃದ್ಧರು ಹೀಗೆ ಹಲವು ಜನರಿಗೆ ಈಗಾಗಲೇ ಬೀದಿ ನಾಯಿಗಳು ಕಚ್ಚಿ ಗಾಯಪಡಿಸಿವೆ. ಪಟ್ಟಣದ ಅಂಬೇಡ್ಕರ ವೃತ್ತ ಪ್ರಮುಖ ಮೂರು ರಸ್ತೆಗಳು ಕೂಡುವ ವೃತ್ತವಾಗಿದ್ದರಿಂದ ದಿನಂಪ್ರತಿ ಬಹಳ ವಾಹನಗಳು ಓಡಾಡುತ್ತವೆ. ಈ ನಾಯಿಗಳು ವಾಹನದ ಮಧ್ಯೆ ಬಂದು ಹಲವು ದ್ವಿಚಕ್ರ ವಾಹನ ಸವಾರರೂ ಬಿದ್ದು ಗಾಯ ಮಾಡಿಕೊಂಡಿದ್ದಾರೆ. ಈ ಭಾಗದಲ್ಲಿನ ಅಂಗಡಿಕಾರರಿಗೂ ಈ ನಾಯಿಗಳು ಸಾಕಷ್ಟು ತೊಂದರೆ ನೀಡುತ್ತಿದ್ದು ಪುರಸಭೆಯವರು ಕೂಡಲೇ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದರು.
ಈ ವೇಳೆ ವೃತ್ತದ ಸಮೀಪದ ಹೊಟೇಲ ಮಾಲೀಕ ಸದಾಶಿವ ಮಠ, ಗ್ಯಾರೇಜ ಮಾಲೀಕ ರವಿ ಅಮರಣ್ಣವರ, ಪ್ರಮುಖರಾದ ಸಂಗಣ್ಣ ಮೇಲಿನಮನಿ ಸೇರಿದಂತೆ ಮತ್ತೀತರರು ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

