ವಿಜಯಪುರ: ಪಿ ಎಸ್ ಟಿ ಶಿಕ್ಷಕರು ಮತ್ತು ಸಂಘಟನೆಗಳು ಒಗಟ್ಟಿನಿಂದ ಹೋರಾಡಿದರೆ ಮಾತ್ರ ಪರಿಹಾರ ಸಾಧ್ಯ ಎಂದು ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ಆನಂದ ಭೂಸನೂರ ಹೇಳಿದರು.
ಸಿಂದಗಿ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಆರೀಫ ಬಿರಾದಾರ ಅವರಿಗೆ ಮನವಿ ಸಲ್ಲಿಸಿ ಮಾತನಾಡಿ “ಪಿ ಎಸ್ ಟಿ ಶಿಕ್ಷಕರಿಗೆ ಆದ ಅನ್ಯಾಯ ವಿರುದ್ದ ನ್ಯಾಯಕ್ಕಾಗಿ ಸಮಾನ ಮನಸ್ಕರ ಪಿ ಎಸ್ ಟಿ ಶಿಕ್ಷಕರು ಮತ್ತು ಸಂಘಟನೆಗಳು ಕುರಿತು ಅವರು ಮಾತನಾಡಿ ಸರಕಾರ
2016 ಕ್ಕಿಂತ ಮುಂಚಿತವಾಗಿ ಒಂದರಿಂದ ಏಳನೇ ತರಗತಿಗೆ ಸಹಶಿಕ್ಷಕರೆಂದು ನೇಮಕಾತಿ ಹೊಂದಿದ ಶಿಕ್ಷಕರನ್ನು ಪಿ ಎಸ್ಟಿ ಎಂದು ಪದನಾಮಕರಣ ಗೊಳಿಸಿ ಒಂದರಿಂದ ಐದನೇ ತರಗತಿಗೆ ಯಾವುದೇ ಸರ್ಕಾರಿ ನೌಕರರಿಗೆ ಇಲ್ಲದ ಹಿಂಬಡ್ತಿ ನೀಡಿದ್ದು ಎಷ್ಟು ಸಮಂಜಸ ಎಂದು ಪ್ರಶ್ನೆ ಮಾಡಿ ಶಿಕ್ಷಕರು 2016ಕ್ಕಿಂತ ಪೂರ್ವದಲ್ಲಿ ಪಿ ಎಸ್ ಟಿ ಶಿಕ್ಷಕರಿಗೆ ಆದ ಅನ್ಯಾಯದ ವಿರುದ್ದ ನ್ಯಾಯಕ್ಕಾಗಿ
ಸರ್ಕಾರದಿಂದ ಆದೇಶ ಆಗುವರಿಗೆ ನಾವು ಹೋರಾಟ ಮಾಡಬೇಕಾಗುತ್ತದೆ.ಪದವಿ ಹೊಂದಿದ ಎಲ್ಲಾ ಸೇವಾನಿರತ ಶಿಕ್ಷಕರನ್ನು ಜಿಪಿಟಿ ಶಿಕ್ಷಕರೆಂದು ಸೇವಾ ಜೇಷ್ಠತೆಯೊಂದಿಗೆ ಪುನರ್ ಪದನಾಮಿಕರಣ ಮಾಡಿ ಜಿಪಿಟಿ ವೃಂದದಲ್ಲಿ ವಿಲೀನಗೊಳಿಸಬೇಕು.
ಈಗಾಗಲೇ ಬಿ.ಇಡಿ ಪದವಿ ಹೊಂದಿದ ಅರ್ಹ ಪ್ರಾಥಮಿಕ ಶಾಲಾ ಶಿಕ್ಷಕರಿಗೆ 2016ರ ಪೂರ್ವದಂತೆ ಅರ್ಹತೆಯ ಆಧಾರದ ಮೇಲೆ ಪ್ರೌಢ ಶಾಲೆಗೆ ಬಡ್ತಿ ನೀಡಬೇಕು.ಪ್ರಾಥಮಿಕ ಶಾಲಾ ಶಿಕ್ಷಕರಿಗೆ 2016ರ ಪೂರ್ವದಂತೆ ಮುಖ್ಯ ಗುರುಗಳ ಹಾಗೂ ಹಿರಿಯ ಮುಖ್ಯ ಗುರುಗಳ ಹುದ್ದೆಗೆ ಸೇವಾ ಜೇಷ್ಠತೆ ಆಧಾರದ ಮೇಲೆ ಬಡ್ತಿ ನೀಡಬೇಕು ಎಂದು ತಾಲೂಕಿನ ಶಿಕ್ಷಕರ ಪರವಾಗಿ ಆಗ್ರಹಿಸಿದರು.ವೃಂದ ಮತ್ತು ನೇಮಕ ನಿಯಮದ ಪೂರ್ವಾನ್ವಯ ಜಾರಿ ನಿರ್ಧಾರವು ರಾಜ್ಯದ ಲಕ್ಷಾಂತರ ಪ್ರಾಥಮಿಕ ಶಾಲಾ ಶಿಕ್ಷಕರ ಭವಿಷ್ಯವನ್ನು ಬುಡಮೇಲು ಮಾಡಿದೆ, ವಿದ್ಯಾರ್ಹತೆ ಪರಿಗಣಿಸದೆ ವಿಷಯವಾರು ಬಡ್ತಿ, ವರ್ಗಾವಣೆಯಲ್ಲಿ ಆಗಿರುವ ಅನ್ಯಾಯದಿಂದ ಲಕ್ಷಕ್ಕೂ ಹೆಚ್ಚು ಪ್ರಾಥಮಿಕ ಶಾಲಾ ಶಿಕ್ಷಕರ ಸ್ಥಿತಿ ಡೋಲಾಯಮಾನವಾಗಿದೆ. ಆಗಸ್ಟ್ 12ರಂದು ರಾಜ್ಯಮಟ್ಟದ ಹೋರಾಟದಲ್ಲಿ ಪಾಲ್ಗೊಂಡು ನ್ಯಾಯಯುತ ಬೇಡಿಕೆ ಈಡೇರಿಸಿಕೊಳ್ಳಲು ನಾವೆಲ್ಲರೂ ಎಚ್ಚೆತ್ತುಕೊಳ್ಳಬೇಕಾಗಿದೆ ಎಂದರು
ಶಿಕ್ಷಕರ ಸಂಘದ ತಾಲೂಕು ಪ್ರಧಾನ ಕಾರ್ಯದರ್ಶಿ ಬಸವರಾಜ ಸೋಮಾಪುರ ಮಾತನಾಡಿ, ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸುವ ಮುನ್ನ ಪ್ರತಿಯೊಬ್ಬ ಪ್ರಾಥಮಿಕ ಶಾಲಾ ಶಿಕ್ಷಕರು ಸ್ವಯಂ ಪ್ರೇರಿತವಾಗಿ ಈ ಒಂದು ನಿರ್ಣಾಯಕ ಹೋರಾಟದಲ್ಲಿ ಪಾಲ್ಗೊಳ್ಳಲೇಬೇಕಾಗಿದೆ. ನಮ್ಮ ಹಕ್ಕಿಗಾಗಿ ನಾವೆಲ್ಲರೂ ಮುಂದಡಿ ಇಡಬೇಕಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಲಕ್ಷ್ಮಣ ಸೊನ್ನ, ಎಸ್ ಎಂ ಮಸಳಿ, ಎಂ.ಎಸ್ ಚೌಧರಿ, ಡಿ. ಎಂ.ಮಾಹುರ, ಬಿ.ಎಸ್ ಹಿರೇಮಠ, ಆರ್ ಬಿ ಇವಣಗಿ, ಜೆ ಬಿ ಭಾಸಗಿ,ಬಿ ಎನ್ ಭಜಂತ್ರಿ, ಎಸ್ ಜಿ ನಾರಾಯಣಕರ,ಎಸ್ ಎಂ ಚಿಗರಿ ಅವರು ಮಾತನಾಡಿ, ಹೋರಾಟದ ಕುರಿತು ತಮ್ಮ ಸಲಹೆ-ಸೂಚನೆಗಳನ್ನು ನೀಡಿದರು.
ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ತಾಲೂಕು ಘಟಕ ಹಾಗೂ ಸಮಸ್ತ ಶಿಕ್ಷಕರ ಬಳಗದಿಂದ ಬೃಹತ್ ಹೋರಾಟದ ಕುರಿತು ಸನ್ಮಾನ್ಯ ಅಶೋಕ ಮನಗೂಳಿ ಶಾಸಕರು ಸಿಂದಗಿ ಮತಕ್ಷೇತ್ರ,
ತಹಶೀಲ್ದಾರರು ಹಾಗೂ ತಾಲೂಕು ದಂಡಾಧಿಕಾರಿಗಳು ಸಿಂದಗಿ, ಸಿಂದಗಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಮುಖಾಂತರವಾಗಿ ಸರ್ಕಾರಕ್ಕೆ ಮನವಿ ನೀಡಿರುವ ಎಸ್ ಐ ರಾಂಪುರ,ಎಸ್ ಎಚ್ ಬಿರಾದಾರ,ವೈ ಬಿ ಬಿರಾದಾರ ತಿಳಿಸಿದರು.
ಈ ಸಂದರ್ಭದಲ್ಲಿ ಹಣಮಂತ ನಾಗಣಸೂರ, ಝೆಡ್ ಎಸ್ ಮನಿಯಾರ, ರಮೇಶ ಅಡಕಿ, ರಾಚಪ್ಪ ಯಾತನೂರ, ವಿಜಯ ಕುಮಾರ ಹಿರೇಮಠ, ಸೂರ್ಯಕಾಂತ ಚೋರಗಸ್ತಿ.ವಿ ಎ ಅಗಸರ, ಡಿ ಎಸ್. ಬಿರಾದಾರ, ಬಸವರಾಜ ಹಳ್ಳಿ, ಹಣಮಂತ ಶಿರಶ್ಯಾಡ ಸೇರಿದಂತೆ ಸುಮಾರು ನೂರಕ್ಕೂ ಹೆಚ್ಚು ಶಿಕ್ಷಕರು ಉಪಸ್ಥಿತರಿದ್ದರು.
Subscribe to Updates
Get the latest creative news from FooBar about art, design and business.
ಶಿಕ್ಷಕರು ಒಗಟ್ಟಿನಿಂದ ಹೋರಾಡಿದರೆ ಮಾತ್ರ ಪರಿಹಾರ ಸಾಧ್ಯ :ಭೂಸನೂರ
Related Posts
Add A Comment

