ಬಸವನಬಾಗೇವಾಡಿ: ಪಟ್ಟಣದ ವಿರಕ್ತಮಠದಲ್ಲಿ ಸೋಮವಾರ ಶ್ರಾವಣ ಮಾಸದಂಗವಾಗಿ ಶ್ರೀಮಠದ ಸಿದ್ದಲಿಂಗ ಸ್ವಾಮೀಜಿಯವರ ಸಾನಿಧ್ಯದಲ್ಲಿ ಕೆಲವರು ಒಂದು ತಿಂಗಳ ಕಾಲ ಶರಣವೃತ ಸ್ವೀಕರಿಸಿದರು.ಬೆಳಗ್ಗೆ ೬ ಗಂಟೆಗೆ ವಿವಿಧ ಶರಣ-ಶರಣೆಯರು ಶ್ರೀಗಳ ಸಾನಿಧ್ಯದಲ್ಲಿ ಲಿಂಗಪೂಜೆ, ವಚನಗಾಯನ, ಅನುಭಾವದೊಂದಿಗೆ ಶರಣ ವೃತ ಸ್ವೀಕರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶ್ರೀಗಳು, ಪವಿತ್ರವಾದ ಶ್ರಾವಣ ಮಾಸದಲ್ಲಿ ಸದ್ವಿಚಾರಗಳನ್ನು ಪ್ರತಿಯೊಬ್ಬರೂ ಆಲಿಸುವ ಜೊತೆಗೆ ದೇಹ,ಮನಸ್ಸು ಪ್ರಸನ್ನವಾಗಿಟ್ಟುಕೊಳ್ಳುವ ಮೂಲಕ ತಮ್ಮ ಜೀವನ ಪಾವನ ಮಾಡಿಕೊಳ್ಳಬೇಕು. ಶ್ರಾವಣ ಮಾಸದಲ್ಲಿ ಶರಣ ವೃತ ಸ್ವೀಕರಿಸುವ ಮೂಲಕ ಬಸವಾದಿ ಪ್ರಮಥರ ವಚನ ಸಾಹಿತ್ಯದ ಓದು, ವಚನ ಗಾಯನ, ವಚನ ಸಾಹಿತ್ಯದ ಅನುಭಾವ ಮಾಡಿಕೊಂಡರೆ ಬದುಕಿಗೆ ದಾರಿ ದೀಪವಾಗುತ್ತದೆ ಎಂದರು.
ಡಾ.ಮಹಾಂತೇಶ ಮಡಿಕೇಶ್ವರ ಅವರು ಅನುಭಾವ ಹಂಚಿಕೊಂಡರು. ಶರಣು ಬಸ್ತಾಳ ಅವರು ವಚನ ಗಾಯನ ಮಾಡಿದರು.
ಈ ಸಂದರ್ಭದಲ್ಲಿ ಎಸ್.ಎಸ್.ಝಳಕಿ, ಎಚ್.ಎಸ್.ಬಿರಾದಾರ, ಸಂಗನಗೌಡ ಚಿಕ್ಕೊಂಡ, ಶಿವಪುತ್ರ ಕೆಂಭಾವಿ, ಸಿ.ಟಿ,ಮಾದರ, ವಿವೇಕಾನಂದ ಕಲ್ಯಾಣಶೆಟ್ಟಿ, ಎಂ.ಜಿ.ಆದಿಗೊಂಡ, ಎಚ್.ಬಿ.ಬಾರಿಕಾಯಿ, ಶಿವರುದ್ರಯ್ಯ ಹಿರೇಮಠ, ವೈ.ಎನ್.ಮಿಣಜಗಿ, ಪ್ರಭಾಕರ ಖೇಡದ, ಕೊಟ್ರೇಶ ಹೆಗ್ಡಾಳ, ಸುಭಾಸ ಹಡಪದ, ಬಿ.ಎಸ್.ಧನಶೆಟ್ಟಿ, ಮಹಾದೇವಿ ಬಿರಾದಾರ, ಸಾವಿತ್ರ ಕಲ್ಯಾಣಶೆಟ್ಟಿ ಇತರರು ಇದ್ದರು. ಶ್ರಾವಣ ಮಾಸದಲ್ಲಿ ಶರಣ ವೃತ ಸ್ವೀಕರಿಸಲು ಬಯಸುವ ಶರಣ-ಶರಣೆಯರು ವಿರಕ್ತಮಠಕ್ಕೆ ಬೆಳಗ್ಗೆ ೬ ಗಂಟೆಗೆ ಬಂದು ಶ್ರೀಗಳಿಂದ ಶರಣ ವೃತ ಸ್ವೀಕರಿಸಬಹುದು ಎಂದು ಪ್ರಭಾಕರ ಖೇಡದ ಹೇಳಿದರು.
Subscribe to Updates
Get the latest creative news from FooBar about art, design and business.
Related Posts
Add A Comment

