ದೇವರಹಿಪ್ಪರಗಿ: ಕುಟುಂಬಗಳಿಗೆ ಆಕಸ್ಮಿಕ ಘಟನೆಗಳಿಂದ ಉಂಟಾದ ನಷ್ಟವನ್ನು ವಿಮೆ ಹಣ ನೆರವು ನೀಡಬಲ್ಲದಾಗಿದೆ ಎಂದು ಕರ್ನಾಟಕ ಬ್ಯಾಂಕ್ ಕಲಬುರ್ಗಿ ವಿಭಾಗೀಯ ಮುಖ್ಯಸ್ಥ ಸೋಮಶೇಖರ ಜಿ. ಹೇಳಿದರು.
ಪಟ್ಟಣದ ಕರ್ನಾಟಕ ಬ್ಯಾಂಕ್ನಲ್ಲಿ ಶುಕ್ರವಾರ ಪಟ್ಟಣದಲ್ಲಿ ಸಂಭವಿಸಿದ ಅಕಾಲಿಕ ಅಪಘಾತಗಳಲ್ಲಿ ಆದ ಜೀವಹಾನಿಗಳ ಸಂಬಂಧಿಗಳಿಗೆ ಚೆಕ್ ವಿತರಿಸಿ ಮಾತನಾಡಿದರು. ವನಿತಾ ಚವ್ಹಾಣ ಇವರಿಗೆ ಕೆಬಿಎಲ್ ಸುರಕ್ಷಾ ವಿಮೆ ಅಡಿಯಲ್ಲಿ ೧೦ ಲಕ್ಷ ಹಾಗೂ ಭಾಗ್ಯಶ್ರೀ ಪತ್ತಾರವರಿಗೆ ನಾಲ್ಕು ಲಕ್ಷ ರೂ.ಗಳ ಮೊತ್ತದ ವಿಮೆ ಚೆಕ್ಗಳನ್ನು ವಿತರಿಸಿ, ಅಕಾಲಿಕ ಅಪಘಾತಗಳಿಂದ ಕುಟುಂಬಗಳಿಗೆ ಆದ ನಷ್ಟವನ್ನು ಯಾವುದರಿಂದಲೂ ತುಂಬಲು ಸಾಧ್ಯವಿಲ್ಲ. ಆದರೆ ವಿಮೆಹಣ ಕುಟುಂಬದ ಭವಿಷ್ಯಕ್ಕೆ ತುಂಬಾ ಸಹಕಾರಿ ಆಗಬಲ್ಲದು. ಆದ್ದರಿಂದ ವಿಮೆಹಣವನ್ನು ಕುಟುಂಬಗಳು ಸದುಪಯೋಗ ಪಡಿಸಿಕೊಂಡು ದು:ಖದಿಂದ ಹೊರಬರುವಂತೆ ಸಾಂತ್ವನ ಹೇಳಿದರು.
ಶಾಖಾ ವ್ಯವಸ್ಥಾಪಕ ಅಯ್ಯಪ್ಪಸ್ವಾಮಿ ಮಠಪತಿ, ಮನೋಜ ಅರ್ಕಸಾಲಿ(ಸಿಂದಗಿ ಶಾಖೆ), ಅತೀಶ ಪಾಟೀಲ, ದೈವೇನಕುಮಾರ, ಮಲ್ಲಿಕಾರ್ಜುನ ಸುಂಕದ, ಫಿರೋಜ್ ಮಕಾಂದಾರ, ಸಿದ್ದು ಬಡಕುರಿ, ರೂಪಾ ಕಂಬಾರ ಗ್ರಾಹಕರಾದ ಸಿದ್ಧನಗೌಡ ಪಾಟೀಲ, ಅಶೋಕ ನಾಡಗೌಡ, ನಾನಾಗೌಡ ಪಾಟೀಲ, ಗುರು ಕರಭಂಟನಾಳ ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

